ಮಂಗಳೂರು : ರೌಡಿ ಶೀಟರ್ ಆಗಿದ್ದ ಇಲ್ಯಾಸ್ ಕೊಲೆ ಪ್ರಕರಣದ ಆರೋಪಿಗಳು ಸಚಿವ ಯು.ಟಿ ಖಾದರ್ ಜತೆ ತೆಗೆಸಿಕೊಂಡಿರುವ ಪೋಟೋವೊಂದು ಇದೀಗ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ. ಟಾರ್ಗೆಟ್ ಗ್ರೂಪ್ ನಲ್ಲಿದ್ದ ಇಲ್ಯಾಸ್ ಯುವ ಕಾಂಗ್ರೆಸ್ ನಲ್ಲೂ ಗುರುತಿಸಿಕೊಂಡಿದ್ದ ಈ ಹಿಂದೆ ಟಾರ್ಗೆಟ್ ಗ್ರೂಪ್ ನಲ್ಲಿ ಜತೆಯಾಗಿದ್ದ ದಾವೂದ್ , ನಾಸಿರ್ ಹಾಗೂ ರಿಯಾದ್ ಇಲ್ಯಾಸ್ ಕೊಲೆ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ ಒಟ್ಟು ಐವರನ್ನು ಪೊಲೀಸರು ಬಂಧಿಸಿದ್ದಾರೆ. .
ಇನ್ನು ವೈರಲ್ ಆದ ಪೋಟೊ ಬಗ್ಗೆ ಸಚಿವ ಖಾದರ್ ಸ್ಪಷ್ಟನೆ ನೀಡಿದ್ದು ಸಚಿವರ ಜತೆ ಪೋಟೋ ತೆಗೆದುಕೊಳ್ಳುವುದು ಸಾಮಾನ್ಯ ಸಂಗತಿ, ಆದರೆ ಅವರಿಗೆ ಕ್ರಿಮಿನಲ್ ಬ್ಯಾಕ್ ಗ್ರಾಂಡ್ ಇದ್ದರೆ ನಾವು ಜವಬ್ದಾರರಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.