ಮುಂಬಯಿ,ಅ.27: `ಕಥಾಬಿಂದು ಸಾಹಿತ್ಯ ಸಾಂಸ್ಕೃತಿಕ ವೇದಿಕೆ' ಮಂಗಳೂರು ಆಶ್ರಯದಲ್ಲಿ ನಡೆಯುವ ಸಾಹಿತ್ಯ ಸಾಂಸ್ಕೃತಿಕ ಸಂಭ್ರಮದಲ್ಲಿ 2018ನೇ ಸಾಲಿನ `ಸೌರಭ ರತ್ನ ರಾಜ್ಯ ಪ್ರಶಸ್ತಿ'ಯನ್ನು ಈ ಬಾರಿ ಡಾ| ರಜನಿ ವಿ.ಪೈ ಅವರಿಗೆ ಪ್ರದಾನಿಸಿ ಗೌರವಿಸಲಿದೆ ಎಂದು ಕಥಾಬಿಂದು ಸಂಸ್ಥೆ ಪ್ರಕಟಿಸಿದೆ.
ಮುಂಬಯಿ ಮಹಾನಗರದಲ್ಲಿದ್ದು ಹಲವಾರು ವರ್ಷಗಳಿಂದ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸಮಾಜ ಸೇವೆ ಮೂಲಕ ಜನಾನುರೆಣಿಸಿದ ಸಮಾಜ ಸೇವಕಿ ಡಾ| ರಜನಿ ಪೈ ಅವರಿಗೆ ಪ್ರದಾನಿಸಲಿದ್ದು, ಇದೇ ನ.15ರಂದು ಮಂಗಳೂರು ಮಂಗಳಾದೇವಿ ಕಲಾಮಂದಿರದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಸಲ್ಪಡುವ ಸಮಾರಂಭದಲ್ಲಿ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಗೌರವ ಸನ್ಮಾನ ಸಮಾರಂಭ ನಡೆಯಲಿದೆ ಎಂದು ಕಥಾಬಿಂದು ಸಂಸ್ಥೆ ತಿಳಿಸಿದೆ.