Thursday 28th, March 2024
canara news

ಕರ್ನಾಟಕ ಸಂಘ ಅಸಲ್ಫಾ ಇದರ ಕನ್ನಡ ವಿದ್ಯಾ ಭವನದ ನವೀಕೃತ ಶಾಲಾ ಕೊಠಡಿ ಉದ್ಘಾಟನೆ

Published On : 12 Dec 2018   |  Reported By : Rons Bantwal


ಕನ್ನಡದ ಕೀಳರಿಮೆ ಸಲ್ಲದು : ಕಡಂದಲೆ ಸುರೇಶ್ ಭಂಡಾರಿ
(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

ಮುಂಬಯಿ, ಡಿ.09: ನಾವು ಹುಟ್ಟಿಬೆಳೆದು ಸಾಧಕರಾಗಿ ಮೆರೆಯಲು ಪ್ರೇರಣಾಶಕ್ತಿಯಾದ ಕನ್ನಡ ಭಾಷೆಯ ಉಳಿವು ನಮ್ಮೆಲ್ಲರ ಪರ ಕರ್ತವ್ಯವಾಗಿದೆ. ಇದು ನಮ್ಮರಾಜ್ಯ ಭಾಷೆಯಾಗಿದ್ದು ರಾಷ್ಟ್ರದ ಎಂಟನೇ ಪರಿಚ್ಛೇಯದಲ್ಲಿ ಮೇರು ಭಾಷೆಯಾಗಿ ವಿಶ್ವದಾದ್ಯಂತ ಪಸರಿಸಿ ಕಂಗೋಳಿಸುತ್ತಿದೆ. ಹೊರನಾಡಿನಲ್ಲಿ ಇಂತಹ ಕನ್ನಡದ ಭಾಷೆ ಬಗ್ಗೆ ಕೀಳರಿಮೆ ಸಲ್ಲದು. ಒಳನಾಡ ಕರ್ನಾಟಕ ಬಿಟ್ಟರೆ ಹೊರನಾಡ ಮಹಾರಾಷ್ಟ್ರದಾದ್ಯಂತ ಲಕ್ಷಾಂತರ ಕನ್ನಡಿಗರುಯಿದ್ದು ವಿವಿಧತೆಯಲ್ಲಿ ಏಕತೆಯನ್ನು ಕಂಡುಕೊಂಡಿದ್ದಾರೆ. ಕನ್ನಡ ಭಾಷಿಕರ ಏಕತೆ ರಾಷ್ಟ್ರ ಭೂಪಟದಲ್ಲಿ ಅಗ್ರಣಿಯಾಗಿ ಶೋಭಿಸುತ್ತಿರಲು ಕರ್ನಾಟಕ ಸಂಘ ಅಸಲ್ಫಾ ಇಂತಹ ಸಂಸ್ಥೆಗಳ ಕೊಡುಗೆಯೂ ಅನುಪಮವಾದುದು. ಆದುದರಿಂದ ವ್ಯವಹಾರಿಕವಾಗಿ ಅಲ್ಲದಿದ್ದರೂ ಬದುಕಿನ ಭಾಗವಾಗಿ ಮಕ್ಕಳಲ್ಲಿ ಕನ್ನಡವನ್ನು ಬೆಳೆಸುವಲ್ಲಿ ಪಾಲಕರು, ಶಿಕ್ಷಕರು ಪ್ರಯತ್ನಿಸಬೇಕು ಎಂದು ನಾಡಿನ ಕನ್ನಡಾಭಿಮಾನಿ, ಕರ್ನಾಟಕ ಸಂಘ ಅಸಲ್ಫಾ ಇದರ ಅಧ್ಯಕ್ಷ ಕಡಂದಲೆ ಸುರೇಶ್ ಎಸ್.ಭಂಡಾರಿ ಕರೆಯಿತ್ತರು.

