Thursday 25th, April 2024
canara news

`ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿ ಪ್ರಶಸ್ತಿ-2018' ಮುಡಿಗೇರಿಸಿದ ಎನ್.ಎಸ್ ಹೆಗಡೆ

Published On : 26 Feb 2018   |  Reported By : Rons Bantwal


ಮನುಷ್ಯ ಮೊದಲು ದ್ವೇೀಷ ರಹಿತನಾಗಬೇಕು : ಡಾ| ಸುರೇಶ್ ರಾವ್ ಕಟೀಲು
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಫೆ.25: ಸಮಾಜ ಸರ್ವತೋಮುಖ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿ ಸಾಧನೆಗೈದ ಕುಂದರಗಿ ಅವರು ನಿಜಕ್ಕೂ ಅಭಿನಂದನಾರ್ಹರು. ಸರಕಾರವೇ ಗುರುತಿಸುವಂತಹ ಕಾರ್ಯ ಮಾಡಿದ್ದಾರೆ. ಹವ್ಯಕ ವೆಲ್ಫೇರ್ ಕರ್ಕಿ ಪ್ರಶಸ್ತಿ ಮೂಲಕ ವಿಶೇಷ ಗೌರವಕ್ಕೆ ಪಾತ್ರವಾಗಿದೆ. ಮನುಷ್ಯ ಮೊದಲು ದ್ವೇೀಷವನ್ನು ಬಿಡಬೇಕು. ಲೋಕಕ್ಕೆಒಳ್ಳೆಯದಾಗಲಿ ಎಂದು ಹಾರೈಸುವ ಮನಸ್ಸು ಮಾಡಬೇಕು. ಲೋಕದ ಏಳಿಗೆಯನ್ನೇ ಮುಖ್ಯ ಗುರಿಯಾಗಿಸಿ ಬದುಕುತ್ತಿರುವವರು ಎಲ್ಲರನ್ನು ಪ್ರೀತಿಸುತ್ತಿರುವ ಕುಂದರಗಿ ಅಂತಹ ಹಿರಿಯರು ಅಖಂಡ ಸಮಾಜದ ಹಿರಿಮೆಯಾಗಿದ್ದಾರೆ ಎಂದು ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಸಲಹಾ ಸಮಿತಿ ಸದಸ್ಯ, ಬಿಎಸ್‍ಕೆಬಿ ಅಸೋಸಿಯೇಶನ್ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ತಿಳಿಸಿದರು.

 

ಹವ್ಯಕ ವೆಲ್ಫೇರ್ ಟ್ರಸ್ಟ್ ಮುಂಬಯಿ ಸಂಸ್ಥೆ ಇಂದಿಲ್ಲಿ ಆದಿತ್ಯವಾರ ಪೂರ್ವಾಹ್ನ ಘಾಟ್ಕೋಪರ್ ಪಶ್ಚಿಮದಲ್ಲಿನ ಹವ್ಯಾಕ ಸಭಾಗೃಹದಲ್ಲಿ ಪ್ರದಾನಿಸಿದ ವಾರ್ಷಿಕ `ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿ ಪ್ರಶಸ್ತಿ-2018' ಪುರಸ್ಕಾರ ಸಮಾರಂಭದಲ್ಲಿ ಮುಖ್ಯ ಅತಿಥಿüಯಾಗಿ ಉಪಸ್ಥಿತರಿದ್ದು ದೀಪ ಪ್ರಜ್ವಲಿಸಿ ಸಮಾರಂಭ ಉದ್ಘಾಟಿಸಿ ಡಾ| ಸುರೇಶ್ ರಾವ್ ಮಾತನಾಡಿದರು.

ಕರ್ನಾಟಕ ಮಲ್ಲ ದೈನಿಕದ ಸಹಯೋಗದೊಂದಿಗೆ ನಡೆಸಲ್ಪಟ್ಟ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಟ್ರಸ್ಟ್‍ನ ಅಧ್ಯಕ್ಷ ಶಿವಕುಮಾರ್ ಪಿ.ಭಾಗವತ್ ಅಧ್ಯಕ್ಷತೆ ವಹಿಸಿದ್ದು ಗೌರವ ಅತಿಥಿüಗಳಾಗಿ ಪತ್ರಕರ್ತ ಶ್ರೀನಿವಾಸ ಜೋಕಟ್ಟೆ, ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಮಂಡಳಿ ಸಲಹಾಗಾರ ಡಾ| ಆರ್.ಎನ್ ಬಂಡೀಮನೆ, ಟ್ರಸ್ಟ್‍ನ ಉಪಾಧ್ಯಕ್ಷ ಸಂಜಯ ಭಟ್, ಗೌರವ ಪ್ರಧಾನ ಕಾರ್ಯದರ್ಶಿ ನಾರಾಯಣ ಆರ್.ಅಕದಾಸ, ಗೌರವ ಕೋಶಾಧಿಕಾರಿ ಎ.ಜಿ ಭಟ್ ಉಪಸ್ಥಿತರಿದ್ದು ಅತಿಥಿüಗಳು ವಾರ್ಷಿಕ `ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿ ಪ್ರಶಸ್ತಿ'ಯನ್ನು ಹಿರಿಯ ಪತ್ರಕರ್ತ, ಲೇಖಕ ಎನ್.ಎಸ್ ಹೆಗಡೆ ಕುಂದರಗಿ ಅವರಿಗೆ ಪ್ರದಾನಿಸಿ ಅಭಿನಂದಿಸಿದರು.

