Thursday 18th, April 2024
canara news

ಗ್ರಾಹಕರ ಸಂತೃಪ್ತಿಯೇ ಭಾರತ್ ಬ್ಯಾಂಕ್‍ನ ದಿಟ್ಟ ಸಾಧನೆಯಾಗಿದೆ

Published On : 01 Jul 2018   |  Reported By : Rons Bantwal


ಭಾರತ್ ಬ್ಯಾಂಕ್‍ನ 42ನೇ ವಾರ್ಷಿಕ ಮಹಾಸಭೆಯಲ್ಲಿ ಜಯ ಸಿ.ಸುವರ್ಣ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)


ಮುಂಬಯಿ, ಜೂ.30: ಹಣಕಾಸು ರಂಗದ ಸವಾಲುಗಳನ್ನು ಸಮಯೋಚಿತವಾಗಿ ಪೂರೈಸಿ ಆರ್‍ಬಿಐ ನಿಯಮಗಳನ್ನು ಸಮರ್ಪಕವಾಗಿ ನಿಭಾಯಿಸಿದ ಭಾರತ್ ಬ್ಯಾಂಕ್ ಭಾರತದ ಸಹಕಾರಿ ಬ್ಯಾಂಕಿಂಗ್ ಉದ್ಯಮದಲ್ಲಿ ಹೊಸ ಅಧ್ಯಾಯಕ್ಕೆ ಸಾಕ್ಷಿಯಾಗಿದೆ. ಆಥಿರ್üಕ ಕ್ಷೇತ್ರದ ಜಾಗತಿಕ ಜ್ಞಾನ ಮತ್ತು ಕರ್ಮಚಾರಿಗಳ ಉತ್ಕೃಷ್ಟ ತರಬೇತಿಯಿಂದ ಬ್ಯಾಂಕನ್ನು ಕ್ಷೀಪ್ರಗತಿಯಲ್ಲಿ ಮುನ್ನಡೆಸಿದ್ದು ಸುಧಾರಿತ ತಂತಜ್ಞಾನಗಳ ಅಳವಡಿಕೆಗಳಿಂದ ಗ್ರಾಹಕರಿಗೆ ತ್ವರಿತ ಸೇವೆಗಳನ್ನು ನೀಡಲು ಸಾಧ್ಯವಾಗಿದೆ. ಇವೆಲ್ಲವುಗಳ ಪರಿಣಾಮ ಸರ್ವೋತ್ಕೃಷ್ಟ ಗ್ರಾಹಕಸೇವೆ ನೀಡಲು ಬದ್ಧವೆಣಿಸಿದೆ. ಸಹಕಾರಿ ಕ್ಷೇತ್ರದ ವ್ಯವಹಾರ ಸ್ಪರ್ಧೆಯಲ್ಲೂ ದಿಟ್ಟ ಹೆಜ್ಜೆಗಳನ್ನಿರಿಸಿದ ಕಾರಣ ಸದೃಢ ಬಾಂಕ್ ಆಗಿ ಕಾರ್ಯೋನ್ಮುಖ ಸೇವೆಯನ್ನೀಡಿದೆ ಎನ್ನುವ ವಿಶ್ವಾಸ ನಮಗಿದೆ. ಆಧುನಿಕ ಅವಿಷ್ಕಾರಿತ ವ್ಯವಹಾರ ಸಾಧ್ಯತೆಯನ್ನು ಪರಿಶೋಧಿಸಿ ಸೇವೆಯನ್ನು ತ್ವರಿತಗೊಳಿಸಿ ಮುನ್ನಡೆದ ಫಲವಾಗಿ ಈ ಪಥಸಂಸ್ಥೆ ಜನಸಾಮಾನ್ಯರ ಬ್ಯಾಂಕ್ ಎಂದೆಣಿಸಲು ಕಾರಣವಾಗಿದೆ. ಗ್ರಾಹಕರ ಸಂತೃಪ್ತಿಯೇ ಬ್ಯಾಂಕ್‍ನ ಸಾಧನೆಯಾಗಿ ಆಧುನಿಕ ಸಹಕಾರಿ ಬ್ಯಾಂಕಿಂಗ್‍ನ ದಿಗ್ಗಜ ಭಾರತ್ ಬ್ಯಾಂಕ್ ಎಂದು ಕರೆಸಲ್ಪಡುವುದು ನಮ್ಮನಿಮ್ಮೆಲ್ಲರ ಹಿರಿಮೆಯಾಗಿದೆ ಎಂದು ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ಇದರ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ತಿಳಿಸಿದರು.

