Wednesday 24th, April 2024
canara news

ಬಂಟರ ಸಂಘ ಅಂಬಾ ಸಮಿತಿಯ ಸಂಸಾರ ದತ್ತು-ವಿದ್ಯಾಥಿರ್sಗಳ ದತ್ತು ಸ್ವೀಕಾರ `ದಿಶಾ' ಕಾರ್ಯಕ್ರಮ

Published On : 02 Sep 2018   |  Reported By : Rons Bantwal


ಹೃದಯಶೀಲತಾ ಸೇವೆ ಶಾಸ್ವತವಾದದು : ಪದ್ಮನಾಭ ಎಸ್.ಪಯ್ಯಡೆ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಸೆ.01: ಮನುಕುಲಕ್ಕೆ ಸಲ್ಲಿಸುವ ಹೃದಯಶೀಲತಾ ಸೇವೆ ಶಾಸ್ವತವಾದದ್ದು. ಅದನ್ನು ಸಂಘದ ಅಂಧೇರಿ ಬಾಂದ್ರಾ ಸಮಿತಿ ವೈಶಿಷ್ಟ್ಯಮಯ, ಅರ್ಥಪೂರ್ಣವಾಗಿ ಸಿದ್ಧಿಸಿದೆ. ಇದೊಂದು ಬಂಟ ಬಂಧುಗಳ ಪಾಲಿನ ಮಾದರಿ ಕಾರ್ಯಕ್ರಮ. ಸಾಮಾಜಿಕ ಮತ್ತು ಆಥಿರ್sಕ ಹಿಂದುಳಿದವರ ಪಾಲಿನ ಜೀವನೋತ್ಸವವೇ ಸರಿ. ಅಂಧೇರಿ ಬಾಂದ್ರಾದ ಈ ಕಾರ್ಯಕ್ರಮ ಮತ್ತು ತತ್ವವನ್ನು ಎಲ್ಲಾ ಪ್ರಾದೇಶಿಕ ಸಮಿತಿಗಳು ಪಾಲಿಸುವಂತಾಗÀಲಿ ಎಂದು ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್.ಪಯ್ಯಡೆ ತಿಳಿಸಿದರು.

ಇಂದಿಲ್ಲಿ ಶನಿವಾರ ಸಂಜೆ ಕುರ್ಲಾ ಪೂರ್ವದಲ್ಲಿನ ಬಂಟರ ಭವನದ ಸ್ವಾಮಿ ಮುಕ್ತಾನಂದ ಸಭಾಗೃಹದ ವಿಕೇ (ಮೆಕ್‍ಕೊೈ ಅಪ್ಲೈಯನ್ಸ್) ಸಮೂಹದ ಕಾರ್ಯಾಧ್ಯಕ್ಷ ಕೆ.ಎಂ ಶೆಟ್ಟಿ ವೇದಿಕೆಯಲ್ಲಿ ಬಂಟರ ಸಂಘ ಮುಂಬಯಿ ಇದರ ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿ ಏರ್ಪಡಿಸಿದ್ದ ಸಂಸಾರ ದತ್ತು ಹಾಗೂ ವಿದ್ಯಾಥಿರ್sಗಳ ದತ್ತು ಸ್ವೀಕಾರದ `ದಿಶಾ' ಕಾರ್ಯಕ್ರಮ ಉದ್ಘಾಟಿಸಿ ಸಭಾಧ್ಯಕ್ಷತೆ ವಹಿಸಿ ಪಯ್ಯಡೆ ಮಾತನಾಡಿದರು.

ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಡಾ| ಆರ್.ಕೆ.ಶೆಟ್ಟಿ ಅವರ ಸಾರಥ್ಯದಲ್ಲಿ ನೆರವೇರಿಸಲ್ಪಟ್ಟ ಕಾರ್ಯಕ್ರಮದಲ್ಲಿ ಗೌರವ ಅತಿಥಿsಗಳಾಗಿ ಬಂಟ್ಸ್ ಸಂಘ ಮುಂಬಯಿ ಉಪಾಧ್ಯಕ್ಷ ಚಂದ್ರಹಾಸ ಕೆ.ಶೆಟ್ಟಿ, ಗೌ| ಪ್ರ| ಕಾರ್ಯದರ್ಶಿ ಸಿಎ| ಸಂಜೀವ ಶೆಟ್ಟಿ, ಗೌ| ಕೋಶಾಧಿಕಾರಿ ಪ್ರವೀಣ್ ಬಿ.ಶೆಟ್ಟಿ, ಜತೆ ಕಾರ್ಯದರ್ಶಿ ಮಹೇಶ್ ಎಸ್.ಶೆಟ್ಟಿ, ಜತೆ ಕೋಶಾಧಿಕಾರಿ ಗುಣಪಾಲ್ ಶೆಟ್ಟಿ ಐಕಳ, ಬಂಟ್ಸ್ ಸಂಘದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿ ಕಾರ್ಯಾಧ್ಯಕ್ಷ ಉಳ್ತೂರು ಮೋಹನ್‍ದಾಸ್ ಶೆಟ್ಟಿ, ಬಾಂಬೇ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ನ್ಯಾ| ಸುಭಾಷ್ ಬಿ.ಶೆಟ್ಟಿ, ದಾನಿಗಳಾದ ಶಕುಂತಳಾ ಸದಾನಂದ ಶೆಟ್ಟಿ, ಶಂಕರ ಶೆಟ್ಟಿ (ರೋನಕ್), ಭಾಸ್ಕರ ಶೆಟ್ಟಿ ಕಾರ್ನಾಡ್, ಸತೀಶ್ ಶೆಟ್ಟಿ ಪೆನಿನ್ಸುಲಾ, ರವೀಂದ್ರ ಎಂ.ಭಂಡಾರಿ, ಸಿಎ| ರಮೇಶ್ ಎ.ಶೆಟ್ಟಿ ಮತ್ತಿತರ ಗಣ್ಯರು ಉಪಸ್ಥಿತರಿದ್ದು 15 ಬಂಟ ಸಂಸಾರ ದತ್ತು ಹಾಗೂ ಸುಮಾರು 65 ವಿದ್ಯಾಥಿರ್sಗಳ ಸ್ವೀಕಾರ ನಡೆಸಿದರು.

ಡಾ| ಆರ್.ಕೆ.ಶೆಟ್ಟಿ ಪ್ರಸ್ತಾವಿಕ ನುಡಿಗಳನ್ನಾಡಿ ಈ ವರ್ಷ ಸಮಾಜಸೇವೆಯ ಪ್ರಧಾನ ಭಾಗವಾಗಿ ಶೈಕ್ಷಣಿಕ ಸೇವೆಯಾಗಿಸಿ ಒಂದು ಹೆಜ್ಜೆ ಮುಂದಿರಿಸಿರುವ ನಮ್ಮ ಸಮಿತಿ ಅಂಧೇರಿ ಬಾಂದ್ರಾ ಪ್ರದೇಶದ ಸುತ್ತಮುತ್ತಲಿನ ಪರಿಸರದಲ್ಲಿ ಆಥಿರ್üಕವಾಗಿ ಹಿಂದುಳಿದ ಕುಟುಂಬಗಳು ಕನಿಷ್ಠ ಸಾಮಾನ್ಯ ನೆಲೆಯ ಬದುಕು ಕಟ್ಟಿಕೊಳ್ಳಲು ಆಸರೆಯಾಗುವ ಹಿತದೃಷ್ಠಿಯಿಂದ ಆ ಕುಟುಂಬಕ್ಕೆ ಬೇಕಾದ ಅಗತ್ಯ ಸೌಲತ್ತುಗಳÀನ್ನು ಒದಗಿಸುವ ಕಾಯಕ ಕೈಗೊಂಡಿದೆ. ಅದೇ ಈ ದಿಶಾ ಕಾರ್ಯಕ್ರಮ. ಇದು ಸ್ವಸ್ಥ ಸಮಾಜಕ್ಕೆ ಪೂರಕ ಆಗುವ ಆಶಯ ನಮ್ಮದಾಗಿದೆ. ನಮ್ಮೊಳಗಿನ ನೂತನ ಸಂಬಂಧಗಳನ್ನು ಹುಟ್ಟುಹಾಕಿದಂತಿದೆ. ಇದು ಎಂದಿಗೂ ಪ್ರದರ್ಶನ ಆಗದೆ ನಿದರ್ಶನದ ಕಾರ್ಯಕ್ರಮವಾಗಿ ಅಖಂದ ಸಮಾಜಕ್ಕೆ ಮಾದರಿಯ ಕಾರ್ಯಕ್ರಮವಾಗಿಸುವೆವು. ಮುಂದೆಯೂ ನಮ್ಮ ನಡಿಗೆ ಮನೆ ಮನೆಗೆ ದಾನಿಗಳ ಸಹಾಯಸ್ತದ ಉದಾರತೆಯಿಂದ ಈ ಸೇವೆ ಸಾಧ್ಯವಾಗಿದೆ ಎಂದರು.