ನಿಷ್ಠಾವಂತ ಸೇವಾಕರ್ತರಿಗೆ ಅರ್ಹ ಗೌರವಗಳು ಸಲ್ಲಲೇ ಬೇಕು. ಇವು ಭಾವೀ ಜನಾಂಗಕ್ಕೆ ಮಾದರಿ ಆಗಲಿವೆ. ಕುಂದರಗಿ ಅವರು ಇಂತಹ ಘನತೆಗೆ ಸಲ್ಲುವವರು ಎಂದು ಅಭಿನಂದನಾ ಭಾಷಣದಲ್ಲಿ ಆರ್.ಎನ್ ಹೆಗಡೆ ತಿಳಿಸಿದರು.

ಸಾರ್ವಜನಿಕ ಕ್ಷೇತ್ರದಲ್ಲಿ ನಾನು ತೋಡಗಿಸಿಕೊಳ್ಳಲು ಸಾಹಿತಿಕ, ಸಾಂಸ್ಕೃತಿಕ ಆಸಕ್ತಿ ಇದ್ದುದರಿಂದ ಸಾಧ್ಯವಾಗಿದೆ. ಆವಾಗ ಇಡೀ ಜಿಲ್ಲೆಯಲ್ಲಿ 5 ಹೈಸ್ಕೂಲು ಮಾತ್ರವಿತ್ತು. ಪ್ರಾಥಮಿಕ ಶಾಲೆಯು ಹೆಚ್ಚಾಗಿರಲಿಲ್ಲ. ಸಂಯುಕ್ತ ಕರ್ನಾಟಕದಲ್ಲಿ ನಾನು ಕೆಲವು ಕಾಲ ಪತ್ರಕರ್ತ ಆಗಿದ್ದೆ. ಅದನ್ನು ಬಿಟ್ಟು ಶೈಕ್ಷಣಿಕ ಕ್ಷೇತ್ರದಲ್ಲಿ ಮನಸ್ಸು ಮಾಡಿದೆ. ಇಂದು ಗ್ರಾಮಾಂತರ ಪ್ರದೇಶಗಳು ಖಾಲಿಯಾಗಿ ಪಟ್ಟಣ ಬೆಳೆಯುತ್ತಿವೆÉ. ಇದು ನಾನು ಗಮನಿಸಿದ ಸಮಕಾಲೀನ ಚಿತ್ರಣ. ಇದು ಕಾಲಕ್ಕಾನುಗುಣವಾದ ಪರಿವರ್ತನೆಯೂ ಹೌದು. ಇಲ್ಲಿ ಉದ್ಯೋಗ ಸೃಷ್ಟಿ ಆಗಬೇಕು. ನಾವು ಮೂಲಭೂತ ಅವಶ್ಯಕತೆಗೆ ಗೌರವ ನೀಡಬೇಕು. ಇದಕ್ಕೆ ಶೈಕ್ಷಣಿಕ ಅಭಿವೃದ್ಧಿಯೂ ಅಗತ್ಯ. ಮುಂದಿನ ಜನಾಂಗಕ್ಕೆ ನಮ್ಮ ಆದರ್ಶವನ್ನು ತೋರಿಸಬೇಕು. ಆಗಲೇ ಸಮಾಜದ ಅಭಿವೃದ್ಧಿ ಸಾಧ್ಯ. ಮುಂದಿನ ಸವಾಲುಗಳನ್ನು ಎದುರಿಸುವ ಕಾರ್ಯಚಟುವಟಿಕೆ ಸಮಾಜಕ್ಕೆ ನಾವೂ ಮಾಡಬೇಕಾಗಿದೆ. ಹವ್ಯಕ ಸಮಾಜ ಶಕ್ತಿಯುತ ಸಮಾಜ. ಮುಂಬಯಿ ಹವ್ಯಕರು ಅದನ್ನು ಸಾಧಿಸಿ ತೋರಿಸಿದ್ದಾರೆ. ನನ್ನ ಸಾರ್ವಜನಿಕ ಕೆಲಸಕ್ಕೆ ಮುಂಬಯಿ ಬಹುದೊಡ್ಡ ಕೊಡುಗೆ ನೀಡಿದೆ ಎಂದು ಪುರಸ್ಕಾರಕ್ಕೆ ಉತ್ತರಿಸಿ ಎನ್.ಎಸ್ ಹೆಗಡೆ ತಿಳಿಸಿದರು.

