ಗೋಕುಲದ ಪ್ರೇಮಾ ಎಸ್.ರಾವ್ಗೆ `ಗೋಕುಲ ಕಲಾಶ್ರೀ' ಪ್ರಶಸ್ತಿ ಪ್ರದಾನ
ಮುಂಬಯಿ, ಆ.14: ಬಿಎಸ್ಕೆಬಿ ಅಸೋಸಿಯೇಶನ್ ಗೋಕುಲವು, ಭಾರತದ 72ನೇ ಸ್ವಾತಂತ್ರ್ಯ ದಿನಾಚರಣೆಯನ್ನು ದಿನಾಂಕ 15.8.2018ರ ಬುಧವಾರ ನೇರೂಲ್ ನಲ್ಲಿರುವ ಹಿರಿಯ ನಾಗರಿಕರ ಆಶ್ರಯಧಾಮ 'ಆಶ್ರಯ' ದಲ್ಲಿ ಬೆಳಿಗ್ಗೆ ಧ್ವಜಾರೋಹಣದೊಂದಿಗೆ ಸಂಭ್ರಮಿಸಲಿದೆ.
ಆ ನಿಮಿತ್ತ ಮಧ್ಯಾಹ್ನ 12 ಗಂಟೆಗೆ ಹಿರಿಯ ನಾಗರಿಕರಿಗೆ ಸಹಾಯವಾಗುವಂತಹ ಅವಶ್ಯಕ ವೈದ್ಯಕೀಯ ಸಲಕರಣೆಗಳನ್ನು ಅಲ್ಪ ಬಾಡಿಗೆ ದರದಲ್ಲಿ ಒದಗಿಸುವ ಸೇವೆ `ಆಶ್ರಯ ಸಂಜೀವನಿ-ಸೀನಿಯರ್ ಕೇರ್ ಸೆಂಟರ್'ನ್ನು ಸಂಘದ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಹಾಗೂ ಸರ್ವ ಸದಸ್ಯರುಗಳ ಸಮ್ಮುಖದಲ್ಲಿ, ಮುಖ್ಯ ಅತಿಥಿüಯಾಗಿ ಆಗಮಿಸಲಿರುವ ಅಪೆÇೀಲೋ ಹಾಸ್ಪಿಟಲ್ಸ್, ನವಿಮುಂಬಯಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಡಾ| ನರೇಂದ್ರ ತ್ರಿವೇದಿ ಉದ್ಘಾಟಿಸಲಿದ್ದಾರೆ.
ಅಪರಾಹ್ನ ಡಾ| ಸುರೇಶ್ ಎಸ್. ರಾವ್ ಅಧ್ಯಕ್ಷತೆಯಲ್ಲಿ ಜರಗಲಿರುವ ಸಭಾ ಕಾರ್ಯಕ್ರಮದಲ್ಲಿ, ಬೈಲೂರು ಬಾಲಚಂದ್ರ ರಾವ್ ಅವರು ತಮ್ಮ ಮಾತಾಪಿತರ ಹೆಸರಿನಲ್ಲಿ ಸ್ಥಾಪಿಸಿದ `ಗೋಕುಲ ಕಲಾಶ್ರೀ' ಪ್ರಶಸ್ತಿಯನ್ನು ಗೋಕುಲದ ಕಾರ್ಯಕರ್ತೆ ಪ್ರೇಮಾ ಎಸ್.ರಾವ್ ಅÀವರಿಗೆ ಪ್ರದಾನಿಸುವರು. ಹಾಗೂ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಅತ್ಯುನ್ನತ ಅಂಕಗಳನ್ನು ಗಳಿಸಿದ ಪ್ರತಿಭಾನ್ವಿತ ವಿದ್ಯಾಥಿರ್üಗಳನ್ನು ಪುರಸ್ಕರಿಸಲಿರುವರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ `ಸಾಮಾ ಗ್ರೂಪ್' ಇವರಿಂದ ಸಂಗೀತ ರಸಮಂಜರಿ, ಪ್ರಶಾಂತ್ ಹೆರ್ಲೆ ಹಾಗೂ ವಿದುಷಿ ಸಹನಾ ಭಾರದ್ವಾಜ್ ನಿರ್ದೇಶನದಲ್ಲಿ ಸಂಘದ ಸದಸ್ಯರಿಂದ `ಕೃಷ್ಣ ಕೃಷ್ಣ, ಕೃಷ್ಣ' ಪೌರಾಣಿಕ ಸಂಗೀತ ನಾಟಕವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಪತ್ರಿಕಾ ಪ್ರಕಟಣೆ ತಿಳಿಸಿದೆ.