ಮುಂಬಯಿ, ಫೆ.22: ಸಾಂತಕ್ರೂಜ್ ಪೂರ್ವದ ಕಲೀನಾ ಅಲ್ಲಿನ ಹೊಟೇಲ್ ವಿಹಾರ್ ಮಾಲೀಕ, ಕೊಡುಗೈದಾನಿ, ಸಮಾಜ ಸೇವಕ ವಾಸು ಪಿ.ಶೆಟ್ಟಿ (65.) ಅವರು ಇಂದಿಲ್ಲಿ (ಫೆ.22) ಗುರುವಾರ ಸ್ವನಿವಾಸದಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾದರು.
ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ಪೆರಿಂಜೆ ತಿರುಮಲಬೆಟ್ಟು ಮನೆಯವರಾಗಿದ್ದ ವಾಸು ಶೆಟ್ಟಿ ಅವರು ಖಾರ್ ಪೂರ್ವದ ಜವಹಾರ್ನಗರ್ನ ಶ್ರೀ ಶನಿ ಮಹಾತ್ಮ ಸೇವಾ ಸಮಿತಿಯ ವಿಶ್ವಸ್ಥ ಸದಸ್ಯ ಹಾಗೂ ಅಜೀವ ಸದಸ್ಯರೂ ಸೇರಿದಂತೆ ಹಲವಾರು ಸಂಘ-ಸಂಸ್ಥೆಗಳಲ್ಲಿ ಸೇವಾ ನಿರತರಾಗಿದ್ದರು.
ಮೃತರು ಪತ್ನಿ, ಒಂದು ಪುತ್ರ, ಒಂದು ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.