 

ಘಾಟ್ಕೋಪರ್ ಪಶ್ಚಿಮದ ಅಸಲ್ಫಾ ಇಲ್ಲಿನ ಎನ್‍ಎಸ್‍ಎಸ್ ರಸ್ತೆಯಲ್ಲಿನ ಕನ್ನಡ ವಿದ್ಯಾ ಭವನದ ನವೀಕೃತ ಶಾಲಾ ಕೊಠಡಿ ಉದ್ಘಾಟಿಸಿ ಮಾತನಾಡಿದ ಸುರೇಶ್ ಭಂಡಾರಿ, ಸಂಘಸಂಸ್ಥೆ, ಶಾಲೆಗಳನ್ನು ಆರಂಭಿಸುವುದು ಅತೀ ಸುಲಭ.ಆದರೆ ಸಮಯಕ್ಕನುಸಾರವಾಗಿ ಪರಿವರ್ತಿಸುತ್ತಾ ಮುನ್ನಡೆಸುವುದು ಬಹಳ ಕಷ್ಟ. ಅಸಲ್ಪಾ ಕ್ಷೇತ್ರದಲ್ಲಿ 1965ರಲ್ಲಿ ಆರಂಭವಾದ ಕನ್ನಡ ಶಾಲೆ. ಸುಮಾರು 800ವಿದ್ಯಾಥಿರ್üಗಳಿಂದ ತುಂಬಿ ತುಳುಕುತ್ತಿದ್ದ ಶಾಲೆಯ ಲ್ಲಿ ಇಂದು ಕೇವಲ 75 ವಿದ್ಯಾಥಿರ್üಗಳು ಅಭ್ಯಾಸ ನಿರತರಾಗಿದ್ದಾರೆ. ಕಟ್ಟಡದಲ್ಲಿ ನಾಲ್ಕು ತರಗತಿಗಳು ಸುಮಾರು 2000 ಚದರಡಿ ಕ್ಷೇತ್ರ ಫಲ. ಶಾಲಾ ಕಟ್ಟಡವನ್ನು ವಿದ್ಯಾಕೇಂದ್ರ ಅನ್ನಾಗಿಸಿಯೇ ಉಳಿಸಿಕೊಳ್ಳ ಬೇಕಾದರೆ ಕನ್ನಡ ಮಾಧ್ಯಮದೊಂದಿಗೆ ಇಂಗ್ಲೀಷ್ ಮಾಧ್ಯಮ ಶಾಲೆ ಆರಂಭಿಸಿದರೆ ಕಟ್ಟಡವು ತುಳು ಕನ್ನಡಿಗರ ಅಧೀನದಲ್ಲಿಯೇ ಇರಲು ಸಾಧ್ಯ. ಶಾಲೆ ಎಂಬುದು ಒಂದು ವಿದ್ಯಾಮಂದಿರ. ವಿದ್ಯಾರ್ಜನೆಗಾಗಿ ಅಲ್ಲಿ ಬರುವ ವಿದ್ಯಾಥಿರ್üಗಳು ದೇವರ ಮಕ್ಕಳಿದ್ದಂತೆ. ಶಾಲಾ ತರಗತಿಯಲ್ಲಿ ಸುಂದರವಾದ, ಶಾಂತ ಸುವ್ಯವಸ್ಥಿತ ವಾತಾವರಣ ನಿರ್ಮಿಸಿದರೆ ಮಕ್ಕಳು ಆನಂದದಿಂದ ಕಲಿಯುತ್ತಾರೆ, ಶಾಲೆಗೆ ತಪ್ಪದೆ ಬರುತ್ತಾರೆ. ಆ ದಿಸೆಯಲ್ಲಿ ಸಂಘದ ಕಾರ್ಯಕರ್ತರು ಈಗಾಗಲೇ ಒಂದು ತರಗತಿಯ ಸುಶೋಭಿತ ಗೊಳಿಸಿರುವುದು ನನಗೆ ಹೆಮ್ಮೆಯೆನಿಸಿದೆ ಎಂದರು.

ಕ್ಷೇತ್ರದ ನಗರ ಸೇವಕ ಕಿರಣ್ ಲಾಂಡ್ಗೆ ಅತಿಥಿüಯಾಗಿದ್ದು ಮಾತಾಡುತ್ತಾ ತಾನು ಬಾಲ್ಯದಲ್ಲಿ ತುಂಟಾಟ ಮಾಡುತ್ತಾ ಬೆಳೆದ ಈ ವಠಾರದ ಅಭಿವೃದ್ಧಿಗಾಗಿ ತನು-ಮನ ಧನದ ಸಹಕಾರ ನೀಡುವೆ ಎಂದು ಭರವಸೆ ನೀಡಿದರು.

