ಹೀಲ್ಸ್ ಮಂಗಳೂರು, ಪುಣ್ಯ ಭೂಮಿ ತುಳುನಾಡ ಸೇವಾ ಫೌಂಡೇಶನ್ , ನವ ಜೀವನ ಟ್ರಸ್ಟ್ ಕಾಸರಗೋಡು ಇವರ ಜಂಟಿ ಸಹಭಾಗಿತ್ವದಲ್ಲಿ ಕಿಡ್ನಿ ವೈಫಲ್ಯಕ್ಕೀಡಾದ ಶಶಿಕಾಂತ ಕುಲಾಲ್ ಇವರ ವೈದ್ಯಕೀಯ ಚಿಕಿತ್ಸೆಗೆ ರೂಪಾಯಿ 20,000/- ಹಾಗೂ b.com ನಲ್ಲಿ 86% ಅಂಕ ಪಡೆದ ಪ್ರತಿಭಾವಂತೆ ಬಡ ವಿದ್ಯಾರ್ಥಿ ಕುಮಾರಿ ಪೂಜಾ ಇವರ ಕಾಲೇಜು ಶುಲ್ಕ 15,000/- ರೂಪಾಯಿಗಳನ್ನು ಇಂದು ದಿನಾಂಕ 26-07-2018ರಂದು ಹೀಲ್ಸ್ ಸಂಸ್ಥೆಯ ಕಛೇರಿಯಲ್ಲಿ ಫಲಾನುಭವಿಗಳಿಗೆ ಹಸ್ತಾಂತರಿಸಲಾಯಿತು....
ಈ ಪುಣ್ಯಕಾರ್ಯಕ್ಕೆ ಉದಾರವಾಗಿ ಸಹಕಾರ ನೀಡಿ ನಮ್ಮ ಸಂಸ್ಥೆಯ ದಾನಿಗಳಿಗೂ, ತಮ್ಮ ಅಮೂಲ್ಯವಾದ ಸಮಯವನ್ನು ಈ ಕಾರ್ಯಕ್ಕೆ ಮೀಸಲಿಟ್ಟ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳಿಗೂ ಹೀಲ್ಸ್ ಸಂಸ್ಥೆಯ ವತಿಯಿಂದ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಲಾಯಿತು.