Saturday 20th, April 2024
canara news

ತೃತೀಯ ವಾರ್ಷಿಕ ಮಹಾಸಭೆ-ಸ್ನೇಹಮಿಲನ ಜರುಗಿಸಿದ ಭವಾನಿ ಫೌಂಡೇಶನ್ ಮುಂಬಯಿ

Published On : 07 Oct 2018   |  Reported By : Ronida Mumbai


ದಾನಧರ್ಮವನ್ನು ಸಮಾನವಾಗಿ ಪರಿಗಣಿಸುವ ಅಗತ್ಯವಿದೆ: ಚೆಲ್ಲಡ್ಕ ಕೆ.ಡಿ ಶೆಟ್ಟಿ  

(ಚಿತ್ರ / ವರದಿ : ರೊನಿಡಾ, ಮುಂಬಯಿ)

ಮುಂಬಯಿ,: ಸಮಾಜೋದ್ಧಾರಗಾಗಿನ ಭವಾನಿ ಪರಿವಾರದ ಶ್ರಮ ಎಲ್ಲರ ಸಹಯೋಗದಿಂದ ಫಲಿಸುತ್ತಿದೆ. ಸಾಮಾಜಿಕ ಕಳಕಳಿಯೇ ನಮ್ಮ ಧ್ಯೇಯೋದ್ದೇಶವಾಗಿದ್ದು, ಪ್ರ್ರಾಮಾಣಿಕ ಸೇವೆಗೆ ಬದ್ಧರಾಗಿ ಸದ್ಯ ಅಳಿಲಸೇವೆಯಲ್ಲಿ ತೊಡಗಿಸಿ ಕೊಂಡಿದ್ದೇವೆ. ಆರೋಗ್ಯ, ಶಿಕ್ಷಣ ಮತ್ತು ಮೂಲಭೂತ ಸೌಲತ್ತು ವಂಚಿತರ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಸೇವಾನಿರತ ನಾವು ಸೇವಾನಿಷ್ಠೆ ಮೂಲಕ ಅದನ್ನು ಸಾರ್ಥಕವಾಗಿಸುತ್ತಿದ್ದೇವೆ. ಬಹುಪಾಲು ದಾನಧರ್ಮವನ್ನು ತಿಳಿಪಡಿಸದೇ ಸೇವಾಸಾಧನಾ ಹೆಜ್ಜೆಗಳನ್ನಿರಿಸುತ್ತಿದ್ದೇವೆ. ಭವಾನಿ ಸಮೂಹದ ಉದ್ಯೋಗಸ್ಥ ಸಹೋದ್ಯೋಗಿಗಳ ಕೈಯಲ್ಲಾದ ವಂತಿಗೆ ನಮ್ಮ ಸೇವಾವೈಖರಿಗೆ ಮಹತ್ತರವಾದ ಬಲತುಂಬಿದ ಕಾರಣವೇ ಈ ಮಟ್ಟಕ್ಕೆ ಸಂಸ್ಥೆ ಬೆಳೆಯಲು ಸಾಧ್ಯವಾಗಿದೆ. ಸರ್ವಧರ್ಮ ಸಮಾಭಾವದ ಸೇವೆಯೇ ನಮ್ಮ ಗುರಿ. ಜಾತಿ, ಧರ್ಮ ಎನ್ನದೆ ಎಲ್ಲರ ಕಷ್ಟದಲ್ಲಿ ಭಾಗಿಯಾಗುವ ಮನೋಭಾವವಾಗಿದೆ. ಭವಿಷ್ಯತ್ತಿನಲ್ಲೂ ನಮ್ಮ ಸೇವೆಯನ್ನು ದೇಶವಿದೇಶಗಳತ್ತ ವಿಸ್ತರಿಸುವ ಆಶಯ ನಮ್ಮಲ್ಲಿದೆ ಎಂದು ಭವಾನಿ ಫೌಂಡೇಶನ್ ಮುಂಬಯಿ ಇದರ ಸಂಸ್ಥಾಪಕ ಅಧ್ಯಕ್ಷÀ ದಡ್ದಂಗಡಿ ಚೆಲ್ಲಡ್ಕ ಕುಸುಮೋದರ ದೇರಣ್ಣ ಶೆಟ್ಟಿ (ಕೆ.ಡಿ ಶೆಟ್ಟಿ) ತಿಳಿಸಿದರು.

