Tuesday 23rd, April 2024
canara news

ಬೃಹನ್ಮುಂಬಯಿನಲ್ಲಿ ಉದ್ಘಾಟನೆಗೊಂಡ ಹೊರನಾಡ ಕನ್ನಡಿಗರ ದ್ವಿತೀಯ ರಾಷ್ಟ್ರೀಯ ಸಮಾವೇಶ

Published On : 11 Feb 2018   |  Reported By : Rons Bantwal


ಮುಂಬಯಿಗರು ಭವ್ಯ ಮನೋಭಾವ ಉಳ್ಳವರು: ಡಾ| ಎಸ್.ಎಲ್ ಭೈರಪ್ಪ

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)


ಮುಂಬಯಿ, ಫೆ.10: ಲೇಖಕರು ಜಾತಿ ರಾಜಕೀಯವನ್ನು ಬಿಟ್ಟು ಬೆಳೆಯುವ ಅಗತ್ಯವಿದ್ದು ಅದರಲ್ಲೂ ಕನ್ನಡದ ಲೇಖಕರೆಲ್ಲರೂ ಒಳನಾಡ ಮಟ್ಟ ಮೀರಿ ಬೆಳೆಯಬೇಕು. ಒಂದು ಮಿತಿಯೊಳಗಿನ ಲೇಖಕರಿಂದ ಏನನ್ನೂ ಅಪೇಕ್ಷಿಸಲಾಗದು. ಹೇಗೆ ಮುಂಬಯಿ ಜಾತಿ ಮುಕ್ತವಾಗಿದ್ದು ಇಲ್ಲಿನ ಹೊರನಾಡ ಕನ್ನಡಿಗರು ಬರೇ ಕಾಯಕ ಚಿತ್ತರಾಗಿ ಪರಿಶ್ರಮಿಗಳಾಗಿ ದುಡಿಸಿಕೊಂಡು ಬದುಕು ರೂಪಿಸುತ್ತಿದ್ದರೋ ಅಂತೆಯೇ ಒಳನಾಡ ಜನತೆಯೂ ಇದನ್ನು ಅರ್ಥೈಸಿ ಬದುಕು ರೂಪಿಸಿಕೊಳ್ಳುವ ಅಗತ್ಯವಿದೆ. ಆದುದರಿಂದ ಮುಂಬಯಿಗೆ ಬರುವುದೇ ಆಸಕ್ತಿಯಾಗಿ ದೆ. ಕಾರಣ ಮುಂಬಯಿ ಇಡೀ ಭಾರತದ ಚಿತ್ರಣವಾಗಿದೆ. ಮುಂಬಯಿನಲ್ಲಿ ಬೆಳೆದವರ ಮನೋಭಾವ ಭವ್ಯವಾಗಿರುತ್ತದೆ. ಆದರೆ ಒಳನಾಡ ಕನ್ನಡಿಗರ ಮನೋಭಾವ ಬೇರೆಯೇ ಆಗಿದೆ. ಮಾಯಾನಗರಿಯೊಂದು ಅನುಭವ ನಗರವಾಗಿ ಮಾನವಕುಲ ನಿರ್ಮಾಣದ ಶಹರವಾಗಿದೆ ಎಂದು ನಾಡಿನ ಹಿರಿಯ ಸಾಹಿತಿ, ಪ್ರಸಿದ್ಧ ಕಾದಂಬರಿಕಾರ ನಾಡೋಜ ಡಾ| ಎಸ್.ಎಲ್ ಭೈರಪ್ಪ ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಮತ್ತು ಮುಂಬಯಿ ಹಾಗೂ ಉಪನಗರಗಳಲ್ಲಿನ ವಿವಿಧ ಕನ್ನಡ ಸಂಸ್ಥೆಗಳ ಒಗ್ಗೂಡುವಿಕೆಯಲ್ಲಿ ಅಂಧೇರಿ ಪಶ್ಚಿಮದಲ್ಲಿನ ಮೊಗವೀರ ಭವನದ ಎಂವಿಎಂಸ್ ಶ್ರೀಮತಿ ಶಾಲಿನಿ ಜಿ ಶಂಕರ್ ಕನ್ವೇಕ್ಷನ್ ಸೆಂಟರ್ ಸಭಾಗೃಹದಲ್ಲಿ ಆಯೋಜಿಸಲಾಗಿರುವ ಎರಡು ದಿನಗಳ ಹೊರನಾಡ ಕನ್ನಡಿಗರ ದ್ವಿತೀಯ ರಾಷ್ಟ್ರೀಯ ಸಮಾವೇಶ ಉದ್ಘಾಟಿಸಿ ಡಾ| ಭೈರಪ್ಪ ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಇದರ ಅಧ್ಯಕ್ಷ ಡಾ| ಮನು ಬಳಿಗಾರ್ ರಾಷ್ಟ್ರೀಯ ಸಮಾವೇಶದ ಅಧ್ಯಕ್ಷತೆ ವಹಿಸಿ ಬೃಹನ್ಮುಂಬಯಿ ಕನ್ನಡ ಸಾಹಿತ್ಯ ಪರಿಷತ್ ಘಟಕಕ್ಕೆ ಚಾಲನೆಯನ್ನಿತ್ತರು. ನಾಮಾಂಕಿತ ಅಂಕಣಕಾರ ಎಸ್.ಷಡಕ್ಷರಿ, ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಅಧ್ಯಕ್ಷ ಕೃಷ್ಣಕುಮಾರ್ ಎಲ್.ಬಂಗೇರ ಅತಿಥಿüಗ ಳಾಗಿದ್ದು, ಅಭ್ಯಾಗತರಾಗಿ ಉಪಸ್ಥಿತ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾ ನ್ ನೆನಹೊತ್ತಿಗೆ ಬಿಡುಗಡೆ ಗೊಳಿಸಿದರು.

