Thursday 28th, March 2024
canara news

ಕನ್ನಡ ವಿಭಾಗ ಮುಂಬಯಿ ವಿವಿ ನಡೆಸಿದ `ಕನ್ನಡ ಪ್ರಜ್ಞೆ ನಿನ್ನೆ ಇಂದು ನಾಳೆ' ವಿಚಾರ ಸಂಕಿರಣ

Published On : 28 Oct 2018   |  Reported By : Rons Bantwal


ದೂರ ಎನ್ನುವುದು ಸೆಳೆತವನ್ನು ಹೆಚ್ಚಿಸುತ್ತದೆ : ಪೆÇ್ರ| ಬರಗೂರು ರಾಮಚಂದ್ರಪ್ಪ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಅ.27: ಮುಂಬಯಿ ನಿಮ್ಮ ಭೂಗೋಳ. ಆದರೆ ಕರ್ನಾಟಕ ನಿಮ್ಮ ಚರಿತ್ರೆ. ಬಹುಶಃ ಕರ್ನಾಟಕದಲ್ಲಿ ಇರುವವರಿಕ್ಕಿಂತ ಹೆಚ್ಚು ಕರ್ನಾಟಕದ ಚರಿತ್ರೆ ನಿಮ್ಮಲ್ಲಿದೆ. ಅದಕ್ಕೆ ನೀವು ದೂರ ಇರುವುದೇ ಕಾರಣ. ದೂರ ಎನ್ನುವುದು ಯಾವಾಗಲೂ ಸೆಳೆತವನ್ನು ಹೆಚ್ಚಿಸುತ್ತಾ ಹೋಗುತ್ತದೆ. ನಮ್ಮ ಅಸ್ಮಿತೆಯನ್ನು ಜಾಗೃತಗೊಳಿಸುವಂತ ಕ್ರಿಯೆ ಇದೆಯಲ್ಲಾ ಅದು ಯಾರುಯಾರಿಗೆ ಇರುತ್ತೆ ಅವರು ಹೆಚ್ಚುಹೆಚ್ಚು ಕನ್ನಡ ಭಾಷೆ, ಸಾಂಸ್ಕೃತಿಕ ವಿನ್ಯಾಸಗಳನ್ನು ಜಾಗೃತಗೊಳಿಸುವ ಪ್ರಯತ್ನ ಮಾಡುತ್ತಾರೆ.ಆ ಕೆಲಸವನ್ನು ಮುಂಬಯಿವಾಸಿ ಕನ್ನಡಿಗರು ಬಹಳಷ್ಟು ಕ್ರೀಯಾಶೀಲ, ಪ್ರಾಮಾಣಿಕವಾಗಿ ಶಿಸ್ತುಬದ್ಧರಾಗಿ ನಿಭಾಯಿಸಿದ್ದಾರೆ ಎಂದು ನಾಡಿನ ಪ್ರಸಿದ್ಧ ಸಿನಿಮಾ ನಿರ್ದೇಶಕ, ಪ್ರಸಿದ್ಧ ಸಾಹಿತಿ ನಾಡೋಜ ಪೆÇ್ರ| ಬರಗೂರು ರಾಮಚಂದ್ರಪ್ಪ ತಿಳಿಸಿದರು.

ಸಾಂತಾಕ್ರೂಜ್ ಪೂರ್ವದಲ್ಲಿನ ವಿದ್ಯಾನಗರಿಯ ಜೆ.ಪಿ ನಾಯಕ್ ಭವನದಲ್ಲಿ ಇಂದಿಲ್ಲಿ ಶನಿವಾರ ಪೂರ್ವಾಹ್ನ ನಡೆಸಲ್ಪಟ್ಟ ಕೃತಿ ಬಿಡುಗಡೆ, ಪದವಿ ಪ್ರದಾನ, ಗೌರವಾರ್ಪಣೆ ಹಾಗೂ `ಕನ್ನಡ ಪ್ರಜ್ಞೆ ನಿನ್ನೆ ಇಂದು ನಾಳೆ' ವಿಚಾರ ಸಂಕಿರಣ ಸೇರಿದಂತೆ ನಡೆಸಲ್ಪಟ್ಟ ಚತುರ್ಥ ಕಾರ್ಯಕ್ರಗಳ ಅಧ್ಯಕ್ಷತೆ ವಹಿಸಿ ಪೆÇ್ರ| ಬರಗೂರು ಮಾತನಾಡಿದರು.

ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿ ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಅತಿಥಿü ಅಭ್ಯಾಗತರುಗಳಾಗಿ ಬರೋಡ ಅಲ್ಲಿನ ಉದ್ಯಮಿ ದಯಾನಂದ ಬೋಂಟ್ರಾ, ಬೆಂಗಳೂರುನ ಪ್ರಾಧ್ಯಾಪಕ ಡಾ| ಮನೋನ್ಮನಿ ಉದಯ, ತುಮಕೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ| ಗೀತಾ ವಸಂತ, ಹಿರಿಯ ಸಾಹಿತಿ ಎಸ್.ಕೆ ಹಳೆಯಂಗಡಿ ಬರೋಡ, ಕರ್ನಾಟಕ ಸಂಘ ಮುಂಬಯಿ ಕಾರ್ಯದರ್ಶಿ ಡಾ| ಭರತ್‍ಕುಮಾರ್ ಪೆÇಲಿಪು, ಅಕ್ಷಯ ಮಾಸಿಕದ ಸಂಪಾದಕ ಡಾ| ಈಶ್ವರ್ ಅಲೆವೂರು, ತುಮಕೂರು ಸಿದ್ದಗಂಗಾ ವಿದ್ಯಾಲಯದ ಪ್ರಾಚಾರ್ಯ ನಿರಂಜನ್ ಸಿ.ಎಸ್, ಕವಿ-ಲೇಖಕ ಗೋಪಾಲ ತ್ರಾಸಿ ಉಪಸ್ಥಿತರಿದ್ದರು.

ನಮ್ಮಂತವರಿಗೆ ಮುಂಬಯಿಗೆ ಬರುವುದೇ ಸಂತಸ ತರುತ್ತದೆ. ಇತ್ತೀಚೆಗತೂ ಮುಂಬಯಿ ವಿವಿ ಕನ್ನಡ ವಿಭಾಗಕ್ಕೆ ಬರುವುದೆಂದರೆ ಆ ಅನುಭವವೇ ಬೇರೆ. ಇದೊಂದು ಸಮ್ಮೀಶ್ರ ಸಂಭ್ರಮ ಸಮಾರಂಭ. ಯಾವುದೋ ಸರಕಾರಕ್ಕೆ ಉಳಿಗಾಲ ಇರುತ್ತದೆಯೋ ಗೊತ್ತಿಲ್ಲ. ಆದರೆ ಇಂತಹ ಕಾರ್ಯಕ್ರಮಗಳಿಂದ ಕನ್ನಡವಂತೂ ಶತಮಾನಗಳತ್ತ ಮುನ್ನಡೆಯುವುದು ಸತ್ಯ. ಮುಂಬಯಿ ಜನತೆಯ ಪರಸ್ಪರ ಸ್ವೇಹತೆ ಮತ್ತು ಆದರ್ಶದಿಂದ ಇದೆಲ್ಲಾ ಸಾಧ್ಯ. ಅದುದರಿಂದಲೇ ಇದೊಂದು ಸಾಂಕೇತಿಕವಾಗಿ ಒಗ್ಗೂಡಿಸುವ ಸಾಮರಸ್ಯದ ಸಂಭ್ರಮವೇ ಸರಿ. ಜಿ.ಎನ್ ಉಪಾಧ್ಯ ಅವರ ಸಾರಥ್ಯದಿಂದ ಮುಂಬಯಿ ವಿವಿ ಕನ್ನಡ ವಿಭಾಗಕ್ಕೆ ಸಾರ್ವಜನಿಕ ಮುಖ ಬಂದಿದೆ. ಇದೇ ವಿಶ್ವ ವಿದ್ಯಾಲಯಗೆ ಬೇಕಾದದ್ದು. ವಿಶ್ವ ವಿದ್ಯಾಲಯಗಳು ಜನ ಸಂಪರ್ಕದಿಂದ ಕಡಿದು ಹೋಗಬಾರದು. ನಿರಂತರ ಸಂಪರ್ಕದಿಂದ ಸ್ನೇಹತೆ ಸಿದ್ಧಿಸಿ ಕೊಳ್ಳಬೇಕು. ಹೊರನಾಡು, ಒಳನಾಡ ಕನ್ನಡಿಗರು ಎನ್ನುವುದು ಬರೇ ಭೌಗೋಳಿಕ ಕರ್ನಾಟಕದ ವಿಚಾರ ಆದರೆ ಕನ್ನಡಿಗರೆಲ್ಲರ ಒಗ್ಗಟ್ಟು ಒಂದು ಚರಿತ್ರೆಯಾಗಿದೆ. ಅಸ್ಮಿತೆಯನ್ನು ಜಾಗ್ರತವಾಗಿಸುವ ಕ್ರಿಯೆ ಅಷ್ಟೇ. ಸಾಹಿತಿಗಳಿಗೆ ಸಾಮಾಜಿಕ ಜವಾಬ್ದಾರಿ ಇರಬೇಕು. ಇಲ್ಲವಾದಲ್ಲಿ ಸಾಧಕರಿಗೆ ವೇದಿಕೆ ಮೇಲಿನ ಹೆಸರುಗಳು ಮಾತ್ರ ಇಂದು ಉಳಿದಿರುವುದು. ಸದ್ಯ ರಾಜಕೀಯ ಸ್ಥಿತಿಗತಿಗಳಿಂದ ಜಾತಿಗಳನ್ನು ಜೈಲುಗಳಲ್ಲಿ ಕೂಡು ಹಾಕುವ ಕಾರ್ಯ ನಡೆಯುತ್ತಿದೆ. ಇದರಿಂದ ನಮ್ಮಲ್ಲಿನ ಒಟ್ಟು ಸಾಹಿತ್ಯದ ವಿಭಜನೆವಾಗುವುದು. ಆದ್ದರಿಂದ ಜನರಲ್ಲಿ ಹುಸಿ ವಿಚಾರಗಳನ್ನು ಬಿತ್ತದೆ ವಾಸ್ತವಗಳನ್ನು ಬಿತ್ತಿರಿ. ಎಲ್ಲೂ ಭಿನ್ನಾಭಿಪ್ರಾಯ ತಪ್ಪಲ್ಲ. ಆದರೆ ಭಿನ್ನಾಭಿಪ್ರಾಯಗಳು ಬೀದಿ ಜಗಳವಾಗಬಾರದು ಎಂದು ಬರಗೂರು ಸಲಹಿದರು.


