(ಚಿತ್ರ / ಮಾಹಿತಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಜೂ.08: ಮುಂಬಯಿ ಮಹಾನಗರದ ಪ್ರತಿಷ್ಠಿತ ಸಂಸ್ಥೆ ಬಿಲ್ಲವರ ಅಸೋಸಿಯೇಶನ್ ಇದರ ಸಂಚಾಲಕತ್ವದಲ್ಲಿರುವ ಶ್ರೀ ಗುರುನಾರಾಯಣ ರಾತ್ರಿ ಕನ್ನಡ ಮಾಧ್ಯಮ ಹೈಸ್ಕೂಲು ಈ ಬಾರಿಯೂ ಮಹಾರಾಷ್ಟ್ರರಾಜ್ಯದ ಎಸ್.ಎಸ್.ಸಿ ಪರೀಕ್ಷೆಯಲ್ಲಿ 100% ಫಲಿತಾಂಶಕ್ಕೆ ಪಾತ್ರವಾಗಿದೆ.
ಮಾ| ಕಿಶೋರ್ ಶಂಕರ ಪವಾರ್ 77.2%, ಮಾ| ಅರ್ಜುನ್ ರಮೇಶ್ ಕಾಂಬ್ಳೆ 77%, ಮಾ| ಪ್ಯಾಟಿ ಗಂಗಾಧರ್ ದೇವೇಂದ್ರ 70% ಫಲಿತಾಂಶ ಪಡೆದು ಶಾಲೆಯಲ್ಲಿ ಸಂಸ್ಥೆಗೆ ಮತ್ತು ಶಾಲೆಗೆ ಕೀರ್ತಿಯನ್ನು ತಂದಿರುತ್ತಾರೆ.
ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ಹಾಗೂ ಬಿಲ್ಲವರ ಅಸೋಸಿಯೇಶನ್ನ ಮಾರ್ಗದರ್ಶಕ ಜಯ ಸಿ.ಸುವರ್ಣ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಗೌ| ಪ್ರ| ಕಾರ್ಯದರ್ಶಿ ಧರ್ಮಪಾಲ ಜಿ.ಅಂಚನ್, ಗೌ| ಪ್ರ| ಕೋಶಾಧಿಕಾರಿ ಮಹೇಶ್ ಸಿ.ಕಾರ್ಕಳ ಹಾಗೂ ಎಲ್ಲಾ ಪದಾಧಿಕಾರಿಗಳು, ಸದಸ್ಯರು, ಸ್ವರ್ಣಪದಕ ನೀಡಿ ಪೆÇ್ರೀತ್ಸಾಹಿಸುವ ಎಂ.ಬಿ ಕುಕ್ಯಾನ್, ವಿ.ಆರ್ ಕೋಟ್ಯಾನ್, ಶಾಲಾ ಸಮಿತಿ ಕಾರ್ಯಾಧ್ಯಕ್ಷ ಬನ್ನಂಜೆ ರವೀಂದ್ರ ಅವಿೂನ್ ಮತ್ತು ಮುಖ್ಯೋಪಾಧ್ಯಾಪಕ ಸಿ.ರಾಮಚಂದ್ರಯ್ಯ ಸೇರಿದಂತೆ ಗಣ್ಯರು ತೇರ್ಗಡೆಗೊಂಡ ಎಲ್ಲಾ ವಿದ್ಯಾಥಿರ್üಗಳಿಗೆ ಮತ್ತು ಶಾಲಾ ಸಮಿತಿ ಮಂಡಳಿಗೆ ಶುಭಾರೈಸಿದ್ದಾರೆ.