ಮಂಗಳೂರು: ಚೆಲ್ಲಡ್ಕ ದಡ್ಡಂಗಡಿ ಕುಸುಮೋದರ ಡಿ ಶೆಟ್ಟಿ ಅರ್ಪಿಸುವ ಚಂದ್ರಹಾಸ ಆಳ್ವ ಚೆಲ್ಲಡ್ಕ ನಿರ್ದೇಶನದ, ಭವಾನಿ ಕ್ರಿಯೇಶನ್ಸ್ ರವರ `ಕಟೀಲು ಶ್ರೀ ದೇವಿ ಚರಿತೆ' ಕನ್ನಡ ಧಾರಾವಾಹಿ ಅ.21ರಿಂದ ಚಂದನ ವಾಹಿನಿಯಲ್ಲಿ ಮಧ್ಯಾಹ್ನ 12ರಿಂದ 12.30ರವರೆಗೆ ಪ್ರಸಾರವಾಗ ಲಿದೆ ಎಂದು ನಿರ್ದೇಶಕ ಚಂದ್ರಹಾಸ ಆಳ್ವ ಹೇಳಿದರು.
ಅವರು ನಗರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪುರಾಣ ಕತೆಗಳನ್ನು ಆಧರಿಸಿ ಈ ಧಾರಾವಾಹಿ ಚಿತ್ರೀಕರಣ ಮಾಡಲಾ ಗಿದೆ ಜನರ ನಂಬಿಕೆಗೆ ದಕ್ಕೆ ಬರ ಬಾರದು. ಸೃಷ್ಠಿಯ ಮೂಲಕ ಕತೆ ಆರಂಭವಾಗುತ್ತದೆ.ಇದರಲ್ಲಿ ಪರಶುರಾಮ ಚರಿತೆ ಇದೆ ಪುರಾಣಗಳ ವಿಶಿಷ್ಠ ಅನುಭವನ್ನು ಜನತೆಗೆ ತಲುಪಿಸುವ ಉದೇಶ ಇಟ್ಟುಕೊಂಡಿ ದ್ದೇವೆ ಎಂದರು.
ಚೆಲ್ಲಡ್ಕ ದಡ್ಡಂಗಡಿ ರಾಧಾಕೃಷ್ಣ ಡಿ ಶೆಟ್ಟಿ ಮತ್ತು ಚೆಲ್ಲಡ್ಕ ದಡ್ಡಂಗಡಿ ಪ್ರಕಾಶ್ ಡಿ ಶೆಟ್ಟಿ ನಿರ್ಮಾಪಕರಾಗಿ ದ್ದಾರೆ. ಚಿತ್ರೀಕರಣಕ್ಕೆ ಶ್ರೀ ಬೆಂಗಳೂ ರಿನ ಆಕಾಶ ಪರ್ವ ಸಂಗೀತ ನೀಡಿದ್ದಾರೆ ಆರ್.ಕೆ. ಮಂಗಳೂರು ಛಾಯಾಗ್ರಹಣ, ದಯೇಶ್, ಸವಿರಾಜ್ ಕಲ್ಲಡ್ಕ ವರ್ಣಾಲಂಕಾರ ನೀಡಿದ್ದಾರೆ. ದಯೇಶ್ ಮತ್ತು ಕರುಣಾಕರ ರೈ ಚೆಲ್ಲಡ್ಕರವರ ಕಲೆಯಿದ್ದು, ರಾಜರಾಜೇಶ್ವರಿ ವಸ್ತ್ರಭಂಡಾರ ಮಸೂರುರವರ ವಸ್ತ್ರಾಭರಣ, ಪ್ರಕಾಶ್ ಬೆಂಗಳೂರುರವರ ಸಾಹಸ, ದಿನೇಶ್ ಆಚಾರ್ಯರವರ ಗ್ರಾಫಿಕ್ಸ್ ವೈಶಾಲಿ ಉಡುಪಿಯವರ ಸಂಕಲನ ಇದೆ. ಮದನ ಹರಿಣಿಯವರ ನೃತ್ಯ ನಿರ್ದೇಶನವಿದೆ. ಪ್ರಚಾರ: ಕರ್ನೂರು ಮೋಹನ್ ರೈ. ಹಿನ್ನಲೆ ಗಾಯಕರಾಗಿ ಸತೀಶ ಶೆಟ್ಟಿ ಪಟ್ಲ, ಅಶ್ವಿನ್ ಶರ್ಮ, ಐಶ್ವರ್ಯ ರಂಗರಾಜನ್, ಅನನ್ಯಾ ಭಗತ್, ದಿವ್ಯನಿಧಿ ರೈ ಇದ್ದಾರೆ. ತಾರಾಂಗಣದಲ್ಲಿ ಶಂಕರ ಭಟ್, ಹರೀಶ ಭಟ್ ಬೊಂತಿಮಗರು, ಶ್ರೀಪಾದ ಹೆಗಡೆ, ಪ್ರದೀಪ ಚಂದ್ರ ಕುತ್ವಾಡಿ, ಡಾ. ರಾಜೇಶ ಬೆಜ್ಪಂಗಳ, ಡಾ ರಾಘವೇಂದ್ರ ರಾವ್, ಶೀತಲ್ಶೆಟ್ಟಿ, ಅಶೋಕ ಪಕ್ಕಳ, ಜೀ ಡ್ರಾಮಾ ಜ್ಯೂನಿಯರ್ ತುಷಾರ್, ರೋಹಿತ್ ಕುಮಾರ್ ಕಟೀಲು, ಉದಯ ಕುಮಾರ್ ಶೆಟ್ಟಿ ಇನ್ನಾ, ಪುಷ್ಪಾಕರ ರೈ , ಕೀತಿ ಮೈಸೂರು, ರಾಜೇಶ ವಿಟ್ಲ, ಸುಕೃತಿ ಮೈಸೂರು, ಜಗಜೀವನರಾಮ ಶೆಟ್ಟಿ, ಶೇಖರ ಕಾರ್ಕಳ, ಲಿಖಿತ ಕುದ್ದುಪದವು, ಪ್ರತೀಕ ಆರ್ ಶೆಟ್ಟಿ, ಚರಿತ್ ಜಿ. ಆಳ್ವ, ರಾಜೇಶ್ ಎಸ್, ಸನತ್ ರೈ ಮೈರಾ ಸಹ ನಿರ್ದೇ ಶಕರಾಗಿ ಕೀರ್ತಿರಾಜಿ ಮೈಸೂರು, ಮಂಜುನಾಥ ತುಮಕೂರು, ದಯೇಶ, ಸಹಾಯಕ ನಿರ್ದೇಶಕರಾಗಿ ಕುಮಾರಿ ಐಶು ಇದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಕರ್ನೂರು ಮೋಹನ್ ರೈ, ಡಾ.ರಾಘವೇಂದ್ರ ರಾವ್, ಜಗಜೀವನ್ ರಾಂ ಶೆಟ್ಟಿ, ಪುಷ್ಪಾಕರ ರೈ,ಚಲ್ಲಡ್ಕ ರಾಧಾಕೃಷ್ಣ ರೈ ಇದ್ದರು