ಮುಂಬಯಿನಲ್ಲಿ ಸುಮಾರು 20ಲಕ್ಷ ಕನ್ನಡಿಗರಿದ್ದು ಕನ್ನಡಕ್ಕಾಗಿ ಶ್ರಮಿಸುತ್ತಿದ್ದಾರೆ. ಆದರೆ ಕರ್ನಾಟಕ ಸರಕಾರಕ್ಕಾಗಲಿ, ಜನತೆಗೂ ಈ ಪ್ರಜ್ಞೆ ಇದೆಯೇ ಎನ್ನುವುದೇ ಯಕ್ಷಪ್ರೆಶ್ನೆಯಾಗಿದೆ. ಕನ್ನಡದ ಜಾಗೃತಿ ಮುಂಬಯಿಯಲ್ಲಿ ಯಾವತ್ತೂ ಇದ್ದೇಇದೆ. ಭಾಷೆ, ಸಂಸ್ಕೃತಿ ಸಾಯುತ್ತದೆ ಎನ್ನುವುದು ಮಾಮೂಲಿ ಶಬ್ದವಾಗಿಯೇ ಹೊರತು ಮುಂಬಯಿನಲ್ಲಿ ಅಂತೂ ಇವು ಬೆಳೆಯುತ್ತಾ ಉಳಿದು ಮುಂದುವರಿಯುತ್ತಿವೆ. ವಿಶ್ವ ವಿದ್ಯಾಲಯ ಜನರತ್ತ ಹೋಗಬೇಕು ಅನ್ನುವ ಕಾಯಕವನ್ನು ಡಾ| ಜಿ.ಎನ್ ಉಪಾಧ್ಯ ಮಾಡಿರುವುದು ಶ್ಲಾಘನೀಯ. ಆ ಮೂಲಕ ಉಪಾಧ್ಯ ವಿಭಾಗವನ್ನು ಜೀವಂತವಾಗಿಸಿರುವ ಪ್ರಜ್ಞೆ ತೋರಿಸಿದ್ದಾರೆ. ನಿನ್ನೆ ನೋಡಿದನ್ನು ನಾವು ಇಂದು ಕಾಣುತ್ತೇವೆ ಆದರೆ ನಾಳೆ ನೋಡುವೆವೋ ಎನ್ನುವ ಪ್ರಜ್ಞೆಯನ್ನು ಜಾಗೃತ ಗೊಳಿಸುವ ಉದ್ದೇಶ ಮುಂಬಯಿ ವಿವಿ ಕನ್ನಡ ವಿಭಾಗ ಮಾಡಿ ತೋರಿಸುತ್ತಿದೆ. ಕನ್ನಡದ ಪ್ರಜ್ಞೆಯನ್ನು ಪ್ರಜ್ಞಾವಂತವಾಗಿರಿಸುವ ಈ ವೇದಿಕೆ ಸೂಕ್ತವಾಗಿದೆ ಎಂದು ಪಾಲೆತ್ತಾಡಿ ಮುಂಬಯಿ ಕನ್ನಡಿಗರ ಬಗ್ಗೆ ಒಳನಾಡ ಕರ್ನಾಟಕದವರಿಗೆ ಎಷ್ಟು ಜಾಗೃತಿಯಿದೆ ಎನ್ನುವುದನ್ನು ತಿಳಿಯಬೇಕು ಎಂದು ಎಚ್ಚರಿಸಿದರು.

