ಮುಂಬಯಿ, ನ.13: 2019ನೇ ಸಾಲಿನಲ್ಲಿಜರಗಲಿರುವ ಶ್ರೀ ಮಂಜುನಾಥದೇವರ ಬ್ರಹ್ಮಕಲಶೋತ್ಸವದ ಅಂಗವಾಗಿ ಸ್ಥಾಪಿಸಲಾಗಿರುವ ಹುಂಡಿ ಹಾಗೂ ವಿಶೇಷ ಸೇವಾ ಕೌಂಟರ್ನ್ನು ಕಳೆದ ಸೋಮವಾರ ಬೆಳಗ್ಗೆ ಉದ್ಘಾಟಿಸಲಾಯಿತು.
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಜೆ. ಶೆಟ್ಟಿ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮಜರಗಿತು. ಮೇಯರ್ ಭಾಸ್ಕರ್, ಶಶಿಧರ್ ಹೆಗ್ಡೆ, ಅಶೋಕ್ ಡಿ.ಕೆ., ರೂಪಾ ಡಿ.ಬಂಗೇರ, ಸುಂದರ್ ಶೆಟ್ಟಿ, ಸುಧಾಕರ್ ರಾವ್ ಪೇಜಾವರ್, ವಿಠಲ ದಾಸತಂತ್ರಿ, ರಾಮಣ್ಣ ಅಡಿಗ, ರಾಘವೇಂದ್ರ ಭಟ್, ರತ್ನಾಕರ ಜೈನ್, ದೇವಳದ ಕಾರ್ಯನಿರ್ವಹಣಾ ಅಧಿಕಾರಿ ನಿಂಗಯ್ಯ ಹಾಗೂ ವ್ಯವಸ್ಥಾಪನಾ ಸಮಿತಿ ಸದಸ್ಯರು, ಶ್ರೀ ಮಂಜುನಾಥ ದೇವಸ್ಥಾನಕದ್ರಿ ಇದರ ಮಂಜುನಾಥ ದೇವರ ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಪ್ರದೀಪಕುಮಾರ ಕಲ್ಕೂರ, ಸಮಿತಿಯ ಇತರೇ ಪದಾಧಿಕಾರಿಗಳು, ಗಣ್ಯಾತಿಗಣ್ಯರು ಉಪಸ್ಥಿತರಿದ್ದರು