ಇಂದಿಲ್ಲಿ ಶನಿವಾರ ಸಂಜೆ ಗೋರೆಗಾಂವ್ ಪೂರ್ವದ ಬ್ರಿಜ್‍ವಾಸಿ ಪ್ಯಾಲೇಸ್ ಸಭಾಗೃಹದಲ್ಲಿ ಜರುಗಿಸಲ್ಪಟ್ಟ ಭಾರತ್ ಬ್ಯಾಂಕ್‍ನ 42ನೇ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬ್ಯಾಂಕ್‍ನ ಮಾತೃ ಸಂಸ್ಥೆ ಬಿಲ್ಲವರ ಅಸೋಸಿಯೇಶನ್ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ದೀಪ ಪ್ರಜ್ವಲಿಸಿ ಮಹಾಸಭೆಗೆ ಚಾಲನೆಯನ್ನಿತ್ತರು.

ಗ್ರಾಹಕರು ವರ್ಷಪೂರ್ತಿ ನೀಡಿದ ಬೆಂಬಲ ಹಾಗೂ ಸಹಕಾರಕ್ಕೆ ಬ್ಯಾಂಕಿನ ನಿರ್ದೇಶಕ ಮಂಡಳಿ, ಆಡಳಿತ ಸಮಿತಿ ಹಾಗೂ ನೌಕರ ವರ್ಗಕ್ಕೆ ಕೃತಜ್ಞತೆ ಸಲ್ಲಿಸುವೆ. ಪ್ರಸಕ್ತ ವರ್ಷದಲ್ಲಿ ನಮ್ಮ ಬ್ಯಾಂಕು ಎರಡು ನೂತನ ಶಾಖೆಗಳನ್ನು ತೆರೆದಿದೆ. ಬ್ಯಾಂಕ್‍ನ ಬಂಡವಾಳದ ಅಡಿಪಾಯವನ್ನು ಗಟ್ಟಿಗೊಳಿಸುವುದಕ್ಕಾಗಿ ಕೆÉೀವಲ 17 ದಿನಗಳಲ್ಲಿ ದೀರ್ಘಾವಧಿಯ ಠೇವಣಿಯಾಗಿ 100 ಕೋಟಿ ರೂಪಾಯಿ ಸಂಗ್ರಹಿಸಿದೆ. ವರದಿ ವರ್ಷದಲ್ಲಿ ಬ್ಯಾಂಕ್‍ಗೆ ಪ್ರತಿಷ್ಠಿತ ಸಂಸ್ಥೆಗಳಿಂದಎರಡು ಪ್ರತಿಷ್ಠಿತ ಪ್ರಶಸ್ತಿಗಳು ಪ್ರಾಪ್ತಿಯಾಗಿವೆ. 41ನೇ ಮಹಾಸಭೆಯಲ್ಲಿ ಅಧಿನಿಯಮಕ್ಕೆ ಮಾಡಿದ ತಿದ್ದುಪಡಿಯನ್ನು ನವದೆಹಲಿಯ ಭಾರತ ಸರಕಾರದ ಜೊತೆ ಕಾರ್ಯದರ್ಶಿಗಳ ಕಚೇರಿ ಹಾಗೂ ಕೇಂದ್ರ ರೆಜಿಸ್ಟಾರ್ ಆಫ್ ಕೋಪರೇಟಿವ್ ಸೊಸೈಟಿಯು ಅನುಮೋದಿಸಿದೆ. ಪ್ರಚಲಿತ ಬ್ಯಾಂಕಿನ ಅಧಿನಿಯಮ ಪ್ರಕಾರ 15% ಡಿವಿಡೆಂಟ್ ಅತ್ಯಧಿಕ ಮಿತಿ ಆಗಿದ್ದು, ಆ ಪ್ರಕಾರವೇ ಶೆÉೀರುದಾರರಿಗೆ ಈ ಬಾರಿಯೂ ಬ್ಯಾಂಕ್ 15% ಡಿವಿಡೆಂಟ್ ನೀಡಲಿಪ್ಛಿಸಿದೆ ಎಂದÀು ಅಧ್ಯಕ್ಷೀಯ ಭಾಷಣದಲ್ಲಿ ಜಯ ಸುವರ್ಣರು ಪ್ರಕಟಿಸಿದರು ಹಾಗೂ ಆನ್‍ಲೈನ್ ಮೂಲಕ ಏಕಕಾಲಕ್ಕೆ ಎಲ್ಲಾ ಶೇರುದಾರರ ಖಾತೆಗೆ ಡಿವಿಡೆಂಟ್ ಜಮಾ ಗೊಳಿಸಿದರು.