 

ಭವಾನಿ ಫೌಂಡೇಶನ್ ಮುಂಬಯಿ ತನ್ನ ತೃತೀಯ ವಾರ್ಷಿಕ ಮಹಾಸಭೆ-ಸ್ನೇಹಮಿಲನವನ್ನು ಇಂದಿಲ್ಲಿ ಬುಧವಾರ ಸಂಜೆ ಕುರ್ಲಾ ಪೂರ್ವದಲ್ಲಿನ ಬಂಟರ ಸಂಘದ ಸ್ವಾಮಿ ಮುಕ್ತಾನಂದ ಸಭಾಗೃಹದಲ್ಲಿ ಜರುಗಿಸಿದ್ದು ಫೌಂಡೇಶನ್‍ನ ಸಂಸ್ಥಾಪಕ ಅಧ್ಯಕ್ಷÀ ಕೆ.ಡಿ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಫೌಂಡೇಶನ್‍ನ ವಿಶ್ವಸ್ಥ ಸದಸ್ಯರಾದ ಸರಿತಾ ಕುಸುಮೋದರ್ ಶೆಟ್ಟಿ, ಜೀಕ್ಷಿತ್ ಕುಸುಮೋದರ್ ಶೆಟ್ಟಿ (ಉಪಾಧ್ಯಕ್ಷ), ಆಡಳಿತ ಮಂಡಳಿ ಸದಸ್ಯರಾದ ನ್ಯಾಯವಾದಿ ಬಿ.ಮೊಯಿದ್ಧೀನ್ ಮುಂಡ್ಕೂರು, ಧರ್ಮಪಾಲ್ ಯು.ದೇವಾಡಿಗ, ಪಂಡಿತ್ ನÀವೀನ್‍ಚÀಂದ್ರ ಆರ್.ಸನೀಲ್, ಚೆಲ್ಲಡ್ಕ ರಾಧಾಕೃಷ್ಣ ಡಿ.ಶೆಟ್ಟಿ, ಚೆಲ್ಲಡ್ಕ ಪ್ರಕಾಶ್ ಡಿ.ಶೆಟ್ಟಿ ಮತ್ತಿತರ ಗಣ್ಯರು ವೇದಿಕೆಯಲ್ಲಿದ್ದು, ಹಿರಿಯ ಮುತ್ಸದ್ಧಿ, ಬಂಟ್ಸ್ ನ್ಯಾಯ ಮಂಡಳಿ ಗೌರವಾಧ್ಯಕ್ಷ ಎಂ.ಡಿ ಶೆಟ್ಟಿ ಮತ್ತು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು ದೀಪ ಪ್ರಜ್ವಲಿಸಿ ಸಭೆಗೆ ಚಾಲನೆಯನ್ನಿತ್ತರು. ಬಳಿಕ ನಡೆಸಲ್ಪಟ್ಟ ವಾರ್ಷಿಕ ಸ್ನೇಹಮಿಲನದಲ್ಲಿ ಮಹಾನಗರದಲ್ಲಿನ ಹಿರಿಯ ಹೊಟೇಲು ಉದ್ಯಮಿಗಳಾದ ಸುಬ್ಬಯ್ಯ ವಿ. ಶೆಟ್ಟಿ (ರಾಮಕೃಷ್ಣ ಹೊಟೇಲು ಸಮೂಹ) ಜಯ ಸಿ.ಸುವರ್ಣ (ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ), ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಕಡಬ ಅಲ್ಲಿನ ಶೈಕ್ಷಣಿಕ ಕಾಂತ್ರಿ ಮಾಡಿದ ಏಮ್ಸ್ ಫಸ್ಟ್ ಗ್ರೇಡ್ ಕಾಲೇಜ್‍ನ ವಿಶ್ವಸ್ಥ ಸದಸ್ಯೆ, ಅಧ್ಯಕ್ಷೆ ಫೌಜಿಯಾ ಬಿ.ಎಸ್., ಹೆಸರಾಂತ ವೈದ್ಯಾಧಿಕಾರಿ ಡಾ| ವಿಜಯ ಶೆಟ್ಟಿ, ಭವಾನಿ ಫೌಂಡೇಶನ್‍ನ ಆಡಳಿತ ಮಂಡಳಿ ಸದಸ್ಯರಾದ ರೋನ್ಸ್ ಬಂಟ್ವಾಳ್, ಪ್ರೇಮನಾಥ ಬಿ.ಶೆಟ್ಟಿ ಮುಂಡ್ಕೂರು, ಗೋಪಾಲಕೃಷ್ಣ ಕುಂದರ್ ಬಜ್ಪೆ, ಶಶಿಕಾಂತ್ ಠಾಕ್ರೆ, ಪರ್ಶುರಾಮ್ ಪುಂಡಲಿಕ್ ತಸ್ಸೋಡೆ ಅವರನ್ನು ಉಪಸ್ಥಿತ ಗಣ್ಯರು ಸನ್ಮಾನಿಸಿ ಅಭಿನಂದಿಸಿದರು.

