Friday 29th, March 2024
canara news

ಶ್ರವಣಬೆಳಗೊಳದ ಗೋಮಟೇಶ್ವರ ಭಗವಾನ್ ಶ್ರೀಬಾಹುಬಲಿ ಸ್ವಾಮಿಗೆ ಮಾಧ್ಯಮ ಸದಸ್ಯರ ವಿಶೇಷ ಮಹಾಮಸ್ತಕಾಭಿಷೇಕ

Published On : 15 Jun 2018   |  Reported By : Rons Bantwal


ಮುಂಬಯಿ, ಜೂ.14: ಐತಿಹಾಸಿಕ ಶ್ರೀಜೈನ ಮಹಾಕ್ಷೇತ್ರ ಶ್ರವಣಬೆಳಗೊಳದಲ್ಲಿ ಗೋಮಟೇಶ್ವರ ಭಗವಾನ್ ಶ್ರೀಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ-2018 ಸಂಪನ್ನಗೊಂಡಿದ್ದು, ಕಳೆದ ರವಿವಾರ ಎಸ್‍ಡಿಜೆಎಂಐ ಮ್ಯಾನೇಜಿಂಗ್ ಕಮಿಟಿ ಟ್ರಸ್ಟ್ (ರಿ.) ಶ್ರವಣಬೆಳಗೊಳ ಇವರ ವ್ಯವಸ್ಥಾಪನೆಯಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕುಟುಂಬದ ಸದಸ್ಯರಿಗಾಗಿ ಮಾಧ್ಯಮ ವಿಶೇಷ ಮಹಾಮಸ್ತಕಾಭಿಷೇಕ ಜರುಗಿತು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಪಾಲ್ಗೊಂಡರು. ಅಖಿಲ ಭಾರತ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಮದನ್ ಗೌಡ, ಚೆನ್ನರಾಯಪಟ್ಟಣ ತಾಲೂಕು ಸಂಘದ ಅಧ್ಯಕ್ಷ ಸ್ವಾಮಿಗೌಡ, ಕರ್ನಾಟಕರಾಜ್ಯ ಸಂಘದ ಅಧ್ಯಕ್ಷ ಎನ್.ರಾಜು, ಪ್ರಧಾನ ಕಾರ್ಯದರ್ಶಿ ಸಗಡು ಶಿವಣ್ಣ, ಉಪಾಧ್ಯಕ್ಷ ಶಿವಾನಂದ್ ಸ್ಥಳೀಯ ಸಂಘಟನೆಯ ಪಧಾಧಿಕಾರಿಗಳು ಕಾಪು ತಾಲೂಕು ಸಂಘದ ಅಧ್ಯಕ್ಷ ಮತ್ತು ಕುಟುಂಬದ ಸದಸ್ಯರನ್ನು ಅಭಿನಂದಿಸಿದರು.

ಕೆ.ಪ್ರಕಾಶ್ ಸುವರ್ಣ, ಕರುಣಾಕರ ನಾಯಕ್, ಬಿ.ಪುಂಡಲೀಕ ಮರಾಠೆ, ನಡಿಮನೆ ವಾದಿರಾಜ್‍ರಾವ್, ಬಾಲಕೃಷ್ಣ ಪೂಜಾರಿ ಉಚ್ಚಿಲ, ಹರಿಪ್ರಸಾದ್ ನಂದಳಿಕೆ, ಪ್ರಮೋದ್ ಸುವರ್ಣ, ಸಂತೋಷ್ ಕಾಪು ಹಾಗೂ ಮತ್ತಿತರ ಪತ್ರಕರ್ತರು ಭಾಗವಹಿಸಿದ್ದರು.

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here