ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಸಾರ್ವಜನಿಕರಿಗೆ ತುಂಬೆ ವೆಂಟೆಡ್ ಡ್ಯಾಂ ನಿಂದ ಕುಡಿಯುವ ನೀರು ಪೂರೈಕೆ ಮಾಡುವ ಉದ್ದೇಶದಿಂದ ಶಂಭೂರು ಎ.ಎಂ.ಆರ್ ಅಣೆಕಟ್ಟಿನಿಂದ ನೀರು ಕೆಳಭಾಗದಲ್ಲಿರುವ ತುಂಬೆ ಡ್ಯಾಂ ಗೆ ಮೇ. 08 ರಂದು ಹರಿಯಬಿಡಲಾಗುತ್ತದೆ.
ನೀರು ಬಿಡುವಂತೆ ಜಿಲ್ಲಾಧಿಕಾರಿಗಳ ಆದೇಶವಾಗಿದ್ದು ಈ ಹಿನ್ನೆಲೆಯಲ್ಲಿ ಮೇ.8 ರಂದು ಅಣೆಕಟ್ಟಿನ ಕೆಳಭಾಗದ ಇಕ್ಕೆಲಗಳಲ್ಲಿ ನದಿಯ ದಡದಲ್ಲಿ ವಾಸಿಸುವ ಜನರು ಮತ್ತು ಅವರ ಸಾಕುಪ್ರಾಣಿಗಳ ಸಂರಕ್ಷಣೆಯ ವಿಷಯವಾಗಿ ಮುಂಜಾಗ್ರತೆ ವಹಿಸಬೇಕೆಂದು ಎಎಂಆರ್ ಕಂಪೆನಿ ತಿಳಿಸಿದೆ.