ಮುಂಬಯಿಗರಿಗೆ ಭಾರತದ ಸಮಗ್ರ ಪರಿಚಯವಿದ್ದು ಇಡೀ ಮುಂಬಯಿ ಭಾರತಕ್ಕೆ ಸೇರಿದೆ. ಅದರಲ್ಲೂ ಕರಾವಳಿ ಜನರಂತೂ ತುಂಬಾ ಬುದ್ಧಿüವಂತರು. ಕರಾವಳಿಯಲ್ಲಿನ ಬಡತನವೆÉುೈವರನ್ನು ಮುಂಬಯಿಗೆ ತಳ್ಳಿತ್ತು ಎಂದಾದರೂ ಇಲ್ಲೀ ಕಷ್ಟಪಟ್ಟು ದುಡಿದು ಆತ್ಮವಿಶ್ವಾಸ ಬೆಳೆಸಿಕೊಂಡ ಕರಾವಳಿ ಕನ್ನಡಿಗರು ಬರೇ ನೌಕರಿಯನ್ನೇ ಅವಲಂಬಿಸದೆ ಸ್ವಯಂಶೀಲ ಉದ್ಯಮಿಗಳಾಗಿ ಬೆಳೆದಿದ್ದಾರೆ. ಅವರು ದುಡಿಮೆಯನ್ನು ಪ್ರೀತಿಸಿ ಪೆÇೀಷಿಸುತ್ತಾರೆ. ಭಾಷಾಭಿಮಾನ ಬೆಳೆಸಿ ಬಾಳುತ್ತಾರೆ. ಸಂಸ್ಕೃತಿ, ಶಿಸ್ತು, ಸಂಸ್ಕಾರಕ್ಕೆ ಕರ್ನಾಟಕದ ಕರಾವಳಿ ಜನರೇ ಮಾದರಿ. ಅವರ ಜೀವನ ಅನುಸರಿಸಿದಾಗ ರಾಷ್ಟ್ರದ ಉದ್ಧಾರ ಸಾಧ್ಯ. ಆ ಮಟ್ಟಿಗೆ ಕರಾವಳಿ ಜನತೆ ಬುದ್ಧಿವಂತರು. ಆದರೆ ಇತ್ತೀಚೆಗೆ ಕರಾವಳಿಯಲ್ಲೂ ಅಸಂಸ್ಕೃತಿಯ ಕೆಟ್ಟ ರೋಗ ಆವರಿಸುತ್ತಿರುವುದು ದುರದೃಷ್ಟ. ಕರಾವಳಿ ಜನತೆಯವರಿಂದಲೇ ಭವ್ಯ ಪರಂಪರೆ ಸಂಸ್ಕೃತಿ ನಿರ್ಮಾಣ ಸಾಧ್ಯವಾಗುವುದು. ನಮ್ಮವರಲ್ಲಿ ನುಡಿಯುವ ಕನ್ನಡ ಮಾತ್ರ. ಆದರೆ ನುಡಿದಂತೆ ನಡೆಯುವ ಕನ್ನಡಿಗರು ನಮ್ಮವರಾಗಬೇಕು. ನೌಕರಿಗಾಗಿ ಇಂಗ್ಲೀಷ್ ವ್ಯಾಮೋಹಿಗಳಾದರೂ ಕರಾವಳಿ ಜನತೆ ಇಂಗ್ಲೀಷ್ ಬಳಕೆಯೊಂದಿಗೆ ಮಾತೃ ಭಾಷಾಭಿಮಾನ ಬೆಳೆಸಿದ್ದಾರೆ. ಸ್ವಂತ ದುಡಿಮೆಗಾರರಿಗೆ ಆತ್ಮ ವಿಶ್ವಾಸ ತಮ್ಮತನ ಇರುತ್ತದೆ. ಮುಂಬಯಿಯಲ್ಲೂ ಇಂತಹ ಭಾಷಾಭಿಮಾನಿಗಳಿಂದ ಸಂಸ್ಕೃತಿ ಉಳಿಸಲು ಸಾಧ್ಯವಾಗಿದೆ.

