ಯಂಗ್ ಮೆನ್ಸ್ ಎಜ್ಯುಕೇಶನ್ ಸೊಸೈಟಿಯ 73ನೇ ವಾರ್ಷಿಕೋತ್ಸವ
ಮುಂಬಯಿ: ಮಹಾನಗರದ ಫೆÇೀರ್ಟ್ (ವಿಟಿ) ಪರಿಸರದಲ್ಲಿ ಸುಮಾರು ಏಳುವರೆ ದಶಕಗಳಿಂದ ಸೇವಾನಿರತ ತುಳುಕನ್ನಡಿಗರ ಸಂಚಾಲಕತ್ವದ ಶಿಕ್ಷಣ ಸಂಸ್ಥೆ ಯಂಗ್ಮೆನ್ಸ್ ಎಜ್ಯುಕೇಶನ್ ಸೊಸೈಟಿ (ರಿ.) ತನ್ನ 72ನೇ ವಾರ್ಷಿಕೋತ್ಸವವನ್ನು ಇದೇ ಆ.25ನೇ ಶನಿವಾರ ಸಂಜೆ 6.00 ಗಂಟೆಗೆ ಮಾಟುಂಗಾ ಪೂರ್ವದ (ಸೆಂಟ್ರಲ್ ರೈಲ್ವೇ) ಭಾವುದಾಜಿ ರಸ್ತೆಯಲ್ಲಿನ ಮೈಸೂರು ಅಸೋಸಿಯೇಶನ್ ಮುಂಬಯಿ ಇದರ ಸಭಾಗೃಹದಲ್ಲಿ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ಎನ್.ಪಿ ಸುವರ್ಣ ಅಧ್ಯಕ್ಷತೆಯಲ್ಲಿ ನಡೆಸಲಿದೆ ಎಂದು ಸೊಸೈಟಿಯ ಉಪಾಧ್ಯಕ್ಷ ಆನಂದ ಎ.ಶೆಟ್ಟಿ ತಿಳಿಸಿದ್ದಾರೆ.
Harikrishna Poonarur Jayarama Shetty (Ajanta)
Suresh R Kanchan N P Suvarna
ವಾರ್ಷಿಕೋತ್ಸವದ ಶುಭಾವಸರದಲ್ಲಿ ಮುಖ್ಯ ಅತಿಥಿüಯಾಗಿ ಕನ್ನಡ ಸಾಹಿತ್ಯ ಪರಿಷತ್ತು ಕೇಂದ್ರೀಯ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಗೌರವ ಅತಿಥಿüಗಳಾಗಿ ಅಜಂತಾ ಕೇಟರರ್ಸ್ ಹಾಗೂ ಒರಿಯೆಂಟಲ್ ಹೊಟೇಲ್ಸ್ ಪ್ರೈವೇಟ್ ಲಿಮಿಟೆಡ್ನ ನಿರ್ದೇಶಕ ಇನ್ನಾ ಜಯರಾಮ ಶೆಟ್ಟಿ ಮತ್ತು ಕ್ಲಾಸಿಕ್ ಹೊಟೇಲ್ಸ್ ಪ್ರೈವೇಟ್ ಲಿಮಿಟೆಡ್ನ ನಿರ್ದೇಶಕ ಸುರೇಶ್ ಆರ್.ಕಾಂಚನ್ ಆಗಮಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಎನ್.ಪಿ ಸುವರ್ಣ ಅವರ ಸಂಪಾದಕೀಯದ ಕಾದಂಬರಿಕಾರ ಪ್ರದೀಪ್ಕುಮಾರ್ ಮಂಗಳೂರು ಅವರ ಧಾರ್ಮಿಕ ದರ್ಪಣ ಕೃತಿ ಬಿಡುಗಡೆ ಗೊಳಿಸಲಾಗುವುದು. ಹಾಗೂ ಕನ್ನಡ ಶಾಲಾ ವಿದ್ಯಾಥಿರ್üಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನಿಸಲಿದ್ದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮವಾಗಿ ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ `ರಿಝರ್ವೇಶನ್' ಕನ್ನಡ ಚಲನಚಿತ್ರ ಪ್ರದರ್ಶಿಸಲಾಗುವುದು ಎಂದು ಸೊಸೈಟಿಯ ಗೌ| ಕೋಶಾಧಿಕಾರಿ ಶೇಖರ್ ಎನ್.ಸುವರ್ಣ ತಿಳಿಸಿದ್ದಾರೆ.
ಮಹಾನಗರಿಯ ಹಿರಿಯ ಸಂಸ್ಥೆಯ ಈ ವರ್ಧಂತ್ಯೋತ್ಸವದಲ್ಲಿ ಶಿಕ್ಷಣಪ್ರೇಮಿಗಳನ್ನು ಒಳಗೊಂಡು ಸೊಸೈಟಿಯ ಎಲ್ಲಾ ಪದಾಧಿಕಾರಿಗಳು, ಸದಸ್ಯರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸುವಂತೆ ಸೊಸೈಟಿಯ ಗೌ| ಪ್ರ| ಕಾರ್ಯದರ್ಶಿ ಪಿ.ಎನ್ ಶೆಟ್ಟಿಗಾರ್ ಈ ಮೂಲಕ ವಿನಂತಿಸಿದ್ದಾರೆ.