ಮುಂಬಯಿ ಅ.04: ಪರಮಪೂಜ್ಯ ಶ್ರೀ ಶ್ರೀ 108 ಶ್ರೀವಿಶ್ವೇಶತೀರ್ಥ ಶ್ರೀಪಾದಗಳವರ ಪರಮಾನುಗ್ರಹದಿಂದ ಮುಂಬಯಿಯಲ್ಲಿ ನ್ಯಾಯವಾದಿ ಶ್ರೀಮತಿ ಪದ್ಮಾ ಆಚಾರ್ಯ ಇವರ ನೇತ್ರತ್ವದ ಧೀಶಕ್ತಿ ಮಹಿಳಾ ಯಕ್ಷಬಳಗ ಪುತ್ತೂರು ಇವರಿಂದ ಯಕ್ಷಗಾನ ತಾಳಮದ್ದಲೆ ಇಂದಿಲ್ಲಿ ಶನಿವಾರ ಸಂಜೆ ಸಾಂತಾಕ್ರೂಜ್ ಪೂರ್ವದಲ್ಲಿರುವ ಪೇಜಾವರ ಮಠದಲ್ಲಿರುವ ಯತಿ ಚಕ್ರವರ್ತಿ ವಿಶ್ವೇಶತೀರ್ಥ ಸಭಾಗೃಹದಲ್ಲಿ ನೇರವೇರಿತು.
ತಾಳಮದ್ದಲೆ ಕಾರ್ಯಕ್ರಮವನ್ನು ಶಾಖೆಯ ಪ್ರಬಂಧಕ ಪ್ರಕಾಶ ಆಚಾರ್ಯ ರಾಮಕುಂಜ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವಿದ್ವಾನ್ ರಾಮದಾಸ ಉಪಾಧ್ಯಾಯ ರೆಂಜಾಳ, ಹರಿ ಭಟ್, ಮೋಹನ್ ಮಾರ್ನಾಡ್, ಪ್ರಕಾಶ್ ಶೆಟ್ಟಿ ಸುರತ್ಕಲ್, ಕರುಣಾಕರ್ ಶೆಟ್ಟಿ ಕುಕ್ಕುಂದೂರು ಹಾಗೂ ಧೀಶಕ್ತಿ ಮಹಿಳಾ ಯಕ್ಷಬಳಗ ಪುತ್ತೂರು ಕಲಾವಿದರು ಉಪಸ್ಥಿತರಿದ್ದರು.