ನಿಧಿ ಸಂಗ್ರಹಕ್ಕಾಗಿ ಬಿಡುಗಡೆ ಮಾಡಲಾದ ಲಕ್ಕೀಡಿಪ್ ಉದ್ದೇಶವನ್ನು ವಿವರಿಸಿ ಇನ್ನೂ ಮೂರು ವರ್ಗಗಳ ಸುಶೋಭಿಕರಣದ ಕಾರ್ಯವನ್ನು ಶೀಘ್ರದಲ್ಲಿ ಮಾಡಲು ಸಹಕರಿಸ ಬೇಕು. ಸಂಘದ ಕನ್ನಡ ಶಾಲೆಯ ಕಟ್ಟಡದಲ್ಲಿ ಇಂಗ್ಲೀಷ್ ಮಾಧ್ಯಮ ಶಾಲೆಯನ್ನು ಆರಂಭಿಸುವರೇ ಮುಂಬಯಿನ ಆಸಕ್ತ ಮತ್ತು ನುರಿತ ವಿದ್ಯಾಭಿಮಾನಿ ಆಡಳಿತಗಾರರು ಸಂಘದ ಪದಾಧಿಕಾರಿಗಳನ್ನು ಭೇಟಿಯಾಗ ಬಹುದು ಎಂದು ಕಾರ್ಯದರ್ಶಿ ಎಂ.ಪದ್ಮನಾಭ ಸಪಲಿಗ ವಿಂತಿಸಿದರು.

ಕನ್ನಡ ಶಾಲೆಯ ನಿವೃತ್ತ ಪ್ರಾಧ್ಯಾಪಕಿ ಹಾಗೂ ಸಂಘದ ಉಪಾಧ್ಯಕ್ಷೆ ಯಶೋಧಾ ಬಟ್ಟಪಾಡಿ ಕಾರ್ಯಕರ್ತರ ಪರಿಶ್ರಮವನ್ನು ಶ್ಲಾಘಿಸಿದರು. ಅಧ್ಯಕ್ಷ ಸುರೇಶ್ ಭಂಡಾರಿ ನೇತೃತ್ವದಲ್ಲಿ ಈ ವಿದ್ಯಾಭವನದಲ್ಲಿ ಇಂಗ್ಲೀಷ್ ಮಾಧ್ಯಮ ಶಾಲೆ ಆರಂಭಿಸುವ ಪ್ರಕ್ರಿಯೆ ಶೀಘ್ರಗತಿಯಲ್ಲಿ ಆಗಬೇಕಾಗಿದೆ ಎಂದು ಆಶಯ ವ್ಯಕ್ತಪಡಿಸಿದರು.

ಸರಸ್ವತಿ ಮಾತೆಗೆ ಪೂಜೆ ನೆರವೇರಿಸಿ ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಲ್ಪಟ್ಟಿತು. ಪುಟ್ಟ ಮಕ್ಕಳ ಹಸ್ತಗಳಿಂದ ಅಧ್ಯಕ್ಷರು ಲಕ್ಕೀಕೂಪನ್ ಡ್ರಾ ಮಾಡಿ ವಿಜೇತರ ಹೆಸರುಗಳನ್ನು ಪ್ರಕಟಿಸಿ ಶುಭ ಹಾರೈಸಿದರು. ಹಾಗೂ ಧನ ಸಂಗ್ರಹದ ಕಾರ್ಯದಲ್ಲಿ ಶ್ರಮಿಸಿದ ಕಾರ್ಯಕರ್ತರು, ನವೀಕರಣ ಕಾರ್ಯದಲ್ಲಿ ಸಹಕರಿಸಿದ ಸುಧಾಕರ್ ಶೆಟ್ಟಿ, ಸತೀಶ್ ಶೆಟ್ಟಿ, ವಿಶ್ವನಾಥ ದೊಡ್ಮನೆ, ರಾಜವರ್ಮ ಜೈನ್, ಶ್ರೀಕಾಂತ್ ಸಫಲಿಗ ಅವರನ್ನು ಪುಷ್ಪಗುಚ್ಛ ನೀಡಿ ಸನ್ಮಾನಿಸಿದರು. ಸದಾನಂದ ಸಫಲಿಗ ಕಾರ್ಯಚಟುವಟಿಕೆಗಳನ್ನು ಸ್ಥೂಲವಾಗಿ ತಿಳಿಸಿ ಕಾರ್ಯಕ್ರಮ ನಿರ್ವಹಿಸಿದರು. ಉಪಾಧ್ಯಕ್ಷ ಜಯರಾಂ ಜಿ.ರೈ ಸ್ವಾಗತಿಸಿ ಧನ್ಯವದಿಸಿದರು.

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here