ಎಂ.ಡಿ ಶೆಟ್ಟಿ ಮಾತನಾಡಿ ಕೆ. ಡಿ ಶೆಟ್ಟಿ ಮತ್ತು ನನ್ನ ಪರಿಚಯ ತುಂಬಾ ಹಳೆಯದ್ದಾಗಿದೆ. ಒಂದು ಸಮಯದಲ್ಲಿ ನಾವೆಬ್ಬರೂ ಜೊತೆಗೆ ಇದ್ದವರು. ಆದರೆ ಇವರು ಎಷ್ಟು ಎತ್ತರಕ್ಕೆ ಬೆಳೆಯುತ್ತಾರೆ ಎಂಬುದನ್ನು ಅರಿಯಲಿಲ್ಲ.ನನ್ನ ಹುಡುಗ ಇವತ್ತು ಇಂತಹ ಸಾಧನೆಗಳ ಶಿಖರಗಳನ್ನು ಏರುವುದನ್ನು ಕಂಡು ತುಂಬಾ ಹೆಮ್ಮೆಯಾಗುತ್ತಿದೆ. ಈಸಂಸ್ಥೆಯು ಅನೇಕ ಸಾಧನೆಗಳ ಶಿಖರಗಳನ್ನು ತನ್ನಾದಾಗಿಸಿಕೊಳ್ಳಲಿ ಎಂದರು.

ಕೆ.ಡಿಶೆಟ್ಟಿ ಪರಿವಾರದ ಸಮಾಜ ಸೇವೆ ಅನುಪಮ ಮತ್ತು ಅನುಕರಣೀಯವಾದುದು. ಇವರ ಸೇವಾ ಮನೋಭಾವದ ಮನಸ್ಸಿನ ಸಂಪತೇ ಶ್ರೇಷ್ಠವಾದದು. ಕುಸುಮೋದರ ಪರಿವಾರ ಮಾಡಿದ ಒಳ್ಳೆತನದ ಫಲ ಇದಾಗಿದ್ದು ಆದರಂತೆ ಇದನ್ನುಮುನ್ನಡೆಸಲೂ ಸರ್ವಶ್ರೇಷ್ಠ ಮಕ್ಕಳನ್ನೂ ಪಡೆದಿದ್ದಾರೆ. ಕೆ.ಡಿ ಶೆಟ್ಟಿ ಅವರ ಮತ್ತು ಹೆತ್ತವರ ಒಳ್ಳೆತನದಿಂದ ಇದೆಲ್ಲಾ ಪ್ರಾಪ್ತಿಯಾಗಿದೆ. ನಮ್ಮಲ್ಲಿನ ಪ್ರತಿವೊರ್ವರೂ ಹುಟ್ಟೂರಿನಿಂದ ಬದುಕು ಹರಸಿ ಬರಿಗೈಯಲ್ಲಿ ಮುಂಬಯಿಗೆ ಬಂದವರು. ಈ ಮುಂಬಯಿ ಕೂಡಾ ನಮ್ಮೆಲ್ಲರಿಗೆ ಮರ್ಯಾದೆ, ಸಂಪತ್ತು ಮತ್ತು ಅಸ್ತಿತ್ವ ನೀಡಿದೆ. ಎಲ್ಲವುದಕ್ಕೂ ದೇವರ ಅನುಗ್ರಹವೇ ಮೂಲತ್ವವಾಗಿದೆ. ಸರ್ವರ ಸಂಬಂಧಗಳಿಂದ ಸಮಾಜೋದ್ಧಾರ ಸುಲಭವಾಗುವುದು ಎಂದÀು ಐಕಳ ಹರೀಶ್ ತಿಳಿಸಿದರು.

ಚೆಲ್ಲಡ್ಕ ರಾಧಾಕೃಷ್ಣ ಶೆಟ್ಟಿ ಮಾತನಾಡಿ ನಮ್ಮ ಪಾಲಿಗೆ ಇಂತಹ ಅಣ್ಣಕ್ಕಿಂತ ಮಿಗಿಲಾದವರು ಮತ್ತೊಬ್ಬರಿಲ್ಲ. ಅವರೇ ನಮ್ಮೆಲ್ಲರ ಸರ್ವಸ್ವ. ನನ್ನ ಪಾಲಿಗೆ ಏನಾದರೂ ಸನ್ಮಾನ, ಗೌರವಗಳು ಲಭಿಸಿದ್ದಲ್ಲಿ ಅದು ಅಣ್ಣ ದಯೆ ಮತ್ತು ಎಲ್ಲವೂ ಅವರಿಗೆ ಸಲ್ಲುತ್ತದೆ. ಅವರ ಹೆಸರಿನಿಂದ ಗುರುತಿಸಲ್ಪಡುವ ನಾವು ಇಂತಹ ಅಣ್ಣನನ್ನು ಪಡೆದ ಭಾಗ್ಯವಂತÀರು. ಒಂದು ಕಾಲದಲ್ಲಿ ಒಪೆÇ್ಪತ್ತಿನ ಆಹಾರಕ್ಕೂ ಕಾತರಿಸುತ್ತಿದ್ದ ನಮ್ಮನ್ನು ಅಪ್ಪಮ್ಮ ಸಾಕಿದ ಆ ಕಹಿ ನೆನಪುಗಳನ್ನು ನಮ್ಮಣ್ಣ ಇಂದಿಗೂ ಮೆಲುಕು ಹಾಕುತ್ತಾರೆ. ಇಂದು ಅಮ್ಮನ ನಾಮದಲ್ಲೇ ಸಂಸ್ಥೆಯನ್ನು ಹುಟ್ಟುಹಾಕಿ ಸೇವಾ ನಿರತನಾಗಿ ಜಗತ್ತಿಗೆ ಮಾದರಿ ಆರುವುದು ನಮ್ಮ ಹಿರಿಮೆಯಾಗಿದೆ ಎಂದರು.

