ಮುಂಬಯಿ, ಡಿ.31: ಕೊಂಡೆವೂರಿನ ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠದಲ್ಲಿ ಕಳೆದ ಶನಿವಾರ ಕ್ಷೇತ್ರದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಅವರ ಆಶೀರ್ವಾದದೊಂದಿಗೆ `ಶಿಶುವಾಟಿಕ' ಪುಟಾಣಿಗಳ `ಶಿಶುಸಂಗಮ' ಕಾರ್ಯಕ್ರಮ ಸಂಭ್ರಮದಿಂದ ಜರುಗಿಸಲ್ಪಟ್ಟಿತು.
ಶ್ರೀ ನಿತ್ಯಾನಂದ ಯೋಗಾಶ್ರಮದ ಟ್ರಸ್ಟಿ ಮೋಹನ್ದಾಸ್ ಕೊಂಡೆವೂರು ಅವರು ಬೆಳಗ್ಗೆ ೀಪ ಪ್ರಜ್ವಲನೆಗೈದು ಕಾರ್ಯಕ್ರಮ ಉದ್ಘಾಟಿಸಿದರು. ಶಾಲಾ ಶಿಶುವಾಟಿಕ ಸಮಿತಿಯ ಅಧ್ಯಕ್ಷೆ ಸುಮನ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲ ರಘು ಕೆ.ಎನ್ಹಾಗೂ ಸಮಿತಿ ಸದಸ್ಯೆ ಡಾ| ವಾಣಿಶ್ರೀ ವೇದಿಕೆಯಲ್ಲಿ ಉಪಸ್ಥಿತರಿದ್ದು ಚಿಣ್ಣರಿಗೆ ಶುಭ ಹಾರೈಸಿದರು. ಸುನೀತಾ ಮಾತಾಶ್ರೀ ಸ್ವಾಗತಿಸಿ, ರೇಖಾಪ್ರದೀಪ್ ವಂದಿಸಿದರು. ನಂತರ ಚಿಣ್ಣರು ತಮ್ಮ ಪ್ರತಿಭೆಗಳನ್ನು ಧ್ಯಾನಶ್ಲೋಕ, ಯೋಗಪ್ರದರ್ಶನ, ಸಮೂಹ ನೃತ್ಯ, ಹಾಡುಗಳ ಮೂಲಕ ಪ್ರದರ್ಶಿಸಿದರು.
ಸಮಾರೋಪ ಸಮಾರಂಭವು ಶಾಲಾ ಆಡಳಿತ ಸಮಿತಿ ಅಧ್ಯಕ್ಷ ರಾಮಚಂದ್ರ ಸಿ. ಅಧ್ಯಕ್ಷತೆಯಲ್ಲಿ ನಡೆಯಿತು. ಪ್ರಾಂಶುಪಾಲ ರಘು ಕೆ.ಎನ್, ಸುಮನ ಹಾಗೂ ಮೋಹನ್ದಾಸ್ ಕೊಂಡೆವೂರು ಉಪಸ್ಥಿತರಿದ್ದು ಸ್ಪರ್ಧಾ ವಿಜೇತ ಚಿಣ್ಣರಿಗೆ ಬಹುಮಾನ ವಿತರಿಸಿ ಶುಭಾರೈಸಿದರು. ಮಕ್ಕಳ ಪೆÇೀಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂತಸ ವ್ಯಕ್ತಪಡಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು .
ಕು| ಹರ್ಷಿತಾ ಮಾತಾಶ್ರೀ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಮುಖ್ಯ ಶಿಕ್ಷಕಿ ಪ್ರತೀಭಾ ಶ್ರೀಧರ್ ಸ್ವಾಗತಿಸಿದ್ದು ಕು| ರೇಷ್ಮಾ ಎಸ್.ಮಾತಾಶ್ರೀ ಧನ್ಯವಾದನ್ನಿತ್ತರು.