Thursday 25th, April 2024
canara news

*ಕಿನ್ಯದಲ್ಲಿ SSF ವತಿಯಿಂದ ಜಸ್ಟೀಸ್ ಫಾರ್ ಆಸೀಪಾ........*

Published On : 17 Apr 2018   |  Reported By : Rons Bantwal


ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಇದರ ನಿರ್ಧೇಶನ ಮೇರೆಗೆ ರಾಜ್ಯ ವ್ಯಾಪ್ತಿಯಲ್ಲಿರುವ ಎಸ್ಸೆಸ್ಸೆಫ್ ಶಾಖಾ ವ್ಯಾಪ್ತಿಯಲ್ಲಿ ಒಂದೆರಡು ದಿನಗಳ ಮುಂಚೆ ಜಮ್ಮುವಿನಲ್ಲಿ ಆಸೀಫಾ ಎಂಬ 8 ಹರೆಯದ ಮುಗ್ದ ಕಂಧಮ್ಮಳ ಮೇಲೆ ಕೋಮುವಾದಿ ನರ ರಾಕ್ಷಸರು ನಡೆಸಿದ ಅತ್ಯಾಚಾರ ಹಾಗೂ ಹತ್ಯೆಯ ಸಮಗ್ರ ತನಿಖೆ ಹಾಗೂ ಈ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವ ಬಗ್ಗೆ ಪ್ರತಿಬಟನೆ ಮೂಲಕ ಧ್ವನಿ ಓಗ್ಗೂಡಿಸುವ ಬಾಗವಾಗಿ ಎಸ್ಸೆಸ್ಸೆಫ್ ಕಿನ್ಯ ಸೆಕ್ಟರ್ ವ್ಯಾಪ್ತಿಯ ಖುತುಬಿನಗರ,ಬೆಳರಿಂಗೆ,ಕುರಿಯ,ಮೀಂಪ್ರಿ,ಉಕ್ಕುಡ,ಈ ಎಲ್ಲಾ ಶಾಖಾ ವ್ಯಾಪ್ತಿಯಲ್ಲಿ ಅತ್ಯಂತ ಯಶಸ್ವಿಯಾಗಿ ಪ್ರತಿಭಟನೆ ನಡೆಸಲಾಯಿತು

ಈ ಕಾರ್ಯಕ್ರಮದಲ್ಲಿ ಮೆಹಬೂಬ್ ಸಖಾಫಿ ಕಿನ್ಯ ಉಸ್ತಾದರು ನಡೆಸಿದ ಜಾಗೃತಿ ಭಾಷಣದಲ್ಲಿ ಈ ಭಾರತ ಎಂಬ ಜಾತ್ಯಾತೀತ ಧೇಶದಲ್ಲಿ ಹಿಂದೂ ಮುಸ್ಲಿಂ ಕೈಸ್ತ ಹಾಗೂ ಇನ್ನಿತರ ಧರ್ಮದ ಜನರು ಪರಸ್ಪರ ಜತೆ ಜತೆಯಾಗಿ ಬಾಳಿ ಬಧುಕಬೇಕಾಗಿದೆ ಅದೇ ರೀತಿ ಈ ಧೇಶದಲ್ಲಿ ಆಡಳಿತ ನಡೆಸುವ ಎಲ್ಲಾ ರಾಜಕೀಯ ಪಕ್ಷಗಳ ನಾಯಕರುಗಳು ಈ ಧೇಶದಲ್ಲಿ ನಡೆಯುವ ಎಲ್ಲಾ ಧುಷ್ಕೃತ್ಯದ ಆರೋಪಿಗಳಿಗೆ ಯಾವೂದೇ ರೀತಿಯಾದ ಬೆಂಬಲ ನೀಡಬಾರದು ಹಾಗೂ ಆಸೀಫಾ ಎಂಬ ಪುಟಾನಿ ಸಹೋದರಿಯ ಮೇಲೆ ನರ ರಾಕ್ಷಸಕರು ನಡೆಸಿದ ಹೀನ ಕೃತ್ಯವನ್ನು ಎಲ್ಲಾ ಜಾತಿಯ ಜನರು ಒಟ್ಟುಗೂಡಿ ಪ್ರತಿಭಟಿಸಬೇಕು ಎಂದು ಎಲ್ಲಾ ಧರ್ಮದ ಜನರಿಗೆ ತಿಳಿಸಿದರು ಈ ಕಾರ್ಯಕ್ರಮದಲ್ಲಿ K.H ಇಸ್ಮಾಯಿಲ್ ಸಹದಿ ಕಿನ್ಯ, V.Aಮೊಹಮ್ಮದ್ ಮುಸ್ಲಿಯಾರ್,ಮೊಹಮ್ಮದ್ ಮುಸ್ಲಿಯಾರ್ ಉಕ್ಕುಡ,ಶರೀಫ್ ಸಹದಿ,ಉಸ್ಮಾನ್ ಮುಸ್ಲಿಯಾರ್,ಇಲ್ಯಾಸ್ ಮದನಿ,ಮೊಹಮ್ಮದ್ ಉಳ್ಳಾಲ್, ಅಬೂಬಕ್ಕರ್ ಮೀನಾದಿ ಕಿನ್ಯ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಸಿರಾಜ್ ಕಿನ್ಯ ಸದಸ್ಯರಾದ ಮೊಹಮ್ಮದ್ ಕುರಿಯ,ಫಾರೂಕ್ ಬೆಳರಿಂಗೆ,ಹಿರಿಯರಾದ ವಾಮನ ಪೂಜಾರಿ ಕಿನ್ಯ , ಹಾಗೂ ಎಸ್ಸೆಸ್ಸೆಫ್ ಕಿನ್ಯ ಸೆಕ್ಟರ್ ವ್ಯಾಪ್ತಿಯ ಶಾಖಾ ನಾಯಕರು ಹಾಗೂ ಕಿನ್ಯ ಪ್ರದೇಶದ ಸಹೋದರರು ಬಾಗವಹಿಸಿದ್ದರು .




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here