Wednesday 24th, April 2024
canara news

ಬೊಂಬೇ ಬಂಟ್ಸ್ ಅಸೋಸಿಯೇಶನ್‍ನ ಮಾಜಿ ಅಧ್ಯಕ್ಷ ಅಡ್ವಕೇಟ್ ಪಾದೂರುಗುತ್ತು ಆನಂದ್ ವಿ.ಶೆಟ್ಟಿ ನಿಧನ

Published On : 17 Apr 2018   |  Reported By : Rons Bantwal


ಮುಂಬಯಿ, ಎ.17: ಬೊಂಬೇ ಬಂಟ್ಸ್ ಅಸೋಸಿಯೇಶನ್‍ನ ಮಾಜಿ ಅಧ್ಯಕ್ಷ, ಮುಂಬಯಿ ಉಚ್ಛ ನ್ಯಾಯಲಯದ ನ್ಯಾಯವಾದಿ, ಅಂಧೇರಿ ಬಾರ್ ಅಸೋಸಿಯೇಶನ್‍ನ ಸದಸ್ಯ ಅಡ್ವಕೇಟ್ ಆನಂದ್ ವಿ.ಶೆಟ್ಟಿ (76.) ಕಳೆದ ಭಾನುವಾರ ಅಂಧೇರಿ ಪಶ್ಚಿಮ ದ ಫೆÇೀರ್‍ಬಂಗಲೋ ಅಲ್ಲಿನ ಮನಿಷ್‍ನಗರದ ಸನ್‍ಫ್ಲವರ್ ಅಪಾರ್ಟ್‍ಮೆಂಟ್‍ನ ತನ್ನ ಸ್ವನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು.

ಉಡುಪಿ ಜಿಲ್ಲೆಯ ಕಾಪು ಪಾದೂರುಗುತ್ತು ಭಂಡಸಾಲೆ ಮನೆತನದವರಾಗಿದ್ದು ಅತೀವ ಸಾಮಾಜಿಕ ಕಾಳಜಿ ಹೊಂದಿದ್ದ ಆನಂದ್ ಅವರು ಅಂಧೇರಿ ವಕೀಲರ ಸಂಘ (ಅಂಧೇರಿ ಬಾರ್ ಅಸೋಸಿಯೇಶನ್), ಜವಾಬ್ (ಜುಹೂ ಅಂಧೇರಿ ವರ್ಸೋವಾ ವಿಲೇಪಾರ್ಲೆ ಎಸೋಸಿಯೇಶನ್ ಆಫ್ ಬಂಟ್ಸ್), ಬಂಟ್ಸ್ ನ್ಯಾಯ ಮಂಡಳಿ ಇದರ ಸ್ಥಾಪಕ ಸದಸ್ಯರಾಗಿ ಶ್ರಮಿಸಿದ್ದರು.

ಮೃತರು ಇಬ್ಬರು ಸುಪುತ್ರಿಯರು, ಓರ್ವ ಸುಪಿತ್ರಿ ಸಹೋದರ (ಬೊಂಬೇ ಬಂಟ್ಸ್ ಅಸೋಸಿಯೇಶನ್‍ನ ಮಾಜಿ ಅಧ್ಯಕ್ಷ) ನ್ಯಾ| ರತ್ನಾಕರ ವಿ.ಶೆಟ್ಟಿ ಸೇರಿದಂತೆ ಬಂಧು-ಬಳಗವನ್ನು ಅಗಲಿದ್ದಾರೆ.

ಬೊಂಬೇ ಬಂಟ್ಸ್ ಅಸೋಸಿಯೇಶನ್, ಅಂಧೇರಿ ವಕೀಲರ ಸಂಘ, ಜವಾಬ್‍ನ ಪದಾಧಿಕಾರಿಗಳು ಸೇರಿದಂತೆ ಅನೇಕ ಗಣ್ಯರು ಆನಂದ್ ಶೆಟ್ಟಿ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದು, ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡು ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here