Friday 19th, April 2024
canara news

ಭಾರತ್ ಬ್ಯಾಂಕ್‍ನ ಘೋಡ್‍ಬಂದರ್ ರೋಡ್ ಸ್ಥಳಾಂತರಿತ ಶಾಖೆ ಶುಭಾರಂಭ

Published On : 31 Oct 2018   |  Reported By : Rons Bantwal


ಭದ್ರತೆಯ ಧ್ಯೋತಕ ಭಾರತ್ ಬ್ಯಾಂಕ್ : ಮೇಯರ್ ವಿೂನಾಕ್ಷಿ ಶಿಂಧೆ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಅ.29: ಭಾರತ್ ಕೋ.ಆಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ಇದರ ಸ್ಥಳಾಂತರಿತ ಘೋಡ್‍ಬಂದರ್ ರೋಡ್ ಶಾಖೆಯನ್ನು ಸ್ಥಾನೀಯ ಮಾನ್ಪಾಡ ಚಿತಲ್‍ಸಾರ್ ಇಲ್ಲಿನ ದೋಸ್ತಿ ಇಂಪೇರಿಯಾ ಕಟ್ಟಡದ ತಳ ಮಹಡಿಯಲ್ಲಿ ಇಂದಿಲ್ಲಿ ಸೋಮವಾರ ಬೆಳಿಗ್ಗೆ ಶುಭಾರಂಭಗೊಳಿಸಲಾಯಿತು. ಥಾಣೆ ಮುನ್ಸಿಪಾಲ್ ಕಾಪೆರ್Çೀರೇಶನ್‍ನ ಮೇಯರ್ ವಿೂನಾಕ್ಷಿ ರಾಜೇಂದ್ರ ಶಿಂಧೆ (ಪೂಜಾರಿ) ರಿಬ್ಬನ್ ಬಿಡಿಸಿ ಶಾಖೆ ಉದ್ಘಾಟಿಸಿದರು.

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ, ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷ ಮತ್ತು ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ಅವರನ್ನೊಳಗೊಂಡು ಸ್ಥಾನೀಯ ಉದ್ಯಮಿ ಅಶೋಕ್‍ಕುಮಾರ್ ಹೆಗ್ಡೆ ಜೊತೆಗೂಡಿ ದೀಪ ಬೆಳಸಿ ಶಾಖೆಗೆ ವಿಧ್ಯುಕ್ತವಾಗಿ ಚಾಲನೆ ನೀಡಿದರು. ಜಯ ಸಿ.ಸುವರ್ಣ ಅವರು ಸೇಫ್ ಲಾಕರ್ ಸೇವೆಗಳನ್ನು ಸೇವಾರ್ಪಣೆಗೈದರು.

ಬ್ಯಾಂಕ್‍ನ ಉಪಕಾರ್ಯಾಧ್ಯಕ್ಷೆ ನ್ಯಾಯವಾದಿ ರೋಹಿಣಿ ಜೆ.ಸಾಲ್ಯಾನ್ ಎಟಿಎಂ ಸೇವೆ ಉದ್ಘಾಟಿಸಿ ಹ್ಯಾಪ್ಪಿ ಬ್ಯಾಂಕಿಂಗ್ ಆಲ್ ಟು ಯೂ ಎಂದರು.

ಕನಿಷ್ಠಾವಧಿಯಲ್ಲಿ ಗರಿಷ್ಠ ಸಾಧನೆಗೈದ ಭಾರತ್ ಬ್ಯಾಂಕ್ ಭದ್ರತೆಯ ಧ್ಯೋತಕವಾಗಿದೆ. ಪ್ರಗತಿಯ ಶೋಧದ ಪಥದಲ್ಲಿ ಮುನ್ನಡೆಯುವ ಈ ಬ್ಯಾಂಕ್ ನಮ್ಮ ಪರಿಸರದಲ್ಲಿ ಸೇವಾ ನಿರತವಾಗಿರುವುದು ಇಲ್ಲಿನ ನಾಗರೀಕರ ಹಿರಿಮೆಯಾಗಿದೆ. ಬ್ಯಾಂಕ್‍ನ ಸಾರ್ವಜನಿಕ ಕೊಡುಗೆ ಅನುಪಮ ಎಂದು ಮೇಯರ್ ವಿೂನಾಕ್ಷಿ ನುಡಿದರು.

ಹಣಕಾಸು ಸಂಸ್ಥೆಯ ಸ್ಥಳಾಂತರ ಆಂದರೆ ಅಭಿವೃದ್ಧಿಯ ಸಂಕೇತ. ಇದೀಗಲೇ 102 ಶಾಖೆಗಳ ಮೂಲಕ ಸೇವಾ ನಿರತ ಭಾರತ್ ಬ್ಯಾಂಕ್ ಕೇವಲ ಬಿಲ್ಲವರ ಮಾತ್ರವಲ್ಲ ಸಮಗ್ರ ಭಾರತೀಯರ ಹೆಮ್ಮೆಯ ಸಹಕಾರಿ ಸಂಸ್ಥೆಯಾಗಿದೆ. ಸಾವಿರಾರು ಶಾಖೆಗಳನ್ನು ತೆರೆದು ಇನ್ನೂ ಹೆಮ್ಮರವಾಗಿ ಬೆಳೆದು ಗ್ರಾಹಕರ ಪಾಲಿನ ಕಲ್ಪವೃಷವಾಗಲಿ ಎಂದು ಚಂದ್ರಶೇಖರ ಪೂಜಾರಿ ಶುಭೇಚ್ಛ ಕೋರಿದರು.

