ಮುಂಬಯಿ, ಜೂ.23: ಮಂಗಳೂರು ಬಜ್ಪೆ ಅಲ್ಲಿನ ದೊಡ್ಡಿಕಟ್ಟಾ ನಿವಾಸಿ ಮಾಧವ ಅಮೀನ್ ಮತ್ತು ಮುಂಬಯಿನ ಉದ್ಯಮಿ, ಭಾರತ್ ಬ್ಯಾಂಕ್ ನ ಮಾಜಿ ನಿರ್ದೇಶಕ ಎಲ್. ವಿ ಅಮೀನ್ ಅವರ ಮನೆ ಮುಂದಿನ ಎಸ್ ಇಝೆಡ್ ಇದರ ಡ್ಯಾಂ ಹೊಡೆದು, ಎಸ್ ಇಝೆಡ್ ನ ತಡೆಗೋಡೆ ದೇವಸ್ಥಾನ, ಸ್ಥಳಿಯ ಮನೆಗಳ ಮೇಲೆ ಕುಸಿದು ಬಿದ್ದು ಭಾರೀ ಹಾನಿ ಉಂಟಾಗಿದೆ.
ಘಟನೆ ಇಂದು ಬೆಳಗಿನ ಜಾವ ಎರಡೂ ಘಂಟೆಗೆ ಸಂಭವಿಸಿದ್ದು, ಲಕ್ಷಾಂತರ ಮೊತ್ತದ ನಷ್ಟ ಉಂಟಾಗಿದೆ ಎಂದು ತಕ್ಷಣ ಮುಂಬಯಿನಿಂದ ತವರೂರಿಗೆ ಧಾವಿಸಿ ಘಟನೆ ವೀಕ್ಷಿಸಿದ ದೊಡ್ಡಿಕಟ್ಟೆ ಶ್ರೀ ಸ್ವಯಂ ಭೂಉಮಾಮಹೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ, ಆಡಳಿತ ಮಂಡಳಿ ಅಧ್ಯಕ್ಷ ಎಲ್.ವಿ ಅಮೀನ್ ತಿಳಿಸಿದ್ದಾರೆ.