Tuesday 23rd, April 2024
canara news

ದುಡಿಮೆ ಮಾಡಿದ ಹಣದಿಂದ ಸೀರೆ ವಿತರಿಸಿದ್ದೇನೆ, ಯಾರಿಗೂ ನಾನು ಹೆದರಲ್ಲ - ಶಾಸಕ ಮೊಯ್ದೀನ್ ಬಾವಾ

Published On : 26 Feb 2018   |  Reported By : canaranews network


ಮಂಗಳೂರು: ಮಂಗಳೂರು ಹೊರವಲಯದ ಗಂಜಿಮಠ ವ್ಯಾಪ್ತಿಯ ಫಲಾನುಭವಿಗಳಿಗೆ ಶಾಸಕ ಮೊಯ್ದೀನ್ ಬಾವಾ ಗಂಜಿಮಠ ಸಭಾ ಭವನದಲ್ಲಿ ಸೀರೆ ಜತೆ ಹಕ್ಕುಪತ್ರ ವಿತರಿಸಿರುವುದನ್ನು ಸಮರ್ಥಿಸಿಕೊಂಡಿದ್ದಾರೆ.ನಾನು ಸೀರೆ ವಿತರಿಸಿದ್ದು ನನ್ನ ಸ್ವಂತ ದುಡಿಮೆಯ ಸಂಪಾದನೆಯಿಂದ.

ನಾನು ನನ್ನ ಜನುಮ ದಿನದ ನಿಮಿತ್ತ ದುಡಿಮೆಯ ಹಣದಿಂದ ಸೀರೆ ನೀಡಿದ್ದೇನೆ. ಇದನ್ನು ವಿತರಿಸಲು ನಾನು ಯಾರಿಗೂ ಹೆದರಲ್ಲ ಎಂದು ಹೇಳಿದರು.ಈ ಮುಂಚೆ ಸರ್ಕಾರಿ ಜಾಗದಲ್ಲಿ ಕುಳಿತವರಿಗೆ ಒಕ್ಕಲೆಬ್ಬಿಸುವ ಭೀತಿ ಇತ್ತು. ಅದಕ್ಕಾಗಿಯೇ ನಮ್ಮ ಸರ್ಕಾರ ಅವರ ಹಕ್ಕಿನ ಭೂಮಿಯನ್ನು ಒದಗಿಸಲು 94 ಸಿ ಹಾಗೂ 94 ಸಿಸಿ ಮುಖಾಂತರ ಕುಳಿತುಕೊಳ್ಳಲು ಅವಕಾಶ ನೀಡಿ ಹಕ್ಕುಪತ್ರ ನೀಡುತ್ತಿದೆ ಎಂದು ಹೇಳಿದರು.ನಳಿನ್ ಕುಮಾರ್ ಕಟೀಲ್ ನಯಾಪೈಸೆ ನೀಡಿಲ್ಲ.

ಮುಚ್ಚೂರು ರಸ್ತೆಯನ್ನು ನಳಿನ್ ಕುಮಾರ್ ಕಟೀಲ್ ನಿರ್ಮಿಸಿದ್ದಲ್ಲ. ಅದಕ್ಕೆ ಅನುದಾನ ಒದಗಿಸಿದ್ದು ನಾನು.ಆದರೆ, ಆ ರಸ್ತೆಯನ್ನು ತಾವು ಮಾಡಿದ್ದು ಎಂದು ಬಿಜೆಪಿಯವರು ಹೇಳಿಕೊಂಡು ಬರುತ್ತಿದ್ದಾರೆ. ನಳಿನ್ ಕುಮಾರ್ ಕಟೀಲ್ ಗಂಜಿಮಠ ಪಂಚಾಯಿತಿಗೆ ನಯಾಪೈಸೆ ಕೊಟ್ಟಿಲ್ಲ. ಶಾಸಕರ ನಿಧಿಯಿಂದ ಕೋಟಿ ಕೋಟಿ ಅನುದಾನ ನೀಡಿದ್ದು ನಾನು ಎಂದು ಹೇಳಿದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here