ನೌಕರಿ ಮನೋಭವಿಗಳಿಂದ ಸಂಸ್ಕೃತಿ, ಪರಂಪರೆಗಳ ಉಳಿವು ಅಸಾಧ್ಯ. ಮುಂಬಯಿ ಭಾರತದ ಲವಲವಿಕೆಯ ಪಟ್ಟಣವಾಗಿದ್ದು ಇಲ್ಲಿ ದುಡಿಮೆಗೆ ಪ್ರಶಸ್ತ್ಯವಿದೆ. ಅದರಲ್ಲೂ ನಗರದ ಸ್ಥಾನೀಯ ಜನಶಕ್ತಿಯ ದುಡಿಮೆಯಿಂದ ಬೆಳೆದ ಪಟ್ಟಣ ಮುಂಬಯಿ ಆಗಿದ್ದರೆ ದೆಹಲಿ ಕರ ತೆರುವವರ (ಟ್ಯಾಕ್ಸ್ ಪೇಯರ್) ನಾಡಾಗಿದ್ದು ಇಲ್ಲಿ ಸಸ್ಕೃತಿಯ ಉಳಿವು ಅಸಾಧ್ಯ. ಕಷ್ಟಪಟ್ಟು ದುಡಿಯದೆ ಮಾತ್ರ ಮನಕುಲದ ಉದ್ಧಾರ ಸಾಧ್ಯವಾಗುವುದು. ಲೋಕದ ಹೊಸ ಅನುಭವಕ್ಕೆ ನಾವೂ ಅಣಿಯಾಗಬೇಕು. ಅಂತಹ ಸಾಹಿತಿಗಳು ಸಮಾಜಕ್ಕೆ ಒಳಿತನ್ನು ಸೃಷ್ಟಿಸಬಲ್ಲರು. ಹಿರಿಯರ ಮಾದರಿ ಕೆಲಸ ಜ್ಞಾಪಿಸಿ ಸಂಸ್ಥೆಗಳನ್ನು ಮುನ್ನಡೆಸಬೇಕು. ಇಂತಹ ಸಾಮಾಜಿಕ ಕ್ರಾಂತಿ ಮಹಾರಾಷ್ಟ್ರ, ಮುಂಬಯಿಯಲ್ಲಿದೆ. ಇನ್ನಾದರೂ ಕನಸನ್ನು ವಾಸ್ತವತೆಯನ್ನಾಗಿಸಿರಿ ಬಾಳುತ್ತಾ ಕನ್ನಡದ ಕಲ್ಪನೆಗಳ ಕಾಯಕವನ್ನು ನಿಜವಾಗಿ ಮೂಡಿಸೋಣ ಎಂದು ಭೈರಪ್ಪ ಕರೆಯಿತ್ತರು.

ಷಡಕ್ಷರಿ ಮಾತನಾಡಿ ಮುಂಬಯಿಗರದ್ದು (ಸುನೀತಾ ಶೆಟ್ಟಿ ನಿಮ್ಮದು) ಅಚ್ಚಕನ್ನಡ ಆದರೆ ಬೆಂಗ್ಳೂರುಗರದ್ದು ಫ್ಯೂರ್ ಕನ್ನಡ. ಆದುದರಿಂದ ಮುಂಬಯಿಗರು ಕನ್ನಡ ಮರೆಯದ ಬಂಧುಗಳಾಗಿ ಬಾಳುತ್ತಿದ್ದು ನಿಮ್ಮ ಕನ್ನಡ ಬಳಕೆ ಸ್ತುತ್ಯರ್ಹ. ತಮ್ಮಿಂದಲೇ ಕನ್ನಡವನ್ನು ಅತೀ ಎತ್ತರಕ್ಕೆ ಕೊಂಡೊಯ್ಯಲು ಸಾಧ್ಯ. ಇದನ್ನೇ ಒಳನಾಡ ಕನ್ನಡಿಗರು ಗಾಡ್ ಪ್ರಾಮಿಸ್ ಸರ್... ಅನ್ನುತ್ತಿದ್ದರು. ಬೆಳಿಗ್ಗಿನೊಂದಲೇ ಇಷ್ಟೊಂದು ಸಂಖ್ಯೆಯಲ್ಲಿ ಅಬ್ಬರದಿಂದ ಸೇರಿದ ನಿಮ್ಮ ಹಬ್ಬದ ಉತ್ಸಹ ಕಂಡಾಗ ಏನೋ ಮಗಳ ಮದುವೆ ರಿಶೆಪ್ಶನ್ ತರಹ ಭಾಸವಾಗುತ್ತಿತ್ತು. ಸಮಾವೇಶವನ್ನು ಒಳ್ಳೆ ಸಂಭ್ರಮವಾಗಿಸಿರುವುದು ಪ್ರಶಂಸನೀಯ ಎಂದರು.

