ಮಂಗಳೂರು: ನಾವು ನಮ್ಮ ಸಹೋದರನನ್ನು ಕಳೆದುಕೊಂಡಿದ್ದೇವೆ.. ದಯವಿಟ್ಟು ನನ್ನ ಹಿಂದು,ಮುಸ್ಲಿಂ, ಕ್ರೈಸ್ತ ಬಾಂಧವರೇ ಯಾರು ದಯವಿಟ್ಟು ಗಲಾಟೆ ಮಾಡಬೇಡಿ ಪ್ರತಿಕಾರದ ಮನೋಭಾವನೆ ಬೇಡ..
ಕೊಲೆಗೆ ಕೊಲೆ ಉತ್ತರವಲ್ಲ ಎಂದು ಬಷೀರ್ ಸಹೋದರ ಹಕೀಂ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಅಮಾಯಕ ಜೀವವನ್ನು ಬಲಿ ತೆಗೆದುಕೊಂಡ ದುಷ್ಕರ್ಮಿಗಳನ್ನು ಗಲ್ಲಿಗೇರಿಸಬೇಕು ಎಂದಷ್ಟೇ ನಮ್ಮ ಮನವಿ ಎಂದು ಹೇಳಿದ್ದಾರೆ. ಇತ್ತ, ಬಷೀರ್ ಅವರ ಪುತ್ರ ಇಮ್ರಾನ್ ಕೂಡ ಸಾರ್ವಜನಿಕರಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿಕೊಂಡಿದ್ದಾರೆ.