ಬ್ಯಾಂಕ್‍ನ ಸಿಇಒ ಮತ್ತು ಆಡಳಿತ ನಿರ್ದೇಶಕ ಸಿ.ಆರ್ ಮೂಲ್ಕಿ ಸ್ವಾಗತಿಸಿ ಬ್ಯಾಂಕ್‍ನ 2017-18 ಕ್ಯಾಲೆಂಡರ್ ವರ್ಷದ ವಾರ್ಷಿಕ ಕಾರ್ಯಸಾಧನೆಗಳ ಸ್ಥೂಲವಾದ ಮಾಹಿತಿಯನ್ನಿತ್ತರು. ಪಾಲುದಾರಿಕ ಬಂಡವಾಳ (ಶೇರ್ ಕ್ಯಾಪಿಟಲ್) 259.52 ಕೋಟಿ, ಕಾಯ್ದಿರಿಸಿದ ಸ್ಥಿರನಿಧಿ (ರಿಝರ್ವ್ ಫಂಡ್) 776.84 ಕೋಟಿ, ಸ್ಥಿರ ಠೇವಣಾತಿ (ಫಿಕ್ಸೆಡ್ ಡಿಪಾಜಿಟ್) 8,300.65 ಕೋಟಿ, ಉಳಿತಾಯ ಠೇವಣಾತಿ (ಸೇವ್ಹಿಂಗ್ ಡಿಪಾಜಿಟ್) 1530.28 ಕೋಟಿ, ಚಾಲ್ತಿ ಠೇವಣಾತಿ (ಕರೆಂಟ್ ಫಂಡ್) 723.01 ಕೋಟಿ, ಆವರ್ತ ಠೇವಣಾತಿ (ರೆಕರಿಂಗ್ ಡಿಪಾಜಿಟ್) 177.91 ಕೋಟಿ, ಭಾರತ್ ದೈನಂದಿನ ಠೇವಣಾತಿ (ಭಾರತ್ ಡೈಲಿ ಡಿಪಾಜಿಟ್) 62.37 ಕೋಟಿ ಆಗಿದ್ದು ಗತ ಸಾಲಿನಲ್ಲಿ ಒಟ್ಟು 10,794.22 ಕೋಟಿ ವ್ಯವಹಾರ ನಡೆಸಿದೆ. ಸಾಲ ಮತ್ತು ಮುಂಗಡ (ಲೋನ್ ಎಂಡ್ ಎಡ್‍ವಾನ್ಸಸ್) 7,770.80 ಕೋಟಿ, ನಿಬಿಡ ಆದಾಯ (ಗ್ರೋಸ್ ಇನ್‍ಕಮ್) 1,180.59 ಕೋಟಿ, ನಿವ್ವಳ ಲಾಭ (ನೆಟ್ ಪ್ರಾಫಿಟ್) ರೂಪಾಯಿ 93.38 ಕೋಟಿ, ಕಾರ್ಯಮಾನ ಬಂಡವಾಳ (ವರ್ಕಿಂಗ್ ಕ್ಯಾಪಿಟಲ್) ರೂಪಾಯಿ 12,462.27 ಕೋಟಿ ವ್ಯವಹಾರಿಸಲಾಗಿದೆ. ಅಂತೆಯೇ ಈ ಬಾರಿಯೂ ಲೆಕ್ಕ ಶೋಧನಾ ಶ್ರೇಣೀಕರಣ ಪ್ರಕಾರ (ಆಡಿಟ್ ಕ್ಲಾಸಿಫೀಕೇಶನ್) `ಎ' ದರ್ಜೆಯ ಸ್ಥಾನದೊಂದಿಗೆ ಧೃಡೀಕೃತಗೊಂಡಿದೆ ಎನ್ನುತ್ತಾ ಸಭಾ ಕಲಾಪವನ್ನು ನಡೆಸಿದರು.