ಬಂಟ್ಸ್ ಸಂಘ ಮುಂಬಯಿ ಇದರ ಗೌ| ಪ್ರ| ಕಾರ್ಯದರ್ಶಿ ಸಿಎ| ಸಂಜೀವ ಶೆಟ್ಟಿ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ್ ಎಸ್.ಪೂಜಾರಿ, ನಾಡಿನ ಹಿರಿಯ ಸಾಹಿತಿ ಡಾ| ಸುನೀತಾ ಎಂ.ಶೆಟ್ಟಿ, ಬೋಂಬೆ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ನ್ಯಾ| ಸುಭಾಷ್ ಬಿ.ಶೆಟ್ಟಿ, ಬಂಟ್ಸ್ ನ್ಯಾಯ ಮಂಡಳಿ ಕಾರ್ಯಧ್ಯಕ್ಷ ರವೀಂದ್ರ ಎಂ.ಅರಸ, ಸಮಾಜ ಸೇವಕರಾದ ಎ.ಬಿ ಶೆಟ್ಟಿ, ಕರ್ನಿರೆ ವಿಶ್ವನಾಥ ಶೆಟ್ಟಿ, ಸೀತಾರಾಮ ಎಂ.ಶೆಟ್ಟಿ ಕುಲಾಬಾ, ಪತ್ರಕರ್ತ ಚಂದ್ರಶೇಖರ್ ಪಾಲೆತ್ತಾಡಿ, ಸುಧಾಕರ್ ಎಸ್.ಹೆಗ್ಡೆÀ ಅತಿಥಿü ಅಭ್ಯಾಗತರಾಗಿದ್ದು ಸಂದರ್ಭೋಜಿತವಾಗಿ ಮಾತನಾಡಿ ಭವಾನಿ ಫೌಂಡೇಶನ್ ಸೇವಾವೈಖರಿ ಪ್ರಶಂಸಿಸಿ ಶುಭಾರೈಸಿದರು. ಕು| ಫೌಜಿಯಾ, ಡಾ| ವಿಜಯ ಶೆಟ್ಟಿ, ಗೋಪಾಲಕೃಷ್ಣ ಕುಂದರ್ ಮತ್ತು ಶಶಿಕಾಂತ್ ಠಾಕ್ರೆ ಸನ್ಮಾನಕ್ಕೆ ಉತ್ತರಿಸಿ ಅಭಿವಂದಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಹೊಟೇಲು ಉದ್ಯಮಿ ರಘುರಾಮ ಕೆ.ಶೆಟ್ಟಿ ಬೋಳ (ಅವೆನ್ಯೂ ಹೊಟೇಲು ಸಮೂಹ), ಬಂಟ್ಸ್ ಸಂಘ ಮುಂಬಯಿ ಜತೆ ಕಾರ್ಯದರ್ಶಿ ಮಹೇಶ್ ಎಸ್.ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಸುಧಾಕರ್ ಹೆಗ್ಡೆ, ಗೌ| ಪ್ರ| ಕಾರ್ಯದರ್ಶಿ ಚಿತ್ರಾ ಆರ್.ಶೆಟ್ಟಿ, ಸಮಾಜ ಸೇವಕರಾದ ಪ್ರಭಾಕರ ಎಲ್.ಶೆಟ್ಟಿ, ವಿರಾರ್ ಶಂಕರ್ ಶೆಟ್ಟಿ, ರತ್ನಾಕರ್ ಶೆಟ್ಟಿ ಮುಂಡ್ಕೂರು, ಶಾಂತರಾಮ ಬಿ.ಶೆಟ್ಟಿ, ಉಳ್ತೂರು ಮೋಹನ್‍ದಾಸ್ ಶೆಟ್ಟಿ, ಸಿಎ| ಐ.ಆರ್ ಶೆಟ್ಟಿ, ಬಿ.ಆರ್ ಶೆಟ್ಟಿ, ಬೊಳ್ನಾಡು ಚಂದ್ರಹಾಸ ರೈ, ಎಸ್.ಬಿ ಶೆಟ್ಟಿ ಮುಲುಂಡ್, ಕುತ್ಪಾಡಿ ರಾಮಚಂದ್ರ ಆರ್.ಗಾಣಿಗ, ಚಂದ್ರಶೇಖರ್ ಆರ್.ಬೆಳ್ಚಡ, ದೇವದಾಸ್ ಎಲ್.ಕುಲಾಲ್, ಸಿಎ| ಹರೀಶ್ ಶೆಟ್ಟಿ, ನಂದಿಕೂರು ಜಗದೀಶ್ ಶೆಟ್ಟಿ, ಭಾಸ್ಕರ್ ಶೆಟ್ಟಿ ಪುಣೆ, ರಾಘು ಪಿ.ಶೆಟ್ಟಿ, ರವಿ ಎಸ್.ದೇವಾಡಿಗ, ಅಶೋಕ್ ಶೆಟ್ಟಿ, ಮಲ್ಲಿಕಾ ಶೆಟ್ಟಿ, ಭಾಸ್ಕರ್ ಶೆಟ್ಟಿ (ಸಿಬಿಡಿ), ಮನೋರಮ ಎನ್.ಬಿ ಶೆಟ್ಟಿ, ಕಿಶೋರ್‍ಕುಮಾರ್ ಶೆಟ್ಟಿ ಕುತ್ಯಾರು, ತಾಳಿಪಾಡಿಗುತ್ತು ಭಾಸ್ಕರ್ ಶೆಟ್ಟಿ, ಚಂದ್ರಶೇಖರ್ ಪಾಲೆತ್ತಾಡಿ, ದಯಾನಂದ ಶೆಟ್ಟಿ, ಗಿರೀಶ್ ಸಾಲ್ಯಾನ್, ಜಯಂತ್ ಪಕ್ಕಳ, ಎಂ.ಬಿ ವಿಠಲ್ ರೈ, ಇದ್ರಾಳಿ ದಿವಾಕರ ಶೆಟ್ಟಿ, ವಾರಂಗ ಪ್ರವೀಣ್ ಎಸ್.ಶೆಟ್ಟಿ ಸೇರಿದಂತೆ ಫೌಂಡೇಶನ್‍ನ ಜತೆ ಕೋಶಾಧಿಕಾರಿಗಳಾದ ಅಂಕಿತಾ ಜೆ. ಶೆಟ್ಟಿ ಮತ್ತು ನವೀನ್ ಎಸ್.ಶೆಟ್ಟಿ, ಸದಸ್ಯರಾದ ದಿನೇಶ್ ಎಸ್.ಶೆಟ್ಟಿ ಮಣಿಪುರ (ಸಕಾಲ್), ಮುರಳೀಧರ್ ವಿ.ಪಾಲ್ವೆ, ರಾಜಲಕ್ಷ್ಮೀ ಸುಬ್ರಹ್ಮಣ್ಯಂ, ಫೌಂಡೇಶನ್‍ನ ಮಾತೃಸಂಸ್ಥೆಯಾದ ಭವಾನಿ ಶಿಪ್ಪಿಂಗ್ ಸರ್ವೀಸಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್‍ನ ಉನ್ನತಾಧಿಕಾರಿಗಳು, ಉದ್ಯೋಗಸ್ಥ ಮಂಡಳಿ (ಪರಿವಾರ) ಸೇರಿದಂತೆ ವಿವಿಧ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