ಕಾರ್ಯಕ್ರಮದಲ್ಲಿ ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ಸ್ಥಾಪಕಾಧ್ಯಕ್ಷ ಯಕ್ಷಗುರು ಅಜೆಕಾರು ಬಾಲಕೃಷ್ಣ ಶೆಟ್ಟಿ ಇವರಿಗೆ (ಪತ್ನಿ ಆಶಾ ಬಾಲಕೃಷ್ಣ ಅವರನ್ನೊಳಗೊಂಡು) ಹಾಗೂ ಸೃಜನಶೀಲ ಕಲಾವಿದ ಮೋಹನ್ ಮಾರ್ನಾಡ್ ಇವರಿಗೆ ಪೆÇ್ರ| ರಾಮಚಂದ್ರಪ್ಪ ಅವರು ಶಾಲು ಹೊದಿಸಿ ಸ್ವರ್ಣಪದಕ ಪ್ರದಾನಿಸಿಕೃತಿ ಅರ್ಪಿಸಿ ಗೌರವಾರ್ಪಣೆಗೈದರು.

ಮುಂಬಯಿಯಲ್ಲಿ ಕನ್ನಡದ ಶುದ್ಧತಾ ಉಸಿರಾಟ ನಿರಂತರವಾಗಿದ್ದು ಕನ್ನಡದ ಸಾರ್ಥಕ ಸೇವೆ ನಡೆಯುತ್ತಲಿದೆ. ಸಂಶೋಧನಾ ವಿಷಯವು ಸಾಹಿತ್ಯಾತ್ಮರಿಗೆ ರೋಚಕÀ ಕ್ಷೇತ್ರವಾಗಿದ್ದು ಇದಕ್ಕೆ ಮುಂಬಯಿಯ ಕೊಡುಗೆ ಮತ್ತು ಅವೀನಾಭಾವ ಸಂಬಂಧವಿದೆ. ಸಂಶೋಧನಾ ಪರಂಪರೆ ಇಲ್ಲಿ ನಿರಂತರವಾಗಿ ಮುನ್ನಡೆಯುತ್ತಿದ್ದು ಸಂಶೋಧನಾ ಕಾಯಕ ಯಜ್ಞ ಕಾರ್ಯದಂತೆ. ಆದುದರಿಂದ ಬಲು ಸಾಹಸದ ಕೆಲಸವಾಗಿದ್ದು ಸಂಶೋಧನೆ ಅಂದರೆ ಭೌತಿಕ ಆಸ್ತಿ ಎಂದು ಡಾ| ಮನೋನ್ಮನಿ ಅಭಿಪ್ರಾಯ ಪಟ್ಟರು.

ಗೋಪಾಲ ತ್ರಾಸಿ ಮಾತನಾಡಿ ಅಕ್ಕ ಸಮ್ಮೇಳನಕ್ಕೆ ನನ್ನ ಆಯ್ಕೆಯಲ್ಲ,ಅಹ್ವಾನವಾಗಿತ್ತು. ಒದೊಂದು ಕನ್ನಡ ಸಾಹಿತ್ಯ ಸಮ್ಮೇಳನಕ್ಕಿಂತ ವಿಶ್ವ ಕನ್ನಡ ಸಮ್ಮೇಳನವಾಗಿದೆ ಎನ್ನುತ್ತ ಶಿಸ್ತು ಬದ್ಧ ಸಮ್ಮೇಳನದ ಬಗ್ಗೆ ಪಾಲ್ಗೊಂಡ ತನ್ನ ಅನುಭವಗಳನ್ನು ಭಿತ್ತರಿಸಿದರು.

