ಮಂಗಳೂರು: ಸಚಿವ ರಮಾನಾಥ ರೈ 'ಸಾಮರಸ್ಯ ನಡಿಗೆ' ಪಾದಯಾತ್ರೆ ಮಾಡುವ ಬದಲು ತೀರ್ಥಯಾತ್ರೆ ಮಾಡಿದ್ದರೆ ಪುಣ್ಯವಾದರೂ ಸಿಗುತ್ತಿತ್ತು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಟಾಂಗ್ ನೀಡಿದ್ದಾರೆ.ಮಂಗಳೂರಿನಲ್ಲಿ ಸೋಮವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಕೇರಳದಲ್ಲಿ ಹತ್ಯಾಕಾಂಡ ನಡೆಸುತ್ತಿರುವ ಸಿಪಿಐಎಂ ಜತೆ ಸೇರಿ ಸಾಮರಸ್ಯ ಸಾರುತ್ತಿರುವುದು ವಿಪರ್ಯಾಸ ಎಂದು ಅವರು ಕಿಡಿಕಾರಿದರು.
ಸಚಿವ ರೈ ಅಸಮರ್ಥ ಆಡಳಿತವೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಮರಸ್ಯಕ್ಕೆ ತೊಡಕಾಗಿದೆ ಎಂದು ಆರೋಪಿಸಿದ ಅವರು, "ಕೇವಲ ಬಂಟ್ವಾಳ ಕ್ಷೇತ್ರದಲ್ಲಿ ಮಾತ್ರ ಪಾದಯಾತ್ರೆ ನಡೆಸಲು ಸಚಿವರು ಬಂಟ್ವಾಳ ತಾಲೂಕಿನ ಉಸ್ತುವಾರಿ ಸಚಿವರಲ್ಲ; ಇಡೀ ಜಿಲ್ಲೆಯ ಉಸ್ತುವಾರಿ ಸಚಿವರು," ಎಂದು ಆಕ್ರೋಶ ವ್ಯಕ್ತಪಡಿಸಿದರು.