ಮಂಗಳೂರು: ಹತ್ಯೆಯಾದ ದೀಪಕ್ ತಾಯಿ ಪ್ರೇಮಲತಾ ಅವರು ಮಾದ್ಯಮದ ಮುಂದೆ ತನ್ನ ಅಳಲು ತೋಡಿಕೊಂಡಿದ್ದಾರೆ. ‘ನನ್ನ ಮಗನಿಗೆ ವಿದೇಶಕ್ಕೆ ಹೋಗುವ ಆಸೆ ಇತ್ತು, ಆದರೆ ಮಗ ಕಣ್ಣೆದುರು ಇರಬೇಕೆಂಬ ಉದ್ದೇಶದಿಂದ ನಾನೇ ವಿದೇಶಕ್ಕೆ ಹೋಗುವುದು ಬೇಡ ಎಂದಿದ್ದೆ. ನಾನು ತಪ್ಪು ಮಾಡಿಬಿಟ್ಟೆ.
ವಿದೇಶಕ್ಕೆ ಹೋಗುತ್ತಿದ್ದರೆ ಅಲ್ಲಿ ಆತ ಸುಖವಾಗಿ ಇರುತ್ತಿದ್ದ . ನಮಗಾಗಿ ಮನೆಯನ್ನು ಕಟ್ಟಿ ಮನೆ ಸಾಲವನ್ನು ತೀರಿಸಿದ್ದ. ನನ್ನ ಮಗ ನನ್ನನ್ನು ಬಿಟ್ಟು ನಮ್ಮನ್ನು ಅನಾಥರನ್ನಾಗಿ ಮಾಡಿ ಹೋದಾ.. ನಾನು ಇನ್ನು ಸಂಜೆ 7 ರ ವೇಳೆಗೆ ಯಾರಿಗಾಗಿ ಕಾಯಲಿ ಕಂದಾ . ಹತ್ಯೆ ಮಾಡಿದ ಪಾಪಿಗಳನ್ನು ಆ ಭಗವಂತ ನೋಡಿಕೊಳ್ಳಲಿ ಎಂದು ಕಣ್ಣೀರಿಟ್ಟರು.