ಬೃಹನ್ಮುಂಬಯಿ ಕಸಾಪ ಘಟಕಕ್ಕೆ ಚಾಲನೆಯನ್ನಿತ್ತ ಡಾ| ಬಳಿಗಾರ್ ಘಟಕದ ಪ್ರಥಮ ಅಧ್ಯಕ್ಷರನ್ನಾಗಿ ಡಾ| ಗಣಪತಿ ಶಂಕರಲಿಂಗ ಅವರಿಗೆ ಕನ್ನಡದ ಧ್ವಜವನ್ನಿತ್ತು ಅಧಿಕಾರವನ್ನಿತ್ತರು. ಕಾರ್ಯದರ್ಶಿಗಳಾಗಿ ಡಾ| ಭರತ್‍ಕುಮಾರ್ ಪೆÇಲಿಪು, ಮಲ್ಲಿನಾಥ ಜಲದೆ, ಕೋಶಾಧಿಕಾರಿಯಾಗಿ ಮಂಜುನಾಥ ದೇವಾಡಿಗ, ಮಹಿಳಾ ಪ್ರತಿನಿಧಿಯಾಗಿ ಡಾ| ಸುನೀತಾ ಎಂ.ಶೆಟ್ಟಿ, ಪರಿಶಿಷ್ಟ ಜಾತಿ ಪ್ರತಿನಿಧಿಯಾಗಿ ಪಿ.ಎಂ ಕರನಿಂಗ ಅವರಿಗೆ ಹುದ್ದೆ ಆಯ್ಕೆಪತ್ರವನ್ನಿತ್ತರು.

ಡಾ| ಬಳಿಗಾರ್ ಮಾತನಾಡಿ ಬೃಹನ್ಮುಂಬಯಿ ಕಸಾಪ ಘಟಕಕ್ಕೆ ಜಿಲ್ಲಾ ಮಟ್ಟದ ಮಾನ್ಯತೆ ನೀಡಿದೆ. ಮುಂಬಯಿಗರಲ್ಲಿ ಶ್ರೀಮಂತರ ಹೆಸರುಗಳೇ ಹೆಚ್ಚಿದ್ದು ಹೆಚ್ಚಿನವರು ಕೋಟ್ಯಾಧಿಪತಿಗಳೇ. ಶೀಗ್ರವೇ ಕಸಾಪ ಪ್ರದೇಶ ವ್ಯಾಪ್ತಿ ವಿಸ್ತಾರಿಸಲಾಗಿ ಕನ್ನಡ ಕೆಲಸ ಮುನ್ನಡೆಸಲಾಗುವುದು. ಕನ್ನಡಿಗರೆಲ್ಲರಿಗೂ ಸರ್ವ ಶುಭವಾಗಲಿ ಎಂದರು.

