ಮುಂಬಯಿ, ಜು.28: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಮಾಜಿ ಅಧ್ಯಕ್ಷ, ಅಸೋಸಿಯೇ ಶನ್ನ ಪ್ರಪ್ರಥಮ ಚೆಂಬೂರು ಸ್ಥಳೀಯ ಸಮಿತಿಯ ಸ್ಥಾಪಕ ರೂವಾರಿಯಲ್ಲೋರ್ವ, ರಾಜು ವೆಂಕಪ್ಪ ಅವಿೂನ್ ಹೆಸರಾಂತ ಆರ್.ವಿ ಅವಿೂನ್ (91.) ಇದಿಲ್ಲಿ ಗುರುವಾರ ಬೆಳಿಗ್ಗೆ ವೃದ್ಧಾಪ್ಯದಿಂದ ಉಪನಗರ ಘಾಟ್ಕೋಪರ್ ಪೂರ್ವದ ಗರೋಡಿ ನಗರದ ಯೋಗೇಶ್ವರ್ ಬಿಲ್ಡಿಂಗ್ನ ಸ್ವನಿವಾಸದಲ್ಲಿ ನಿಧನರಾದರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪಲಿಮಾರು ನಡಿಕೊಪ್ಪಲ ಮೂಲತಃ ಆರ್ವಿ ಬಿಲ್ಲವರ ಅಸೋಸಿಯೇಶನ್ನ ಕಾರ್ಯಕಾರಿ ಸಮಿತಿಯಲ್ಲಿ ಸಕ್ರೀಯರಾಗಿದ್ದು 1955-57ರ ಅವಧಿಯಲ್ಲಿ ಗೌ| ಪ್ರ| ಕಾರ್ಯದರ್ಶಿ ಆಗಿ 1964ರಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಭಾರತ್ ಬ್ಯಾಂಕ್ ಕೋ.ಅಪರೇಟಿವ್ (ಮುಂಬಯಿ) ಲಿಮಿಟೆಡ್ನ ಪರ್ಸನಲ್ ಮೇನೆಜರ್ ಆಗಿ ದುಡಿದು ನಿವೃತ್ತರಾಗಿದ್ದರು.
ಭಾರತ್ ಬ್ಯಾಂಕ್ನ ಶತ ಶಾಖೆಯ ಸಂಭ್ರಮದಲ್ಲಿ ಬ್ಯಾಂಕ್ ಮಂಡಳಿ, ಉನ್ನತಾಧಿಕಾರಿಗಳು ಅವರ ನಿವಾಸಕ್ಕೆ ತೆರಳಿ ಆರ್ವಿರನ್ನು ಸನ್ಮಾನಿಸಿದ್ದರು. ಅಸೀಮ ಛಲವಾದಿ, ಅವಿರತ ಪರಿಶ್ರಮದಿಂದ ಸುಸಂಸ್ಕೃತ ಸಭ್ಯ, ಸದೃಹಸ್ಥನಾಗಿ ಜೀವನ ರೂಪಿಸಿ ಸಮಾಜದ ಏಳಿಗೆಗಾಗಿ ನಿಷ್ಠಾವಂತರಾಗಿ ಶ್ರಮಿಸಿದ್ದÀರು. ಸಮಾಜವಾದಿಯಾಗಿದ್ದು ಜನಾನುರಾಗಿದ್ದ ಮೃತರು ಪತ್ನಿ ಶಾಂತಿ, ಪುತ್ರ ನವೀನ್ಚಂದ್ರ, ಪುತ್ರಿ ವಿಜಯಲಕ್ಷಿ ್ಮೀ ಸೇರಿದಂತೆ ಬಂಧು-ಬಳಗ ಅಗಲಿದ್ದಾರೆ.
ಆರ್.ವಿ ಅವಿೂನ್ ನಿಧನಕ್ಕೆ ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ ಹಾಗೂ ಭಾರತ್ ಬ್ಯಾಂಕ್ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಗೌ| ಪ್ರ| ಕಾರ್ಯದರ್ಶಿ ಧರ್ಮಪಾಲ್ ಜಿ. ಅಂಚನ್ ಮತ್ತು ಸರ್ವ ಪದಾಧಿಕಾರಿಗಳು, ಸದಸ್ಯರು, ನಿಕಟ ಪೂರ್ವಾಧ್ಯಕ್ಷ ಎಲ್.ವಿ.ಅವಿೂನ್, ಭಾರತ್ ಬ್ಯಾಂಕ್ನ ಮಾಜಿ ಕಾರ್ಯಾಧ್ಯಕ್ಷ ವಾಸುದೇವ ಆರ್.ಕೋಟ್ಯಾನ್, ಉಪ ಕಾರ್ಯಾಧ್ಯಕ್ಷೆ ನ್ಯಾ| ರೋಹಿಣಿ ಜೆ.ಸಾಲಿಯಾನ್, ಆಡಳಿತ ನಿರ್ದೇಶಕ ಸಿ.ಆರ್ ಮೂಲ್ಕಿ, ನಿರ್ದೇಶಕ ಮಂಡಳಿ, ಸೂರು ಸಿ.ಕರ್ಕೇರ, ಕೆ. ಭೋಜರಾಜ್, ಬಿಸಿಸಿಐ ಕಾರ್ಯಾಧ್ಯಕ್ಷ ಎನ್.ಟಿ ಪೂಜಾರಿ ಸೇರಿದಂತೆ ಅನೇಕರು ಸಂತಾಪ ವ್ಯಕ್ತ ಪಡಿಸಿದ್ದಾರೆ.
ಮೃತರ ಅಂತ್ಯಕ್ರಿಯೆ ಇಂದು (ಜು.28) ಗುರುವಾರÀ ಅಪರಾಹ್ನ 3.00 ಗಂಟೆಗೆ ಗರೋಡಿ ನಗರದ ರುದ್ರಭೂಮಿಯಲ್ಲಿ ನೆರವೇರಿಸಲ್ಪಟ್ಟಿತು. ಬಿಲ್ಲವರ ಅಸೋಸಿಯೇಶನ್ ಮುಂಬಯಿ ಮತ್ತು ಚೆಂಬೂರು ಹಾಗೂ ಇತರ ಸ್ಥಳೀಯ ಸಮಿತಿ ಇದರ ಪದಾಧಿಕಾರಿಗಳು, ಸದಸ್ಯರನೇಕರು, ಭಾರತ್ ಬ್ಯಾಂಕ್ನ ಉನ್ನತಾಧಿಕಾರಿಗಳು ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು.