ಮುಂಬಯಿ, ಆ.23: ಜಿ.ಎಸ್.ಬಿ. ಮಂಡಲ ಡೊಂಬವಲಿ ವತಿಯಿಂದ 7ನೇ ವರ್ಷದ ಸಾಮೂಹಿಕ ಚೂಡಿ ಪೂಜೆ ಹಾಗೂ ಶ್ರೀ ಸತ್ಯನಾರಾಯಣ ಪೂಜೆಯು ಕಲ್ಯಾಣ ಪೂರ್ವದ ಜಲರಾಮ್ ಸಭಾಗೃಹದಲ್ಲಿ ಬಹಳ ವಿಜೃಂಭಣೆಯಿಂದ ಜರಗಿತು.
ಬೆಳಗ್ಗೆ ಗಂಟೆಗೆ ದೇವತಾ ಪ್ರಾರ್ಥನೆ ನಂತರ ಸಮಾಜದ ಸುಹಾಸಿನಿಯರಿಂದ ತುಳಸಿಮಾತೆಗೆ ವಿವಿಧ ಹೂಗಳಿಂದ ಕಟ್ಟಿಮಾಡಿದ ಚೂಡಿಯನ್ನಟ್ಟು ಪೂಜೆ ಮಾಡಿದರು.
ಆನಂತರ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ ಆರತಿ ಮತ್ತು ಪ್ರಸಾದ ವಿತರಣೆ ಮಾಡಲಿಯಿತು. ಈ ಸಂದರ್ಭದಲ್ಲಿ ಕಲ್ಯಾಣ ಮತ್ತು ಡೊಂಬವಲಿ ಆಸುಪಾಸಿನ ಸಮಾಜ ಭಾಂದವರು ಮತ್ತು ಮಂಡಲದ ಪದಾಧಿಕಾರಿಗಳು ಉಪಸ್ಥಿತರಿದ್ದರು.