ಮುಂಬಯಿ, ಜ.03: ಪ್ರಸ್ತುತ ತುಳು ಕವನಗಳನ್ನು ಬರೆಯುತ್ತಿರುವ ಎಲ್ಲ ತುಳು ಕವಿಗಳ ಪ್ರಾತಿನಿಧಿಕ ಸ್ವರೂಪದ ತುಳು ಕವನ ಸಂಕಲನವೊಂದನ್ನು ಸಂಪಾದಿಸಿ ಪ್ರಕಟಿಸಲು ನಿರ್ಧರಿಸಲಾಗಿದ್ದು, ಈಗ ಕವನಗಳನ್ನು ಬರೆಯುತ್ತಿರುವ ಎಲ್ಲ ತುಳು ಕವಿಗಳು ತಮ್ಮ ಅತ್ಯುತ್ತಮವಾದ ಒಂದು ಕವನವನ್ನು ಫೆಬ್ರವರಿ ದಿನಾಂಕ 5 ರೊಳಗೆ ನನಗೆ ತಲಪುವಂತೆ ಕಳಿಸಿಕೊಡಲು ವಿನಂತಿಸುತ್ತೇನೆ. ಕವನಗಳು ಸ್ವತಂತ್ರವಾಗಿರಬೇಕು ಮತ್ತು ಈ ಹಿಂದೆ ಬೇರೆಲ್ಲೂ ಪ್ರಕಟವಾಗಿರಬಾರದು.
ಹಸ್ತಪ್ರತಿಯಲ್ಲಿ ಪೂರ್ಣ ವಿಳಾಸ, ಫೆÇೀನ್ ಸಂಖ್ಯೆ ಮತ್ತು (ಇದ್ದರೆ) ಇ-ಮೇಲ್ ವಿಳಾಸವನ್ನು ನಮೂದಿಸಬೇಕಾಗಿ ವಿನಂತಿ. ಮಾರ್ಚ್ ತಿಂಗಳಲ್ಲಿ ಪುಸ್ತಕ ಪ್ರಕಟವಾಗಲಿದೆ. ಕವನ ಕಳಿಸಿಕೊಡಬೇಕಾದ ವಿಳಾಸ : ಡಾ. ವಸಂತಕುಮಾರ ಪೆರ್ಲ, ?ಭೂಮಿಗೀತ?, ಕುಂಜತ್ತಬೈಲು, ಮಂಗಳೂರು-575 015. ಇ-ಮೇಲ್ ಮೂಲಕವೂ ಕಳಿಸಬಹುದು.
ಐಡಿ : : vasanthkumarperla@gmail.com
ಡಾ| ವಸಂತಕುಮಾರ ಪೆರ್ಲ ಮಂಗಳೂರು.