"ದೀಪಾವಳಿಯು ಸದಾ ಹೊಸ ಚಿಂತನೆ, ಕ್ರಿಯಾಶೀಲತೆ ಮತ್ತು ಪರಸ್ಪರ ಸಂಬಂಧಗಳ ಗಟ್ಟಿಗೊಳ್ಳುವಿಕೆಗೆ ವೇದಿಕೆಯಾಗಬೇಕು. ದೀಪಾವಳಿ ಬಂತೆಂದರೆ ಬೆಳಕಿನ ಬಾಗಿಲು ತೆರೆದಂತೆ. ಬೆಳಕು ಕತ್ತಲೆಯನ್ನು ಹೊಡೆದೋಡಿಸುವಂತೆ ದೀಪಾವಳಿ ಹಬ್ಬದ ಮಧುರ ಕ್ಷಣಗಳು ಎಲ್ಲರ ಬದುಕಿನಲ್ಲಿ ದುಃಖಗಳನ್ನು ನಿವಾರಿಸಿ ಸಂತಸ ತರಲಿ . ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳಲ್ಲಿ ಜ್ಞಾನಾರ್ಜನೆ ಮಾಡುವ ಹೊಸ ಹುರುಪು ಮೂಡಲಿ, ಜ್ಞಾನದ ಬೆಳಕಿನ ಉತ್ಸವವಾಗಿ ಈ ಹಬ್ಬದ ಆಚರಣೆಯಾಗಲಿ " ಎಂದು ಪುತ್ತೂರು ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಾಜೆ ತಿಳಿಸಿದರು.
ಅವರು ಕುಂಜಾರುಗಿರಿ ಪಾಜಕದ ಆನಂದತೀರ್ಥ ವಿದ್ಯಾಲಯದಲ್ಲಿ ದೀಪಾವಳಿ ಪ್ರಯುಕ್ತ ಹಮ್ಮಿಕೊಂಡ ಸಾಂಸ್ಕೃತಿಕ ಕಾರ್ಯಕ್ರಮ "ಹಾಸ್ಯ ಹಬ್ಬ " ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಂಶುಪಾಲೆ ಗೀತಾ ಎಸ್. ಕೋಟ್ಯಾನ್ , ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಹಾಸ್ಟೆಲ್ ಮೇಲ್ವಿಚಾರಕರು ಭಾಗವಹಿಸಿದ್ದರು. ಆಡಳಿತಾಧಿಕಾರಿ ಹಾಗೂ ಕಾರ್ಯಕ್ರಮ ಸಂಯೋಜಕ ಗುರುದತ್ ಸೋಮಯಾಜಿ ಅತಿಥಿಗಳನ್ನು ಸ್ವಾಗತಿಸಿ ವಂದಿಸಿದರು.
ತದನಂತರ ಆನಂದತೀರ್ಥ ಹಾಸ್ಟೆಲ್ ವಿದ್ಯಾರ್ಥಿಗಳಿಂದ ಕಾರ್ಯಕ್ರಮ ವೈವಿಧ್ಯ ಜರುಗಿತು .