ಮುಂಬಯಿ, ಫೆ.28: ಬೊಂಬೇ ಬಂಟ್ಸ್ ಅಸೋಸಿಯೇಶನ್ ಇತ್ತೀಚೆಗೆ ಸಯಾನ್ ಧಾರಾವಿಯ ರಾಜೀವ ಗಾಂಧಿ ಡಿಸ್ಟ್ರಿಕ್ಟ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಕ್ರೀಡಾಂಗಣದಲ್ಲಿ ಸಂಪನ್ನ ಗೊಳಿಸಿದ 12ನೇ ವಾರ್ಷಿಕ ಕ್ರೀಡೋತ್ಸವಕ್ಕೆ ಪ್ರಾಯೋಜಕತ್ವರಾಗಿ ಸಹಕರಿಸಿದ್ದ ಉಡುಪಿ ಮೂಲದ ಮುಂಬಯಿನ ಪ್ರತಿಷ್ಠಿತ ಉದ್ಯಮಿ, ಕೊಡುಗೈದಾನಿ, ಬಿಆರ್ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಬಿ.ಆರ್ ಶೆಟ್ಟಿ ಅವರನ್ನು ಕಳೆದ ಸೋಮವಾರ ಅಸೋಸಿಯೇಶನ್ನ ಪರವಾಗಿ ಗೌರವಿಸಿ ಅಭಿನಂದಿಸಲಾಯಿತು.
ಬೊಂಬೇ ಬಂಟ್ಸ್ ಅಸೋಸಿಯೇಶನ್ನ ಮಾಜಿ ಅಧ್ಯಕ್ಷ ಹಾಗೂ ಮಾಜಿ ಕ್ರೀಡಾ ಸಮಿತಿ ಕಾರ್ಯಧ್ಯಕ್ಷರೂ ಆಗಿದ್ದ ಶ್ಯಾಮ ಎನ್.ಶೆಟ್ಟಿ ಅವರು ಅಂಧೇರಿ ಅಲ್ಲಿನ ಬಿಆರ್ ಸಮೂಹ ಸಂಸ್ಥೆಯ ಕಾರ್ಯಾಲಯಕ್ಕೆ ತೆರಲಿ ಕ್ರೀಡೋತ್ಸವದ ಸ್ಮರಣಿಕೆಯನ್ನಿತ್ತು ಗೌರವಿಸಿ ಅಭಿವಂದಿಸಿದರು. ಈ ಸಂದರ್ಭದಲ್ಲಿ ಅಸೋಸಿಯೇಶನ್ನ ಇನ್ನಬೀಡು ರವೀಂದ್ರ ಬಿ.ಶೆಟ್ಟಿ ಮತ್ತು ಸಂತೋಷ್ಕುಮಾರ್ ಆರ್.ಶೆಟ್ಟಿ ಉಪಸ್ಥಿತರಿದ್ದು ಶಾಲು ಹೊದಿಸಿ ಗೌರವಿಸಿದರು.