ಭಾರತ್ ಬ್ಯಾಂಕ್‍ನ ಉಪ ಕಾರ್ಯಾಧ್ಯಕ್ಷೆ ನ್ಯಾ| ರೋಹಿಣಿ ಜೆ.ಸಾಲಿಯಾನ್, ನಿರ್ದೇಶಕರುಗಳಾದ ವಾಸುದೇವ ಆರ್.ಕೋಟ್ಯಾನ್ (ಮಾಜಿ ಕಾರ್ಯಾಧ್ಯಕ್ಷ), ಪುಷ್ಫಲತಾ ನರ್ಸಪ್ಪ ಸಾಲ್ಯಾನ್, ಕೆ.ಎನ್ ಸುವರ್ಣ (ಸಾಲ ಸಮಿತಿ ಕಾರ್ಯಾಧ್ಯಕ್ಷ), ಜೆ.ಎ ಕೋಟ್ಯಾನ್, ಯು.ಎಸ್ ಪೂಜಾರಿ (ಲೆಕ್ಕಪರಿಶೋಧನಾ ಸಮಿತಿ ಕಾರ್ಯಾಧ್ಯಕ್ಷ), ನ್ಯಾ| ಎಸ್.ಬಿ ಅವಿೂನ್ (ಕಾನೂನು ಮತ್ತು ಸಾಲ ವಸೂಲಿ ಸಮಿತಿ ಕಾರ್ಯಾಧ್ಯಕ್ಷ), ಚಂದ್ರಶೇಖರ ಎಸ್.ಪೂಜಾರಿ, ಜ್ಯೋತಿ ಕೆ.ಸುವರ್ಣ, ರೋಹಿತ್ ಎಂ.ಸುವರ್ಣ, ದಾಮೋದರ ಸಿ.ಕುಂದರ್, ಆರ್.ಡಿ ಪೂಜಾರಿ, ಕೆ.ಬಿ ಪೂಜಾರಿ, ಹರೀಶ್ಚಂದ್ರ ಜಿ.ಮೂಲ್ಕಿ, ಅಶೋಕ್ ಎಂ.ಕೋಟ್ಯಾನ್, ಗಂಗಾಧರ್ ಜೆ. ಪೂಜಾರಿ, ಭಾಸ್ಕರ್ ಎಂ.ಸಾಲ್ಯಾನ್, ಸೂರ್ಯಕಾಂತ್ ಜೆ.ಸುವರ್ಣ, ಅನ್ಬಲಗನ್ ಸಿ.ಹರಿಜನ ವೇದಿಕೆಯಲ್ಲಿ ಆಸೀನರಾಗಿದ್ದರು.

