ಕುಂಜಾರುಗಿರಿ ಪಾಜಕದಲ್ಲಿರುವ ಆನಂದತೀರ್ಥ ವಿದ್ಯಾಲಯದಲ್ಲಿ "ಪುರಾಣದ ಕಥೆಗಳ ಮಹತ್ವ" ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವು ಡಿಸೆಂಬರ್ 5 ರಂದು ಜರುಗಿತು. ಉಪನ್ಯಾಸಕರಾಗಿ ಬೆಂಗಳೂರಿನ ಪಿಇಎಸ್ ಕಾಲೇಜಿನ ಸಂಸ್ಕೃತ ಪ್ರಾಧ್ಯಾಪಕ ಕೃಷ್ಣರಾಜ ಕುತ್ಪಾಡಿ ಆಗಮಿಸಿದ್ದರು . "ಭಾರತೀಯ ಪೌರಾಣಿಕ ಕಥೆಗಳು ಮಾನವೀಯತೆ ಮತ್ತು ಭಾರತೀಯತೆಯ ಅಂಶಗಳನ್ನು ಮನದಟ್ಟು ಮಾಡಿಸುತ್ತವೆ . ವಿಜ್ಞಾನ ಕ್ಷೇತ್ರಕ್ಕೆ ಜಗತ್ತಿಗೆ ಮೊತ್ತಮೊದಲಾಗಿ ಕೊಡುಗೆಯನ್ನಿತ್ತವರು ಶ್ರೀ ಮಧ್ವಾಚಾರ್ಯರು . ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಲು ಪುರಾಣ ಕಥೆಗಳು ಸಹಕಾರಿ " ಎಂದು ಅವರು ಅಭಿಪ್ರಾಯಪಟ್ಟರು .
ಕಾರ್ಯಕ್ರಮ ಸಂಯೋಜಕ ಯದುನಂದನ ಹೆಬ್ಬಾರ್ , ದತ್ತಾತ್ರೇಯ , ಸಂಸ್ಥೆಯ ಆಡಳಿತಾಧಿಕಾರಿ ಗುರುದತ್ ಸೋಮಯಾಜಿ , ಪ್ರಾಂಶುಪಾಲೆ ಗೀತಾ ಎಸ್ ಕೋಟ್ಯಾನ್ ಮತ್ತು ಶಿಕ್ಷಕ - ವಿದ್ಯಾರ್ಥಿ ವೃಂದದವರು ಉಪಸ್ಥಿತರಿದ್ದರು.