ದ.ಕ.ಜಿಲ್ಲೆಯ ಕೆಲವು ತಾಲ್ಲೂಕಿನ ಶಿಕ್ಷಕರಿಗೆ ಫೆಬ್ರವರಿಯ ಸಂಬಳವೇ ಇನ್ನೂ ಆಗಿಲ್ಲವೆಂದು ತಿಳಿದುಬಂದಿದೆ. ಮೂಡುಬಿದಿರೆ, ಬಂಟ್ವಾಳ ತಾಲ್ಲೂಕಿನಲ್ಲಿ ಯಾರಿಗೂ ಸಂಬಳ ಆಗಿಲ್ಲ.ಆದರೆ ಉಳಿದ ತಾಲೂಕಿನ ಕೆಲವು ಕಡೆಯ ಶಾಲೆಗಳವರಿಗೆ ಬೇಂಕಿನವರ ಕೃಪೆಯಿಂದ ದೊರಕಿದೆ ಎಂದು ಸುದ್ದಿ. ಏಪ್ರಿಲ್ ತಿಂಗಳ ಅರ್ಧ ಕಳೆದು ಸೌರಮಾನದ ಸಡಗರದ ಯುಗಾದಿ ಹಬ್ಬಕ್ಕಾದರೂ ಫೆಬ್ರವರಿಯ ಸಂಬಳ ಬರಬಹುದೆಂದು ಎಣಿಸಿದ್ದ ಶಿಕ್ಷಕರಿಗೆ ಅದೂ ಇಲ್ಲವಾಗಿದೆ ಎಂದು ಹಲುಬುತ್ತಿದ್ದಾರೆ.
ಸರಕಾರ, ಜಿಲ್ಲಾ ಪಂಚಾಯತ್ ತಕ್ಷಣ ಶಿಕ್ಷಕರ ಸಂಬಳವನ್ನು ಬಿಡುಗಡೆ ಮಾಡಬೇಕೆಂದು ಎಲ್ಲಾ ಶಿಕ್ಷಕರ ಪರವಾಗಿ ದ.ಕ.ಜಿಲ್ಲಾ ಹಿಂದಿ ಅಧ್ಯಾಪಕರ ಸಂಘದ ಅಧ್ಯಕ್ಷ ರಾಯೀ ರಾಜ ಕುಮಾರ್, ಹಾಗೂ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.