ಮಹೇಶ್ ಶೆಟ್ಟಿ ಮಾತನಾಡಿ ಪ್ರಾದೇಶಿಕ ಸಮಿತಿಯಲ್ಲಿ ಇದೇ ಮೊದಲ ಬಾರಿಗೆ ಇಂತಹ ಮಹತ್ವಪೂರ್ಣ ಕಾರ್ಯಕ್ರಮ ಮಾಡಿದೆ. ಇದು ನಮ್ಮೆಲ್ಲರನ್ನು ಎಚ್ಚರಿಸಿ ಸೇವೆಗೆ ಇನ್ನಷ್ಟು ಪುರಸ್ಕರಿಸಿದೆ. ಸಮಿತಿಯ ದೂರದೃಷ್ಠಿತ್ವವುಳ್ಳ ಸಮಿತಿ ಕಾರ್ಯಧ್ಯಕ್ಷ ಆರ್.ಕೆ.ಶೆಟ್ಟಿ, ವನಿತಾ ನೋಂಡಾ ಮತ್ತು ಪದಾಧಿಕಾರಿಗಳು ಸಂಘದ, ನಮ್ಮೆಲ್ಲರ ಹಿರಿಮೆಯಾಗಿದ್ದಾರೆ.

ಉಳ್ತೂರು ಮೋಹನದಾಸ್ ಮಾತನಾ5ಡಿಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿ ಇದೇ ಮೊದಲ ಬಾರಿಗೆ ವಿಭಿನ್ನ ಕಾರ್ಯಕ್ರಮ ರೂಪಿಸಿದೆ. ಈ ಕಾರ್ಯಕ್ರಮ ಬಂಟರ ಸಹಿತ ಸಮಗ್ರ ಸಮಾಜಕ್ಕೆ ಮಾದರಿ ಮತ್ತು ಅನುಕೂಲಕಾರಿ ಆಗಿದೆ. ಸಮಿತಿ ಬಹಳ ಒಳ್ಳೆಯ ರೀತಿಯಲ್ಲಿ ಬಂಟ ಬಾಂಧವರಿಗೆ ಸಹಾಯ ನೀಡುತ್ತಿದೆ ಎನ್ನಲು ಹೆಮ್ಮೆಯಾಗುತ್ತದೆ ಎಂದರು.

ಈ ಕಾರ್ಯಕ್ರಮ ಚರ್ಚೆ ರೂಪವಾಗಿತ್ತು. ಇದೀಗ ಕಾರ್ಯರೂಪಕ್ಕೆ ಬಂದಿರುವುವು ಶ್ಲಾಘನೀಯ ಎಂದು ಚಂದ್ರಹಾಸ ಶೆಟ್ಟಿ ಮತ್ತು ಸಂಜೀವ ಶೆಟ್ಟಿ ಪ್ರಶಂಸಿದರು.

