Thursday 28th, March 2024
canara news

ಗೋಕುಲವಾಣಿ ದೀಪಾವಳಿ ವಿಶೇಷಾಂಕ ಕಥಾ ಸ್ಪರ್ಧೆಯ ಫಲಿತಾಂಶ

Published On : 11 Nov 2018   |  Reported By : Rons Bantwal


ವಿಜಯ ಹೂಗಾರ ಬೆಂಗಳೂರು ಅವರ `ನದಿಗಿಲ್ಲ ದಡದ ಹಂಗು' ಪ್ರಥಮ


ಮುಂಬಯಿ, ನ.11: ಬಿ.ಎಸ್.ಕೆ.ಬಿ ಎಸೋಸಿಯೇಶನ್ ಸಯಾನ್ ಮುಂಬಯಿ ಇದರ ಮುಖಪತ್ರಿಕೆ ಗೋಕುಲ ಮಾಸಿಕವು ಏರ್ಪಡಿಸಿದ್ದ 2118ನೇ ಸಾಲಿನ ದೀಪಾವಳಿ ವಿಶೇಷಾಂಕ ಕಥಾ ಸ್ಪರ್ಧೆಯ ಫಲಿತಾಂಶ ಪ್ರಕಟಿಸಿದೆ.

ಆಯ್ಕೆಯಂತೆ ಪ್ರಥಮ ಬಹುಮಾನವು ವಿಜಯ ಹೂಗಾರ ಬೆಂಗಳೂರು ಅವರ `ನದಿಗಿಲ್ಲ ದಡದ ಹಂಗು' ಇದಕ್ಕೆ ರೂಪಾಯಿ11,000/- ಪ್ರಾಪ್ತಿಯಾಗಿದೆ. ಅಂತೆಯೇ ದ್ವಿತೀಯ ಬಹುಮಾನವು ಶ್ರೀ ವಿದ್ಯಾ ಗುರುಪ್ರಸಾದ್ ಕಾರ್ಕಳ ಅವರ `ಆಳುಪರ ಕೊನೆಯ ಅರಸ' ಇದಕ್ಕೆ ರೂ.5,000/- ಮತ್ತು ತೃತೀಯ ಬಹುಮಾನವು ಡಾ| ಕೊಳ್ಚಪ್ಪೆ ಗೋವಿಂದ ಭಟ್ ಮುಂಬಯಿ ಅವರ `ಗುರುತು' ರೂ. 3,000/- ಪ್ರಾಪ್ತಿಯಾಗಿದೆ. ಮೆಚ್ಚುಗೆ ಪಡೆದ ಕಥೆಗಳು (ತಲಾ ರೂ. 1,000/-) ಬಿ.ಎಸ್ ಶ್ರೀಧರ್ ಬೆಂಗಳೂರು ಅವರ `ಗಣಪತಿ ಬಪ್ಪಾ' ಮತ್ತು ರವಿಶಂಕರ್ ಜಿ.ಕೆ ಪಾಣಾಜೆ ಪುತ್ತೂರು ಅವರ `ಕಳೆದುಕೊಂಡವರು' ಇವರಿಗೆ ಸಂದಿದೆ.

ವಿಜೇತರಿಗೆ ಪ್ರಮಾಣಪತ್ರ ಹಾಗೂ ಬಹುಮಾನದ ಮೊತ್ತವನ್ನು (ಚೆಕ್ ಮುಖೇನ) ತ್ವರಿತ ಅಂಚೆ (ಸ್ಪೀಡ್ ಪೆÇೀಸ್ಟ್) ಮೂಲಕ ಕಳುಹಿಸಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸಿದ ಸರ್ವರಿಗೂ ಗೋಕುಲವಾಣಿ ಸಂಪಾದಕೀಯ ಮಂಡಳಿ ಧನ್ಯವದಿಸುತ್ತಾ ವಿಜೇತರಿಗೆ ಅಭಿನಂದನೆಗಳನ್ನೂ ಹಾಗೂ ತೀರ್ಪುಗಾರರಾದ ಡಾ| ಮಮತಾ ರಾವ್ ಅವರಿಗೆ ಕೃತಜ್ಞತೆ ಸಲ್ಲಿಸಿದೆ.

 

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here