ಹಿರಿಯ ಸಾಹಿತಿ ಡಾ| ಸುನೀತಾ ಎಂ.ಶೆಟ್ಟಿ ಭೂಮಿಗ್ ಖೆಡ್ಡಸ ಬಂತ್ತ್‍ಂಡ್‍ಯೇ... ಖೆಡ್ಡಸ ಬಂತ್ತ್‍ಂಡ್ ಎಂದು ಹಾಡಿನೊಂದಿಗೆ ಆರಂಭಿಸಿ ಕನ್ನಡದ ನಡುವೆ ಇದೇನು ತುಳು ಹಾಡು ಎನ್ನುವ ಆತಂಕಬೇಡ. ಹಬ್ಬಕ್ಕೆ ಖೆಡ್ಡಸ ಎಂದಥರ್À. ಅಂತೆಯೇ ಸಮಾವೇಶದ ಹೊಸ ಸೃಷ್ಟಿಗೆ ಅಣಿಯಾದ ಪರ್ವ ಕಾಲ ಇದಾಗಿದೆ. ಇಂತಹ ಸಮಾವೇಶ ಮುಂಬಯಿಗರ ಯೋಗಾಯೋಗ. ನಮ್ಮಲ್ಲಿ ರಾಜಕೀಯವಾಗಿ ಗಡಿರೇಖೆ ಇದ್ದಿರಬಹುದು. ಆದರೆ ಮಾನಸಿಕವಾಗಿ ಸೀಮಾ ರೇಖೆ ಪ್ರೆಶ್ನೆಯಾಗÀದು. ನಾವು ಭಾರತೀಯರೆಲ್ಲರೂ ಒಂದೇ ಭೂಮಿ ಸಂಬಂಧಿಗಳು. ಆದುದರಿಂದ ಹೊರನಾಡಿನ ಕನ್ನಡಿಗರೆಲ್ಲರೂ ಒಳಮುಖವಾಗಿ ಕ್ರಿಯಾಶೀಲರಾಗಿ ನಡೆಯುವಂತಾಗಬೇಕು ಎಂದÀು ಆಶಯ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಕಸಾಪ ಗೌರವ ಕಾರ್ಯದರ್ಶಿ ವ.ಚ.ಚನ್ನೇಗೌಡ, ಗೌರವ ಕೋಶಾಧಿಕಾರಿ ಪಿ. ಮಲ್ಲಿಕಾರ್ಜುನಪ್ಪ, ಬಸವರಾಜ ಮಸೂತಿ ಆಸೀನರಾಗಿದ್ದು, ವಿದುಷಿ ಶ್ಯಾಮಲಾ ರಾಧೇಶ್ ತಂಡದ ನಾಡಗೀತೆಯೊಂದಿಗೆ ಸಮಾವೇಶ ಆದಿಗೊಂಡಿತು. ಡಾ| ಬಿ.ಆರ್ ಮಂಜುನಾಥ್ ಸ್ವಾಗತಗೀತೆಯನ್ನಾಡಿದರು. ಕೃಷ್ಣಕುಮಾರ್ ಬಂಗೇರ ಸ್ವಾಗತಿಸಿ ಪ್ರಸ್ತಾವನೆಗೈದÀರು. ಪತ್ರಕರ್ತ ದಯಾಸಾಗರ್ ಚೌಟ ಕಾರ್ಯಕ್ರಮ ನಿರೂಪಿಸಿದರು. ಮೈಸೂರು ಅಸೋಸಿಯೇಶÀನ್ ಮುಂಬಯಿ ಅಧ್ಯಕ್ಷೆ ಕು| ಕಮಲಾ ಕಾಂತರಾಜ್ ಕೃತಜ್ಞತೆ ಸಲ್ಲಿಸಿದರು.

ಮೊಗವೀರ ಮಂಡಳಿಯ ಲಕ್ಷಿ ್ಮೀ ನಾರಾಯಣ ಮಂದಿರದಿಂದ ಭವ್ಯ ಮೆರವಣಿಗೆ ಮೂಲಕ ಅತಿಥಿüಗಳನ್ನು ಸಭಾಗೃಹÀಕ್ಕೆ ಬರಮಾಡಿ ಕೊಳ್ಳಲಾಯಿತು. ಬಳಿಕ ಡಾ| ಭೈರಪ್ಪ ಮುಂಬಯಿ ಕನ್ನಡಿಗರ ಸಾಧನ ಮಂಟಪ (ಸಘಸಂಸ್ಥೆಗಳ ಸೇವಾ ವೈಖರಿಗಳ ಚಿತ್ರಪ್ರದರ್ಶನ) ಉದ್ಘಾಟಿಸಿದರು. ಚಿಣ್ಣರ ಬಿಂಬ ತಂಡದ ಕಲಾವಿದರು, ಮೊಗವೀರ ವ್ಯವಸ್ಥಾಪಕ ಮಂಡಳಿಯ ಶಾಲಾ ವಿದ್ಯಾಥಿರ್üಗಳು, ಹಾಗೂ ವಿದ್ಯಾ ಪ್ರಸಾರಕ ಮಂಡಳಿಯ ಶಾಲಾ ವಿದ್ಯಾಥಿರ್üಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು.ಡಾ| ವಾಣಿ ಉಚ್ಚಿಲ್ ಮತ್ತು ಶೇಖರ್ ಅವಿೂನ್ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಾಹಿಸಿದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here