ಅಶೋಕ್‍ಕುಮಾರ್ ಮಾತನಾಡಿ ಇದೊಂದು ಅನುಭವಸ್ಥ ಬ್ಯಾಂಕ್. ನಾನು ಅನಿವಾಸಿ ಭಾರತೀಯನಾಗಿದ್ದು ಬ್ಯಾಂಕಿಂಗ್ ಬಗ್ಗೆ ಅರಿತಿದ್ದರೂ ಭಾರತ್ ಬ್ಯಾಂಕ್‍ನ ಕಾರ್ಯವೈಖರಿ ಅದ್ಭುತವಾದುದು. ರಾಷ್ಟ್ರೀಕೃತ ಬ್ಯಾಂಕ್‍ಗಳಷ್ಟೇ ಸಮಾನ ಸೇವೆ ಒಂದು ಸಹಕಾರಿ ಬ್ಯಾಂಕ್ ನೀಡುತ್ತಿದ್ದರೆ ಅದು ಭಾರತ್ ಬ್ಯಾಂಕ್ ಎನ್ನುವುದೇ ಅಭಿಮಾನದಿಂದ ತಿಳಿಸಬಲ್ಲೆನು. ಗ್ರಾಹಕರನ್ನು ಮನೆಮಂದಿಯಂತೆ ಕಾಣುವ ಸಿಬ್ಬಂದಿಗಳ ಸೇವೆ ಸ್ತುತ್ಯಾರ್ಹ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮತ್ತೆ ಹೊಸರೂಪ ಪಡೆದು ಸೇವೆಗೆ ಸಜ್ಜಾಗಿ ನಿಂತ ಭಾರತ್ ಬ್ಯಾಂಕ್ ಗ್ರಾಹಕರ ಪಾಲಿನ ವಿಶ್ವಸ್ಥ ಪಥಸಂಸ್ಥೆಯಾಗಿದೆ. ತುಳು-ಕನ್ನಡಿಗರ ಸಾರಥ್ಯದ ಬೃಹತ್ ಬ್ಯಾಂಕ್ ಇದಾಗಿದ್ದು, ಸೇವೆಯಲ್ಲಿ ಮುನ್ನಡೆದು ರಾಷ್ಟ್ರವ್ಯಾಪಿಯಾಗಿ ವಿಸ್ತೃತಗೊಳ್ಳಲಿ ಎಂದು ಗಣೇಶ್ ಪೂಜಾರಿ ನುಡಿದರು.

ಈ ಶುಭಾವಸರದಲ್ಲಿ ಉದ್ಯಮಿ ಗಣೇಶ್ ಆರ್.ಪೂಜಾರಿ, ಪ್ರವೀಳಾ ಜಿ.ಪೂಜಾರಿ, ಡಾ| ಸಂಜಯ್ ವಾಲಂಜ್, ಸದಾನಂದ್ ಆರ್.ಪೂಜಾರಿ, ಅನಿಲ್ ತಿವಾರಿ, ರಾಘವ ಕೆ.ಕುಂದರ್ ವಿಕ್ರೋಲಿ, ರವಿ ಆರ್.ಪೂಜಾರಿ, ಹರೀಶ್ ಡಿ.ಸಾಲ್ಯಾನ್ ಬಜಗೋಳಿ, ಶಂಕರ್ ಪೂಜಾರಿ, ಜಯಂತಿ ಆರ್.ಪೂಜಾರಿ, ಪ್ರೇಮಾನಂದ್ ಆರ್.ಕುಕ್ಯಾನ್, ಜಸ್ಮೀನ್ ಜತ್ತನ್ನ, ವಿಜಯಾ ಕೃಷ್ಣ ಪೂಜಾರಿ, ಶಂಕರ್ ಕೆ.ಸುವರ್ಣ ಖಾರ್, ಜಗನ್ನಾಥ್ ಅವಿೂನ್ ಉಪ್ಪಳ ಮತ್ತಿತರ ಗಣ್ಯರು ಭಾರತ್ ಬ್ಯಾಂಕ್‍ನ ನಿರ್ದೇಶಕರುಗಳಾದ ಜ್ಯೋತಿ ಕೆ.ಸುವರ್ಣ, ಭಾಸ್ಕರ್ ಎಂ.ಸಾಲ್ಯಾನ್, ಗಂಗಾಧರ್ ಜೆ. ಪೂಜಾರಿ, ಸೂರ್ಯಕಾಂತ್ ಜೆ.ಸುವರ್ಣ, ನ್ಯಾ| ರಾಜಾ ವಿ.ಸಾಲ್ಯಾನ್, ಶಾರದಾ ಸೂರು ಕರ್ಕೇರ, ದಾಮೋದರ ಸಿ.ಕುಂದರ್, ಪುರುಷೋತ್ತಮ ಎಸ್.ಕೋಟ್ಯಾನ್, ಪ್ರೇಮನಾಥ್ ಪಿ.ಕೋಟ್ಯಾನ್, ಮೋಹನ್‍ದಾಸ್ ಎ.ಪೂಜಾರಿ, ಸಿಇಒ ಮತ್ತು ಆಡಳಿತ ನಿರ್ದೇಶಕ ಸಿ.ಆರ್ ಮೂಲ್ಕಿ, ಮಾಜಿ ನಿರ್ದೇಶಕರಾದ ಎನ್.ಎಂ ಸನೀಲ್, ಹರೀಶ್ಚಂದ್ರ ಮೂಲ್ಕಿ, ಅಶೋಕ್ ಎಂ.ಕೋಟ್ಯಾನ್, ಕೆ.ಜಿ ರಘವೇಂದ್ರ ಉಪಸ್ಥಿತರಿದ್ದು ಬ್ಯಾಂಕ್‍ನ ಸರ್ವೋನ್ನತಿಗೆ ಶುಭಕೋರಿದರು.

