ನೇಪಾಳ: ಇಂಡೋ - ನೇಪಾಳ ಮೈತ್ರಿಕೂಟದ ಸಮ್ಮೇಳನವು ಕಠ್ಮಂಡುವಿನ ಸೊಲ್ಟಿ ಕ್ರೌನ್ ಪ್ಲಾಜ ಸಭಾಂಗಣದಲ್ಲಿ ದಿನಾಂಕ: 15.4.2018ರಂದು ಜರಗಿತು. ಇದೇ ಸಂದರ್ಭದಲ್ಲಿ ಜಾಗತಿಕವಾಗಿ ಸಾಂಸ್ಕೃತಿಕ ವಿನಿಮಯದ ಮೂಲಕ ಅಂತರ್ರಾಷ್ಟೀಯ ಭಾವೈಕ್ಯತೆ ಕ್ಷೇತ್ರಕ್ಕೆ ಅನುಪಮ ಕೊಡುಗೆ ನೀಡಿದ್ದಕ್ಕಾಗಿ ಇಂ. ಕೆ. ಪಿ.ಮಂಜುನಾಥ್ ಸಾಗರ್ ಅವರಿಗೆ " ರೈಜಿಂಗ್ ಅಂಡ್ ಟ್ಯಾಲೆಂಟೆಡ್ ಪರ್ಷಾನಾಲಿಟಿ ಅವಾರ್ಡ್ " ನೀಡಿ ಗೌರವಿಸಲಾಯಿತು.
ಇಂಗ್ಲೇಂಡಿನ ಐ.ಪಿ. ಯುನಿವರ್ಸಿಟಿ ನಿರ್ದೇಶಕ ಡಾ. ಕ್ರಿಸ್ಟಿನ ಬ್ರಿಲ್ಲಿಂಗೆರ್ ಪ್ರಶಸ್ತಿ ಪ್ರದಾನ ಮಾಡಿದರು, ನೇಪಾಳದ ಸಮಾಜವಾದಿ ಮುಖಂಡ ಅರ್ಜುನ್ ಬೋತ್ಸಾಲ್, ಉತ್ತರಾಂಚಲ ಮಾಜಿ ಸಚಿವ ಧೀರೇಂದರ್ ಪ್ರತಾಪ್ ಮತ್ತಿತರ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.