ವಿಭಾಗದಿಂದ ಪಿಹೆಚ್‍ಡಿ ಪೂರೈಸಿದ ನಿರಂಜನ್ ಸಿ.ಎಸ್, ಎಂಎ ಪದವೀಧರರಾದ ಅಪರ್ಣ ರಾವ್, ಜಯ ಪೂಜಾರಿ ಕೊಜಕೊಳ್ಳಿ, ದಿನಕರ್ ಚಂದನ್ ಇವರಿಗೆ ಪೆÇ್ರ| ರಾಮಚಂದ್ರಪ್ಪ ಅವರು ಪದವಿ ಪ್ರದಾನಿಸಿ ಶುಭಾರೈಸಿದರು. ಅಂತೆಯೇ ಅಕ್ಕಾ ಸಮ್ಮೇಳನದಲ್ಲಿ ಪಾಲ್ಗೊಂಡು ಕವಿತೆ ವಾಚಿಸಿದ ಸೃಜನಶೀಲಕವಿ ಗೋಪಾಲ ತ್ರಾಸಿ ಚಿತ್ರಕಲಾವಿದರಾದ ದೇವದಾಸ್ ಎಸ್.ಶೆಟ್ಟಿ, ಜಯ ಸಿ.ಸಾಲ್ಯಾನ್, ಲೇಖಕಿ ಹೇಮಾ ಎಸ್.ಅವಿೂನ್ (ಇಂದಿರಾ ಅವಿೂನ್, ಸದಾನಂದ್ ಅವಿೂನ್, ಕು| ನಿಖಿತಾ ಎಸ್.ಅವಿೂನ್ ಪರಿವಾರ ಸಹಿತ) ಚಿಣ್ಣರ ಬಿಂಬದ ತರಬೇತುದಾರರಾದ ಗೀತಾ ಹೇರಳ (ಶಿಕ್ಷಕಿ), ವನಿತಾ ವೈ.ನೋಂದ, ರೂಪಾ ಶೆಟ್ಟಿ, ರಾಜೇಶ್ವರಿ ಶೆಟ್ಟಿ ಅವರನ್ನು ಗೌರವಿಸಿದರು.

ಮುಂಬಯಿ ವಿವಿ ಕನ್ನಡ ವಿಭಾಗದ ಮುಖ್ಯಸ್ಥ ಹಾಗೂ ಪ್ರಾಧ್ಯಾಪಕ ಡಾ| ಜಿ.ಎನ್ ಉಪಾಧ್ಯ ಸ್ವಾಗತಿಸಿ ಪ್ರಸ್ತಾವನೆಗೈದು ಕನ್ನಡದ ನಾಡುನುಡಿ ಸಾಹಿತ್ಯ ಸಂಸ್ಕೃತಿ ಇವೆಲ್ಲವನ್ನೂ ಒಳಗೊಂಡ ಈ ಕಾರ್ಯಕ್ರಮ ಇದಾಗಿದೆ. ಸಹೃದಯಿ ವಿಭೂತಿಗೆ ನಮೋ ಎನ್ನಲೇ ಬೇಕು. ಎಲ್ಲರಲ್ಲೂ ಕನ್ನಡದ ಡಿಂಡಿಮ ಬಾರಿಸಿ ಮನ ಪುಳಕಗೊಳ್ಳುವ ಸಂದರ್ಭ ಇದಾಗಿದೆ. ಇದು ದೀಪಾಳಿಯ ಮುನ್ನವಾದ ಕನ್ನಡದ ಹಬ್ಬವಾಗಿದೆ ಎಂದರು. ಹಾಗೂ ಗಣ್ಯರಿಗೆಲ್ಲರಿಗೂ ಶಾಲು ಹೊದಿಸಿ ಗ್ರಂಥಗೌರವ ನೀಡಿ ಗೌರವಿಸಿ ಅಭಿವಂದಿಸಿದರು.

ಡಾ| ಶ್ಯಾಮಲಾ ಪ್ರಕಾಶ್ ಬಸವಣ್ಣರ ವಚನಗೈದರು. ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಸುಧಾಕರ್ ಶೆಟ್ಟಿ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಸಿದರು. ಶಿವರಾಜ್ ಎಂ.ಜಿ ವಂದಿಸಿದರು.




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here