ಮುಂಬಯಿ, ಜ.11: ಇತ್ತಿಚೆಗೆ ಉಡುಪಿಯ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ರಾಜ್ಯದ ಪ್ರತಿಷ್ಠಿತ ನಾಟಕ ಸಂಸ್ಥೆಯಾದ ರಂಗಭೂಮಿ (ರಿ.) ಉಡುಪಿ ಇದರ 52ನೇ ವರ್ಷದ ಹೊಸ ನಾಟಕ `ಐಸಿಯು-ನೋಡುವೆ ನಿನ್ನ' ಪ್ರದರ್ಶನ ಗೊಂಡಿತು.
ಸಾಮಾಜಿಕ ಕಳಕಳಿಯಿಂದ ಕೂಡಿದ ಈ ನಾಟಕ ಯಾಂತ್ರಿಕ ಬದುಕಿನ ಧಾವಂತದ ನಡುವೆ ನಯವಾದ, ಕೋಮಲವಾದ, ನಾಜೂಕಾದ ನವಿರು ನವಿಲುಗರಿಯಂಥ ಹೃದಯದ ಕಣ್ಣುಗಳನ್ನೇ ಮುಚ್ಚಿಕೊಳ್ಳುತ್ತಾ ಎಲ್ಲರ ನಡುವೆಯಿದ್ದರೂ ಪ್ರತ್ಯೇಕ ದ್ವೀಪವಾಗಿ ಬಿಡುವ ಭಾವಹೀನ ಮನುಷ್ಯರು ಇಲ್ಲಿ ಕಾಣಿಸುತ್ತಾರೆ.
ಕನ್ನಡ ನಾಡಿನ ಮಂಗಳಮುಖಿ `ಕಾಜಲ್' ಪ್ರಥಮ ಬಾರಿಗೆ ರಂಗಭೂಮಿಯಲ್ಲಿ ರಂಗಪ್ರವೇಶ ಮಾಡಿದರು. ಈ ನಾಟಕವನ್ನು ರವಿರಾಜ್ ಹೆಚ್.ಪಿ. ನಿರ್ದೇಶಿಸಿದ್ದು ಶಶಿರಾಜ್ ಕಾವೂರು ರಚಿಸಿರುತ್ತಾರೆ. ಸಂಗೀತವನ್ನು ಗೀತಂ ಗಿರೀಶ್ ನೀಡಿರುತ್ತಾರೆ.