ಉಜಿರೆ: ಬೆಳ್ತಂಗಡಿ ಲಯನ್ಸ್ ಕ್ಲಬ್ನ 44ನೇ ವಾರ್ಷಿಕ ಸಂಚಿಕೆ “ಸಂಭ್ರಮ”ವನ್ನು ಧರ್ಮಸ್ಥಳದಲ್ಲಿ ಸೋಮವಾರ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿದರು.
ಸಂಚಿಕೆಯ ಆಕರ್ಷಕ ವಿನ್ಯಾಸ ಮತ್ತು ಅಂದವಾದ ಮುದ್ರಣವನ್ನು ಶ್ಲಾಘಿಸಿದ ಹೆಗ್ಗಡೆಯವರು ಲಯನ್ಸ್ ಕ್ಲಬ್ ಬಹುಮುಖಿ ಸೇವಾಕಾರ್ಯಗಳ ಬಗ್ಯೆ ಮೆಚ್ಚಚುಗೆ ವ್ಯಕ್ತ ಪಡಿಸಿದರು. ಪ್ರಸಕ್ತ ವರ್ಷದ ಸೇವಾಕಾರ್ಯಗಳಿಗೆ ಶುಭಹಾರೈಸಿದರು.
ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಧರಣೇಂದ್ರ ಕೆ. ಜೈನ್, ಸಂಚಿಕೆಯ ಸಂಪಾದಕ ಕೃಷ್ಣ ಆಚಾರ್ಯ, ಮತ್ತು ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.