ಶ್ರೀ ಶೇಖರ ಶಾಂತಿ ಉಳ್ಳೂರು ತಮ್ಮ ಪೌರೋಹಿತ್ಯದಲ್ಲಿ ಗಣಹೋಮ, ಸತ್ಯನಾರಾಯಣ ಮಹಾಪೂಜೆ, ವಾಸ್ತು ಪೂಜೆ, ನೆರವೇರಿಸಿ ಆಶೀರ್ವಚನಗೈದರು. ಗಂಗಾಧರ ಕಲ್ಲಾಡಿ ತೀರ್ಥಪ್ರಸಾದ ವಿತರಿಸಿದರು.ಪವಿತ್ರ ಜೆ.ಪೂಜಾರಿ ಮತ್ತು ಜಿತೇಶ್ ಪೂಜಾರಿ ದಂಪತಿ ಹಾಗೂ ಸಿದ್ಧಾಂತ್ ಜಾಧವ್ ಪೂಜೆಯ ಯಜಮಾನತ್ವ ವಹಿಸಿದ್ದರು.

ಬ್ಯಾಂಕ್‍ನ ಪ್ರಧಾನ ಪ್ರಬಂಧಕ ನಿತ್ಯಾನಂದ ಎಸ್.ಕಿರೋಡಿಯನ್ (ಮುಖ್ಯ ಮಾಹಿತಿ ಅಧಿಕಾರಿ), ಉಪ ಪ್ರಧಾನ ಪ್ರಬಂಧಕರಾದ ಪ್ರಭಾಕರ್ ಜಿ.ಸುವರ್ಣ, ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಾದ ಸುನೀಲ್ ಎ.ಗುಜರನ್, ವಿಜಯ್ ಪಾಲನ್, ವಿವಿಧ ಶಾಖೆಗಳ ಮುಖ್ಯಸ್ಥರುಗಳಾದ ಜನಾರ್ದನ್ ಅವಿೂನ್ (ಥಾಣೆ), ರವಿ ಎಸ್.ಕೋಟ್ಯಾನ್ (ಭಾಂಡೂಪ್), ರತ್ನಾಕರ್ ಬಿ. ಪೂಜಾರಿ (ಭಿವಂಡಿ), ರತ್ನಾಕರ್ ಆರ್.ಸಾಲ್ಯಾನ್ (ಕಲೀನಾ), ಅರ್ಚನಾ ಯು.ಸುವರ್ಣ (ಕಲ್ವಾ), ಶಾಖಾ ಸಹಾಯಕ ವ್ಯವಸ್ಥಾಪಕಿ ಕಾಂತಿ ಕರ್ಕೇರ, ಗ್ರಾಹಕರು, ಹಿತೈಷಿಗಳು ಹಾಜರಿದ್ದರು.
ಬ್ಯಾಂಕ್‍ನ ಪ್ರಧಾನ ಪ್ರಬಂಧಕರೂ ಅಭಿವೃದ್ಧಿ ಇಲಾಖಾ ಮುಖ್ಯಸ್ಥರಾದ ದಿನೇಶ್ ಬಿ.ಸಾಲ್ಯಾನ್ ಸ್ವಾಗತಿಸಿ ಅತಿಥಿüಗಳನ್ನು ಪರಿಚಯಿಸಿದರು. ಕೌಶಿಕ್ ಸಾಲ್ಯಾನ್ ಪ್ರಸ್ತಾವನೆಗೈದರು. ಕು| ನೇಹಾ ಅವಿೂನ್ ಕಾರ್ಯಕ್ರಮ ನಿರೂಪಿಸಿದರು. ಶಾಖೆಯ ಮುಖ್ಯಸ್ಥ ಮಹೇಶ್ ಬಿ.ಅವಿೂನ್ ವಂದಿಸಿದರು.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here