Friday 19th, April 2024
canara news

ಗಾಳಿಪಟದ ನೂಲು ಸಿಕ್ಕಾಕೊಂಡು ಪ್ರಾಣಪಕ್ಷಿ ಕಳಕೊಂಡ ಪಾರಿವಾಳ

Published On : 03 Jan 2018   |  Reported By : canaranews network


ಪಕ್ಷಿ ಅಂದ ಮಾತ್ರಕ್ಕೆ ಜೀವ ಉಳಿಸಲು ಭಾರತೀಯರು ಅಸಹಾಯಕರೇ..?

ಮುಂಬಯಿ, ಜ.03: ಗಾಳಿಪಟದ ನೂಲು ಸಿಕ್ಕಾಕೊಂಡು ಪಾರಿವಾಳ ಒಂದು ತನ್ನ ಪ್ರಾಣಪಕ್ಷಿ ಕಳಕೊಂಡ ಘಟನೆ ಇಂದಿಲ್ಲಿ ಬೆಳಿಗ್ಗೆ ಅಂಧೇರಿ ಪೂರ್ವದಲ್ಲಿ ನಡೆದಿದೆ. ಬಾಣೆತ್ತರಕ್ಕೆ ಹಾರಿಸಿದ ಗಾಳಿಪಟದ ನೂಲುವೊಂದಕ್ಕೆ ತನ್ನ ಕುತ್ತಿಗೆಗೆ ಸಿಕ್ಕಾಕೊಂಡು ವಿಲವಿಲನೆ ಒದ್ದಾಡಿ ಪಾರಿವಾಳವೊಂದು ಪ್ರಾಣ ಕಳಕೊಳ್ಳುತ್ತಿದ್ದರೆ ಜನರನೇಕರು ಅದರ ಸೊಬಗನ್ನು ಕಣ್ತುಂಬಾ ನೋಡಿ ಆನಂದ ಪಡುತ್ತಿರುವುದು ದುರದೃಷ್ಟವೇ ಸರಿ.

ಪತಂಗದ ದಾರ ಕೊರಳಿಗೆ ಆವರಿಸಿಕೊಂಡು ಪ್ರಾಣಪಕ್ಷಿ ಹಾರುತ್ತಿದ್ದರೆ ಅದರ ಗೋಳನ್ನು ಮನವರಿಯದೆ ಪ್ರಾಣ ಸಂಕಟದಿಂದ ಒದ್ದಾಡುತ್ತಿದ್ದ ಪಾರಿವಾಳವÀನ್ನೇ ಕಂಡು ಸುಮ್ಮಗಾಗುತ್ತಿರುವುದು ಆಶ್ಚರ್ಯವೇ ಸರಿ. ಅದೇ ಜಾಗದಲ್ಲಿ ಮನುಷ್ಯ ಸಿಕ್ಕಾಕಿ ಕೊಂಡಿರುತ್ತಿದ್ದಾರೆ ಜನರು ಬಹು ಸಂಖ್ಯೆಯಲ್ಲಿ ಜಮಾಯಿಸಿ ಬೋರ್ಗರೆದು ರಕ್ಷಣೆಗಾಗಿ ಕರೆಯುತ್ತಾತನ ಪ್ರಾಣ ಉಳಿಸಲು ಪ್ರಯತ್ನಿಸುತ್ತಿದ್ದರೋ ಏನೋ.? ಇದು ಭಾರತ ದೇಶವಾದ ಕಾರಣ ಒಂದು ಜೀವವನ್ನು ಪಕ್ಷಿ ಎಂದ ಮಾತ್ರಕ್ಕೆ ಅದರ ಜೀವ ಉಳಿಸಲು ಬುದ್ಧಿಜೀವಿಗಳು ಅಸಹಾಯಕ ಆಗುತ್ತಿರುವುದು ನಮ್ಮ ದುರದೃಷ್ಟವೇ ಸರಿ. : ರೋನ್ಸ್ ಬಂಟ್ವಾಳ್

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here