ಪ್ರವೀಣ್ ಶೆಟ್ಟಿ ಮಾತನಾಡಿ ಬಂಟರ ಸಂಘವು ಮಕ್ಕಳಿಗೆ ವಿದ್ಯಾಥಿರ್sವೇತನ ನೀಡುತ್ತಾ ಬಂದಿದೆ. ಆದರೆ ಇದೇ ಮೊದಲ ಬಾರಿ ಬಂಟರ ಸಂಸಾರವನ್ನು ದತ್ತು ಸ್ವೀಕಾರ ಮಾಡಿ ಒಂದು ಮೈಲಿಗಲ್ಲನ್ನು ಸೃಷ್ಠಿಸಿದೆ ಎಂದರು.

ಬಂಟಗೀತೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಪ್ರಾದೇಶಿಕ ಸಮಿತಿಯಸಮಾಜ ಕಲ್ಯಾಣ ಸಮಿತಿ ಕಾರ್ಯಾಧ್ಯಕ್ಷ ಪ್ರಭಾಕರ ಶೆಟ್ಟಿ ನಾನಯರ ಗರಡಿ, ನಿಧಿ ಸಂಗ್ರಹ ಸಮಿತಿ ಕಾರ್ಯಾಧ್ಯಕ್ಷ ಯಶವಂತ ಶೆಟ್ಟಿ, ಮಾಜಿ ಕಾರ್ಯದರ್ಶಿ ಡಿ.ಕೆ ಶೆಟ್ಟಿ, ಮಾಜಿ ಮಹಿಳಾಧ್ಯಕ್ಷೆ ಸುಜತಾ ಗುಣಪಾಲ್ ಶೆಟ್ಟಿ ಐಕಳ ವೇದಿಕೆಯಲ್ಲಿ ಆಸೀನರಾಗಿದ್ದು, ಬಂಟ್ಸ್ ಸಂಘದ ಪಶ್ಚಿಮ ವಿಭಾಗೀಯ ಪ್ರಾದೇಶಿಕ ಸಮನ್ವಯ ಸಮಿತಿ ಸಮನ್ವಯಕ ಡಾ| ಪ್ರಭಾಕರ ಶೆಟ್ಟಿ ಬೋಳ, ಪ್ರಾದೇಶಿಕ ಸಮಿತಿಯ ಜೊತೆ ಕೋಶಾಧಿಕಾರಿ ಪ್ರಸಾದ್ ಶೆಟ್ಟಿ, ಮಹಿಳಾ ವಿಭಾಗಧ್ಯಕ್ಷೆ ವನಿತಾ ವೈ.ನೋಂಡಾ, ಯುವ ವಿಭಾಗಧ್ಯಕ್ಷ ರಕ್ಷಿತ್ ಶೆಟ್ಟಿ ಮತ್ತಿತರ ಪದಾಧಿಕಾರಿಗಳು ಅತಿಥಿüಗಳಿಗೆ ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು.

ಸುಚಿತ್ರಾ ಶೆಟ್ಟಿ ಪ್ರಾರ್ಥನೆಯನ್ನಾಡಿದರು. ಪ್ರಾದೇಶಿಕ ಸಮಿತಿ ಉಪಾಧ್ಯಕ್ಷ ನ್ಯಾ| ಆರ್.ಜಿ ಶೆಟ್ಟಿ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ರವಿ ಆರ್.ಶೆಟ್ಟಿ ಸಮಿತಿಯ ವಾರ್ಷಿಕ ಚಟುವಟಿಕೆಗಳನ್ನು ಭಿತ್ತರಿಸಿದರು. ಜೊತೆ ಕಾರ್ಯದರ್ಶಿ ರಮೇಶ್ ಡಿ.ರೈ ಕಯ್ಯಾರು ಫಲಾನುಭವಿಗಳ ಯಾದಿ ಪ್ರಕಟಿಸಿದರು. ಬಂಟರವಾಣಿ ಮಾಸಿಕದ ಸಂಪಾದಕ ಅಶೋಕ್ ಪಕ್ಕಳ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಕರುಣಾಕರ ವಿ.ಶೆಟ್ಟಿ ವಂದನಾರ್ಪಣೆಗೈದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here