ಮಂಗಳೂರು: ನಗರದಲ್ಲಿ ಬೆಳದಿರುವ ಭಿಕ್ಷುಕರ ಸಮಸ್ಯೆಗಳಿಂದ ಜನರಿಗೆ ತೊಂದರೆಯಾಗುತ್ತಿದ್ದು, ಆದ್ದರಿಂದ ಭಿಕ್ಷುಕರ ಸಮಸ್ಯೆ ನಿವಾರಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಅಖಿಲ ಭಾರತ ಬ್ಯಾರಿ ಪರಿಷತ್ ಅಪರ ಜಿಲ್ಲಾಧಿಕಾರಿ ಕುಮಾರ್ಗೆ ಮನವಿ ಅರ್ಪಿಸಿತು.
ಈ ಸಂದರ್ಭ ಅಖಲ ಭಾರತ ಬ್ಯಾರಿ ಪರಿಷತ್ನ ಅಧ್ಯಕ್ಷ ಜೆ. ಹುಸೇನ್, ಪ್ರಧಾನ ಕಾರ್ಯದರ್ಶಿ ಯೂಸುಫ್ ವಕ್ತಾರ್, ಬಶೀರ್ ಮೊಂಟೆಪದವು, ಸಿದ್ದೀಕ್ ಫರಂಗಿಪೇಟೆ, ಅಬೂಬಕರ್ ಕಾಲಾಡಿ, ಹಸನಬ್ಬ ಫರಂಗಿಪೇಟೆ, ಮಹಮ್ಮದ್ ಜಸೀರ್ ಮೊದಲಾದವು ಉಪಸ್ಥಿತರಿದ್ದರು.