ಮಹಾಸಭೆಯಲ್ಲಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಬಹುತೇಕ ಪದಾಧಿಕಾರಿಗಳು, ಸದಸ್ಯರನೇಕರು, ಬ್ಯಾಂಕ್‍ನ ಮಾಜಿ ನಿರ್ದೇಶಕರು, ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀ ಅಧ್ಯಕ್ಷ ಎನ್.ಟಿ ಪೂಜಾರಿ ಮತ್ತಿತರ ನಿರ್ದೇಶಕರು ಸೇರಿದಂತೆ ನೂರಾರು ಶೇರುದಾರರು, ಗ್ರಾಹಕರು, ಹಿತೈಷಿಗಳು ಉಪಸ್ಥಿತರಿದ್ದು, ಬ್ಯಾಂಕ್ ಸದಸ್ಯರುಗಳಾದ ಪ್ರಕಾಶ್ ಅಗರ್ವಾಲ್, ಎನ್.ಎಂ ಸನೀಲ್, ಕೃಷ್ಣರಾಜ್ ಆರ್.ಕೋಟ್ಯಾನ್, ನೋಬರ್ಟ್ ಡಿಸೋಜಾ, ರವೀಂದ್ರ ವಿ.ಬೆನಗಿರ್, ಶೌಕತ್ ಕಲಶೇಕರ್, ಕೀರ್ತಿ ಜೆ.ಶ್ಹಾ, ಕೃಷ್ಣಮೂರ್ತಿ ಸೇಷಣ್, ಹರಿರಾಮ್ ಚೌಧುರಿ, ಎಂ.ರಾಮಚಂದ್ರನ್, ಶಕುಂತಳಾ ಕೆ.ಕೋಟ್ಯಾನ್, ಕಾಂಚನ್ ಹರ್‍ಗೋವಿಂದ್ ಸಹನಿ ಮತ್ತು ಪದ್ಮನಾಭ ಪೂಜಾರಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿದರು.

ಮಹಾಸಭೆಯಲ್ಲಿ ಬ್ಯಾಂಕ್‍ನ ಪ್ರಧಾನ ಪ್ರಬಂಧಕರುಗಳಾದ ದಿನೇಶ್ ಬಿ.ಸಾಲಿಯಾನ್, ಸುರೇಶ್ ಎಸ್.ಸಾಲ್ಯಾನ್, ಡಿಜಿಎಂಗಳಾದ ಕಿಶೋರ್ ಡಿ.ಕೋಟ್ಯಾನ್, ಪ್ರಭಾಕರ್ ಜಿ.ಸುವರ್ಣ, ವಿಶ್ವನಾಥ್ ಜಿ.ಸುವರ್ಣ, ವಾಸುದೇವ ಎಂ.ಸಾಲ್ಯಾನ್, ಮಹೇಶ್ ಬಿ.ಕೋಟ್ಯಾನ್, ಸತೀಶ್ ಎಂ.ಬಂಗೇರ, ಪ್ರಭಾಕರ್ ಜಿ.ಪೂಜಾರಿ, ಜನಾರ್ದನ್ ಎಂ.ಪೂಜಾರಿ, ಸಹಾಯಕ ಮಹಾ ಪ್ರಬಂಧಕರುಗಳಾದ ಜಗದೀಶ್ ನಾರಾಯಣ, ರಮೇಶ್ ಹೆಚ್.ಪೂಜಾರಿ, ಪ್ರವೀಣ್‍ಕುಮಾರ್ ಎಸ್.ಸುವರ್ಣ, ಮಂಜುಳಾ ಎನ್.ಸುವರ್ಣ, ಹರೀಶ್ ಹೆಜ್ಮಾಡಿ, ಮೋಹನ್ ಎನ್.ಸಾಲ್ಯಾನ್, ಮುಖ್ಯ ಮಾಹಿತಿಯಾಧಿಕಾರಿ ನಿತ್ಯಾನಂದ ಎಸ್.ಕಿರೋಡಿಯನ್, ಶೋಭಾ ದಯಾನಂದ್ (ನಿವೃತ್ತ ಜಿಎಂ) ಮತ್ತಿತರ ಉನ್ನತಾಧಿಕಾರಿಗಳು, ವಿವಿಧ ಶಾಖೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

ಬ್ಯಾಂಕ್ ಅಧಿಕಾರಿ ಯಶೋಧರ್ ಡಿ.ಪೂಜಾರಿ ಪ್ರಾರ್ಥನೆಯನ್ನಾಡಿದರು. ಪ್ರಧಾನ ಪ್ರಬಂಧಕ ವಿದ್ಯಾನಂದ ಎಸ್.ಕರ್ಕೇರ, ವಂದನಾರ್ಪಣೆಗೈದರು. ರಾಷ್ಟ್ರಗೀತೆಯೊಂದಿಗೆ ಮಹಾಸಭೆ ಸಮಾಪ್ತಿ ಗೊಂಡಿತು.

 

 

 

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here