ಹವ್ಯಕ ಸಮಾಜಕ್ಕೆ ಕುಂದರಗಿ ಅವರ ಕೊಡುಗೆ ಬಹಳಷ್ಟಿದೆ. ಉತ್ತಮ ಗುರಿವುಳ್ಳವರಾದ ಕುಂದರಗಿ ಸಮಾಜದ ಎಲ್ಲರ ಅಭಿವೃದ್ಧಿಗೆ ಮುಂದಾದವರು. ಸಮಾಜ ಸೇವೆ, ಶಿಕ್ಷಣ, ಪತ್ರಿಕೋದ್ಯಮ ಹೀಗೆ ಬಹುಮುಖ ಸಮಾಜ ಮುಖಿ ಕಾರ್ಯಗಳನ್ನು ಕೈಗೂಂಡು ಯಶಸ್ಸು ಪಡೆದಿದ್ದಾರೆ ಕುಂದರಗಿ ಎಂದು ಶಿವಕುಮಾರ್ ಅಧ್ಯಕ್ಷೀಯ ಭಾಷಣವನ್ನುದ್ದೇಶಿಸಿ ನುಡಿದರು.

ಟ್ರಸ್ಟ್‍ನ ಇತರೇ ಪದಾಧಿಕಾರಿಗಾಳು ಸೇರಿದಂತೆ ಅನೇಕರು ಹಾಜರಿದ್ದು ಟ್ರಸ್ಟ್‍ನ ಮುಖವಾಣಿ `ಹವ್ಯಕ ಸಂದೇಶ' ಮಾಸಿಕದ ಸಂಪಾದಕಿ ನ್ಯಾಯವಾದಿ ಅಮಿತಾ ಎಸ್.ಭಾಗವತ್ ಪ್ರಸ್ತಾವನೆಗೈದÀು ವೆಂಕಟರಮಣ ಶಾಸ್ತ್ರಿ ಅವರ ಜೀವನ ಚರಿತ್ರೆಯನ್ನು ಸ್ಥೂಲವಾಗಿ ಮತ್ತು ಹೃದಯಾಂಗವಾಗಿ ತೆರೆದಿಟ್ಟರು.

ರೇಖಾ ಹೆಗಡೆ ಪ್ರಾರ್ಥನೆ ಹಾಡಿದರು. ಪ್ರಶಸ್ತಿ ಸಮಿತಿ ಸಂಚಾಲಕಿ ತನುಜಾ ಹೆಗಡೆ ಸ್ವಾಗತಿಸಿದರು. ಪೂರ್ಣಿಮಾ ಅಕದಾಸ ಸನ್ಮಾನಪತ್ರ ವಾಚಿಸಿದರು. ಉಮೇಶ್ ಹೆಗಡೆ ಅತಿಥಿüಗಳನ್ನು ಪರಿಚಯಿಸಿದರು. ಹವ್ಯಕ ಸಂದೇಶ ಮಂಡಳಿ ಸದಸ್ಯೆ ಹಾಗೂ ಶೈಲಜಾ ಹೆಗಡೆ ಪೂರ್ಣಿಮಾ ಶುಭ ಸಂದೇಶÀಗಳನ್ನು ವಾಚಿಸಿ ಕಾರ್ಯಕ್ರಮ ನಿರ್ವಾಹಿಸಿದರು. ಸಿ.ಎಂ ಜೋಶಿ ಅಭಾರ ಮನ್ನಿಸಿದರು.

ನೃತ್ಯ ವಿದ್ಯಾಲಯದ ಕಲಾವಿದೆಯರು ಗುರು ಶ್ರೀಮತಿ ಶೈಲಜಾ ಮಧುಸೂದನ ನಿರ್ದೇಶನದಲ್ಲಿ ನೃತ್ಯರೂಪಕ, ವೆಲ್ಫೇರ್ ಟ್ರಸ್ಟ್‍ನ ಸದಸ್ಯರು ಮತ್ತು ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ನಂತರ ಜಾನಪದ ಹಾಡುಗಳ ಸಮೂಹ ಸ್ಪರ್ಧೆ ನಡೆಸಲ್ಪಟ್ಟವು.

 

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here