ಮಾತೆ ಕಟಿಲೇಶ್ವರಿಯನ್ನು ಸ್ತುತಿಸಿ, ಸ್ವರ್ಗೀಯ ಚೆಲ್ಲಡ್ಕ ದೇರಣ್ಣ ಶೆಟ್ಟಿ ಮತ್ತು ಭವಾನಿ ಡಿ.ಶೆಟ್ಟಿ ಅವರನ್ನು ಸ್ಮರಿಸಿ ಭಾವಚಿತ್ರಕ್ಕೆ ಪುಷ್ಪಾಂಜಲಿಗೈದು ಕಾರ್ಯಕ್ರಮಕ್ಕೆ ಚಾಲನೆಯನ್ನೀಡಲಾಯಿತು. ಹೇಮಲತಾ ಶೆಟ್ಟಿ ಪ್ರಾರ್ಥನೆಗೈದರು. ಉಪಾಧ್ಯಕ್ಷ ಜೀಕ್ಷಿತ್ ಕುಸುಮೋದರ್ ಶೆಟ್ಟಿ ಸ್ವಾಗತಿಸಿ ಪ್ರಸ್ತವನೆಗೈದÀು ಸ್ಲೈಡ್ ಶೋ ಮೂಲಕ ಭವಾನಿ ಸಮೂಹದ ಮತ್ತು ಫೌಂಡೇಶನ್‍ನ ಸೇವಾ ಮಾಹಿತಿಯನ್ನಿತ್ತರು. ಮೊಯಿದ್ಧೀನ್ ಮುಂಡ್ಕೂರು ಮತ್ತು ಧರ್ಮಪಾಲ್ ದೇವಾಡಿಗ ಫೌಂಡೇಶನ್‍ನ ಅನುಪಮ ಸೇವೆ, ಕಾರ್ಯನಿಷ್ಠೆ ಮತ್ತು ಸೇವಾ ವೈಖರಿಯನ್ನು ಸ್ಥೂಲವಾಗಿ ತಿಳಿಸಿದರು.

ಫೌಂಡೇಶನ್‍ನ ಗೌರವ ಪ್ರಧಾನ ಕಾರ್ಯದರ್ಶಿ ಸೀಮಾ ಪವಾರ್, ಗತ ವಾರ್ಷಿಕ ಮಹಾಸಭೆ ವರದಿ ವಾಚಿಸಿದರು. ಜತೆ ಕೋಶಾಧಿಕಾರಿ ಚೈತಾಲಿ ಪೂಜಾರಿ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಪ್ರಣೀಲ್ ಹಿವಾಲೆ ಸನ್ಮಾನಿತರನ್ನು ಪರಿಚಯಿಸಿದರು. ವಿಶೇಷ ಆಮಂತ್ರಿತರಾಗಿ ಉಪಸ್ಥಿತ ಗಣ್ಯರೆಲ್ಲರನ್ನೂ ಕೆ.ಡಿ ಶೆಟ್ಟಿ ಮತ್ತು ಟ್ರಸ್ಟಿಗಳು ಪುಷ್ಫಗುಪ್ಚ ನೀಡಿ ಗೌರವಿಸಿದರು. ಕರ್ನೂರು ಮೋಹನ್ ರೈ ಕಾರ್ಯಕ್ರಮ ನಿರೂಪಿಸಿದರು. ಅಶೋಕ್ ಪಕ್ಕಳ ಅತಿಥಿüಗಣ್ಯರನ್ನು ಪರಿಚಯಿಸಿ ಅಭಾರ ಮನ್ನಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಸಮಾಪನ ಗೊಂಡಿತು.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here