Saturday 20th, April 2024
canara news

ಕಾರಿಗೆ ಬೈಕ್ ಡಿಕ್ಕಿ- ಸವಾರ ಸಿನಿಮೀಯ ದೃಶ್ಯದಂತೆ ಪಾರು

Published On : 20 Jun 2018   |  Reported By : canaranews network


ಮಂಗಳೂರು: ಕಾರಿಗೆ ಬೈಕ್ ಡಿಕ್ಕಿಯಾಗಿ ಬೈಕ್ ಸವಾರನೊಬ್ಬ ಸಿನಿಮೀಯ ದೃಶ್ಯದಂತೆ ಕಾರಿನ ಮೇಲ್ಬಾಗದಿಂದ ಉರುಳಿ ರಸ್ತೆ ಬಿದ್ದ ಘಟನೆ ಮಂಗಳೂರಿನಲ್ಲಿ ನಡೆದಿದೆ. ನಗರದ ಬೋಂದೆಲ್ ನಲ್ಲಿ ಈ ಘಟನೆ ನಡೆದಿದ್ದು, ಹೆಲ್ಮೆಟ್ ಹಾಕಿದ್ದರಿಂದ ಬೈಕ್ ಸವಾರಿ ಮಾಡುತ್ತಿದ್ದ ಯುವಕ ಅಪಾಯದಿಂದ ಪಾರಾಗಿದ್ದಾನೆ.ಬೈಕ್ ಸವಾರ ಏರ್ ಪೋರ್ಟ್ ಕಡೆಗೆ ಅತಿ ವೇಗದಿಂದ ತೆರಳುತ್ತಿದ್ದ ಸಂದರ್ಭ, ಬೈಕ್ ಬರುತ್ತಿರುವುದನ್ನು ಗಮನಿಸಿದ ಕಾರು ಚಾಲಕ ನಿಲ್ಲಿಸಿದ ಕಾರನ್ನು ನಿಧಾನವಾಗಿ ಯು ಟರ್ನ್ ತೆಗೆಯಲಾರಂಭಿಸಿದ್ದಾನೆ..

ಆಗ ವೇಗವಾಗಿ ಬಂದ ಬೈಕ್ ಕಾರಿಗೆ ಡಿಕ್ಕಿ ಹೊಡೆದಿದ್ದು, ಸವಾರ ಕಾರಿನ ಮೇಲ್ಭಾಗದಿಂದ ಪಲ್ಟಿಯಾಗಿ ರಸ್ತೆಗೆ ಬಿದ್ದಿದ್ದಾನೆ. ಇನ್ನು ಬೋಂದೇಲ್ ಚರ್ಚ್ ಬಳಿಯ ಇಳಿಜಾರು ರಸ್ತೆಯಲ್ಲಿ ಅಪಘಾತ ಸಾಮಾನ್ಯ ಸಂಗತಿಯಂತಾಗಿದ್ದು, ವಿಮಾನನಿಲ್ದಾಣದ ಕಡೆಗೆ ಸಾಗುತ್ತಿರುವ ವಾಹನಗಳು ಹೆಚ್ಚಿನ ವೇಗದಲ್ಲಿ ಹಾದುಹೋಗುವ ಕಾರಣ ಇಲ್ಲಿ ಆಕ್ಸಿಡೆಂಟ್ ಗಳು ಸರ್ವೇ ಸಾಮಾನ್ಯ ಎಂಬಂತಾಗಿದೆ. ಬೋಂದೇಲ್ ಸಮೀಪ ಸೇಂಟ್ ಲಾರೆನ್ಸ್ ಶಾಲೆಯಿದ್ದ ಮಕ್ಕಳು ,ಶಿಕ್ಷಕರು ಹಾಗೂ ಪಾದಚಾರಿಗಳು ಜೀವಭಯದಿಂದ ರಸ್ತೆ ದಾಟುವಂತಾಗಿದೆ.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here