ಮಂಗಳೂರು: ಕೋಮು ಸೂಕ್ಷ್ಮ ಪ್ರದೇಶವಾದ ಕರಾವಳಿಯಲ್ಲಿ ಭಿನ್ನ ಕೋಮಿನ ಪ್ರೇಮಿಗಳ ಮೇಲೆ ನಿಗಾ ಇಡಲು ಹೊಸ ಕಾರ್ಯತಂತ್ರವೊಂದು ಸಿದ್ಧವಾಗಿದೆ.ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲವ್ ಜಿಹಾದ್ ಪ್ರಕರಣಗಳು ನಡೆಯುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿದೆ. ಇಂತಹ ಲವ್ ಜಿಹಾದ್ ನಿಂದ ಹಿಂದೂ ಯುವತಿಯರು ಮೋಸ ಹೋಗದಂತೆ ತಡೆಯುವುದಕ್ಕೆ ಕರಾವಳಿಯಲ್ಲಿ ಟಾಸ್ಕ್ ಫೋರ್ಸ್ ನಿರ್ಮಾಣವಾಗುತ್ತಿದೆ.
ಲವ್ ಜಿಹಾದ್ ತಡೆಗೆ ಮಂಗಳೂರಿನ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ನೇತ್ರತ್ವದಲ್ಲಿ ಹಿಂದೂ ಟಾಸ್ಕ್ ಫೋರ್ಸ್ ರಚನೆಯಾಗಲಿದೆ.ಈ ಟಾಸ್ಕ್ ಫೋರ್ಸ್ ನಲ್ಲಿ ವಕೀಲರು, ಮನಶಾಸ್ತ್ರಜ್ಷರು, ಸಾಮಾಜಿಕ ಕಾರ್ಯಕರ್ತರು ಹಾಗೂ ಹಿಂದೂ ಪರ ಸಂಘಟನೆಗಳ ಯುವಕ ಯುವತಿಯರು ಇರಲಿದ್ದು, ಭಿನ್ನ ಧರ್ಮೀಯ ಪ್ರೇಮಿಗಳ ಮೇಲೆ ಈ ಕಾರ್ಯಪಡೆ ಕಣ್ಣಿಡಲಿದೆ. ಅಂತಹ ಜೋಡಿ ಕಂಡು ಬಂದಲ್ಲಿ ಅವರನ್ನು ಮನಪರಿವರ್ತನೆ ಮಾಡುವ ಮೂಲಕ ಬೇರ್ಪಡಿಸುವುದು ಈ ಟಾಸ್ಕ್ ಫೋರ್ಸ್ ಉದ್ದೇಶ. ಇದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಲಿದೆ ಎಂದು ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ತಿಳಿಸಿದ್ದಾರೆ.