ಹೇಮಾವತಿ ವಿ. ಹೆಗ್ಗಡೆ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಮಾತಾಜಿಯವರಿಗೆ ಸಿದ್ಧಾಂತ ಚಿಂತಾಮಣಿ ಗ್ರಂಥ ಸಮರ್ಪಿಸಿದರು.
ಉಜಿರೆ: ಆರ್ಯಿಕಾ ಶ್ರೀ 105 ಆದಿತ್ಯ ಶ್ರೀ ಮಾತಾಜಿ, ಆರ್ಯಿಕಾ ಶ್ರೀ 105 ನಿತ್ಯ ಶ್ರೀ ಮಾತಾಜಿ, ಆರ್ಯಿಕಾ ಶ್ರೀ 105 ದೀಪ್ತಿ ಶ್ರೀ ಮಾತಾಜಿ ಮತ್ತು ಆರ್ಯಿಕಾ ಶ್ರೀ 105 ದಿಶಾಶ್ರೀ ಮಾತಾಜಿಯವರು ಧರ್ಮಸ್ಥಳಕ್ಕೆ ಭಾನುವಾರ ಆಗಮಿಸಿ ಬಸದಿಯಲ್ಲಿ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಹಾಗೂ ರತ್ನಗಿರಿಯಲ್ಲಿ ಶ್ರೀ ಬಾಹುಬಲಿಯ ದರ್ಶನ ಮಾಡಿದರು.
ಹೇಮಾವತಿ ವಿ. ಹೆಗ್ಗಡೆಯವರು ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಮಾತಾಜಿಯವರಿಗೆ ಆಹಾರ ದಾನ ಮಾಡಿ ಆಶೀರ್ವಾದ ಮಾಡಿದರು. ಸಿದ್ಧಾಂತ ಚಿಂತಾಮಣಿ ಗ್ರಂಥ ಸಮರ್ಪಿಸಿದರು.
ಮಾತಾಜಿಯವರು ಹಾಸನದ ಮೂಲಕ ಶ್ರವಣಬೆಳಗೊಳಕ್ಕೆ ವಿಹಾರ ಮಾಡಿದರು.