ಮುಂಬಯಿ, ಎ.16.ಬಿಲ್ಲವ ಸಮಾಜ ಸೇವಾ ಸಂಘ (ರಿ.) ಕುಂದಾಪುರ ಸಂಸ್ಥೆಯು ಈ ಬಾರಿ ಎಂಟನೇ ವರ್ಷದ ಸಾಮೂಹಿಕ ವಿವಾಹ ಸಮಾರಂಭವನ್ನು ಸ್ವಸ್ತಿ| ಶ್ರೀ ವಿಲಂಬಿ ನಾಮ ಸಂ|ರದ ಮೇಷ ಮಾಸ ದಿನ 15 ಸಲುವ ವೈಶಾಖ ಶುಕ್ಲ 14ರ ಎ.29ರ ಆದಿತ್ಯವಾರ ಪೂರ್ವಾಹ್ನ 11.48 ಗಂಟೆಯ ಅಭಿಜಿತ್ ಲಗ್ನ ಸುಮುಹೂರ್ತದಲ್ಲಿ ಕುಂದಾಪುರದ ಶ್ರೀ ನಾರಾಯಣ ಗುರು ರಸ್ತೆ ಅಲ್ಲಿನ ಶ್ರೀ ನಾರಾಯಣ ಗುರು ಕಲ್ಯಾಣ ಮಂಟಪದಲ್ಲಿ ಆಅಯೋಜಿಸಿದೆ.
N T Poojary Suresh S.Poojary
ಶ್ರೀ ನಾರಾಯಣ ಗುರು ಶಿಕ್ಷಣ ಮತ್ತು ಸಾಂಸ್ಕøತಿಕ ಸಮಿತಿ ಕುಂದಾಪುರ, ಶ್ರೀ ನಾರಾಯಣ ಗುರು ಯುವಕ ಮಂಡಲ ಕುಂದಾಪುರ ಹಾಗೂ ಬಿಲ್ಲವ ಮಹಿಳಾ ಘಟಕ ಕುಂದಾಪುರ ಸಂಸ್ಥೆಗಳ ಮುಂದಾಳುತ್ವ ಹಾಗೂ ಬಿಲ್ಲವ ಸಮಾಜ ಸೇವಾ ಸಂಘ ಕುಂದಾಪುರ ಇದರ ಗೌರವಾಧ್ಯಕ್ಷ ಸುರೇಶ್ ಎಸ್.ಪೂಜಾರಿ ಇವರ ದಕ್ಷ ಮಾರ್ಗದರ್ಶನ ಮತ್ತು ಅಧ್ಯಕ್ಷ ಎನ್.ಟಿ.ಪೂಜಾರಿ ಸಾರಥ್ಯದಲ್ಲಿ ಅದ್ದೂರಿ ಕಾರ್ಯಕ್ರಮ ಜರುಗಲಿದೆ.
ಈ ಸಮಾರಂಭಕ್ಕೆ ಸರ್ವರೂ ಆಗಮಿಸಿ ವಧು-ವರರನ್ನು ಆಶೀರ್ವಚಿಸಬೇಕಾಗಿ ವಿವಾಹ ಸಮಾರಂಭದ ಪ್ರಧಾನ ರೂವಾರಿ ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀ ಕಾರ್ಯಾಧ್ಯಕ್ಷರೂ ಆದ ಎನ್.ಟಿ ಪೂಜಾರಿ ಸಂಘಟನಾ ಸಂಸ್ಥೆಗಳ ಸರ್ವ ಪದಾಧಿಕಾರಿಗಳೊಂದಿಗೆ ಈ ಮೂಲಕ ತಿಳಿಸಿದ್ದಾರೆ.