Thursday 25th, April 2024
canara news

ಮಹಾರಾಷ್ಟ್ರ ಕುರುಬರ ಸಂಘ ಸಂಭ್ರಮಿಸಿದ 531ನೇ ದಾಸಶ್ರೇಷ್ಠ ಕನಕದಾಸರ ಜಯಂತೋತ್ಸವ

Published On : 27 Dec 2018   |  Reported By : Rons Bantwal


ಕನಕದಾಸರ ಕೀರ್ತನೆಗಳು ಸರ್ವಕಾಲಿಕ ಶ್ರೇಷ್ಠವು : ಸಚಿವ ಮಹಾದೇವ್ ಜಾನಕರ್
(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ, ಡಿ.25: ಸಮ ಸಮಾಜದ ನಿರ್ಮಾಣಕ್ಕೆ ಹಾಗೂ ಸಮುದಾಯದ ಸಮಗ್ರ ಬೆಳವಣಿಗೆಗೆ ತೊಡಕಾಗಿರುವ ಜಾತಿ ವ್ಯವಸ್ಥೆಯನ್ನು ಕಿತ್ತೊಗೆದಾಗ ಮಾತ್ರ ಉತ್ತಮ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂಬ ಸರ್ವಶ್ರೇಷ್ಠ ಸಂದೇಶವನ್ನು ತಮ್ಮ ಕೀರ್ತನೆಗಳ ತಿಳಿಸಿಕೊಡುವ ಮೂಲಕ ಸಮಾಜದ ಬದಲಾವಣೆಗೆ ಶ್ರಮಿಸಿದ ಕನಕದಾಸರ ಕೀರ್ತನೆಗಳು ಸರ್ವಕಾಲಿಕ ಶ್ರೇಷ್ಠವಾಗಿದೆ ಎಂದು ಮಹಾರಾಷ್ಟ್ರ ಸರಕಾರದ ಪಶುವೈದ್ಯ ಹಾಗೂ ಹೈನುಗಾರಿಕೆ, ಮೀನುಗಾರಿಕೆ ಅಭಿವೃದ್ಧಿ ಸಚಿವ ಮಹಾದೇವ್ ಜಾನಕರ್ ಹೇಳಿದರು.

ಇತ್ತೀಚೆಗೆ ಮುಂಬಯಿ ಮಹಾನಗರದ ಮಸ್ಜಿದ್‍ಬಂದರ್ ಇಲ್ಲಿನ ದರಿಯಸ್ತನ್ ಮಂದಿರದಲ್ಲಿ ಮಹಾರಾಷ್ಟ್ರ ಕುರುಬರ ಸಂಘದ ಅಧ್ಯಕ್ಷ ಮಂಜೇ ಚಿಕ್ಕೇಗೌಡ ಅವರ ಅಧ್ಯಕ್ಷತೆ ಹಾಗೂ ಚೆಂಬೂರು ಶ್ರೀ ಶನೇಶ್ವರ ದೇವಾಲಯದ ಧರ್ಮಾಧಿಕಾರಿ ಕೆ.ಎಂ ರಾಮಸ್ವಾಮಿ ಆಶೀರ್ವಚನದೊಂದಿಗೆ ಕುರುಬರ ಸಂಘವು 531ನೇ ದಾಸಶ್ರೇಷ್ಠ ಕನಕದಾಸರ ಜಯಂತೋತ್ಸವ ಆಚರಿಸಿದ್ದು ಕಾರ್ಯಕ್ರಮ ಉದ್ಘಾಟಿಸಿ ಸಚಿವ ಜಾನಕರ್ ಮಾತನಾಡಿದರು.

ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲಯನೇನದರೂ ಬಲ್ಲಿರ ಎಂಬ ಕನಕದಾಸರ ಅದ್ಬುತ ಕೀರ್ತನೆಯ ಸಾಲು ಜಾತಿ ವ್ಯವಸ್ಥೆಯನ್ನು ಕಿತ್ತು ಹಾಕಲು ಸಹಕಾರಿಯಾಗುತ್ತದೆ. ಹುಟ್ಟುವಾಗ ನಾವೆಲ್ಲರೂ ಬರಿಗೈಯಲ್ಲಿ ಬರುತ್ತೇವೆ. ಹೋಗುವಾಗಲು ಬರಿಗೈಯ್ಯಲ್ಲಿ ಹೋಗುತ್ತೇವೆ ಆದರೆ ಇರುವ ಮಧ್ಯೆ ಏಕೆ ಜಾತಿ, ಮತ, ಪಂಥ, ಧರ್ಮ ಏಕೆ ಬೇಕು ಎಂದು ಕನಕದಾಸರು ಜಾತಿ ಜಾತಿ ಎಂದು ಬಡಿದಾಡುವವರಿಗೆ 500ವರ್ಷಗಳ ಕಿವಿ ಮಾತು ಹೇಳಿದ್ದಾರೆ. ಆದರೆ ಇಂದಿಗೂ ಜಾತಿ ವ್ಯವಸ್ಥೆ ದೂರವಾಗದೇ ಇರುವುದು ಸರಿಯಲ್ಲ ಎಂದರು. ಶೋಷಿತ ಸಮುದಾಯದಿಂದ ಬಂದ ಶ್ರೇಷ್ಠ ಸಂತ ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜದ ಏಳಿಗೆಯನ್ನು ಮುಖ್ಯ ಗುರಿಯನ್ನಾಗಿಸಿಕೊಂಡು ಉತ್ತಮ ನೂರಾರು ಕೀರ್ತನೆಗಳನ್ನು ಬರೆದಿದ್ದಾರೆ. ಕನಕದಾಸರ ಶ್ರೇಷ್ಠ ಸಂದೇಶ ಸಾರುವ ಕೀರ್ತನೆಗಳನ್ನು ಮೇಲ್ವರ್ಗದ ಪುರಂದರದಾಸರು ಬರೆದಿದ್ದಾರೆ ಎಂದು ಬಿಂಬಿಸುವ ಪ್ರಯತ್ನಗಳು ನಡೆಯುತ್ತಿದೆ ಹಾಗಾಗಿ ಸಾಹಿತ್ಯ ಸಂಶೋಧಕರು ಇದನ್ನು ತಡೆಯುವ ಮೂಲಕ ಕನಕ ದಾಸರ ಕೀರ್ತನೆಗಳನ್ನು ಅವರ ಹೆಸರಿನಲ್ಲಿಯೇ ಉಳಿಯುವಂತೆ ಅಗತ್ಯ ಕ್ರಮ ವಹಿಸಬೇಕಾದ ಅಗತ್ಯವಿದೆ. ಸಮಾಜದಲ್ಲಿ ಜಾತಿಯ ಹೆಸರಿನಲ್ಲಿ ನಡೆಯುತ್ತಿದ್ದ ದೌರ್ಜನ್ಯ ದಬ್ಬಾಳಿಕೆ ವಿರುದ್ಧ ತಮ್ಮ ವಚನಗಳ ವಿರುದ್ದ ಹೋರಾಟ ಮಾಡಿದರು. ಶೋಷಿತ ಸಮಾಜವನ್ನು ಜಾಗೃತಿಗೊಳಿಸುವ ಕೆಲಸ ಮಾಡಿದರು. ಅಲ್ಲದೆ ಜಗಜ್ಯೋತಿ ಬಸವಣ್ಣನಂತೆಯೇ ಕನಕದಾಸರೂ ಸಹ ಜಾತಿ ಪದ್ಧತಿಯ ವಿರುದ್ಧ ತಮ್ಮ ವೈಚಾರಿಕ ಅಭಿಪ್ರಾಯವನ್ನು ಸ್ಪಷ್ಠವಾಗಿ ಹೇಳುವ ಮೂಲಕ ಸಮಾಜದ ಅಭಿವೃದ್ಧಿ ಜಾತಿಗಳು ನಾಶವಾಗಬೇಕು. ಎಂಬುದನ್ನು ಸಮಾಜಕ್ಕೆ ತೋರಿಸಿಕೊಟ್ಟಿರುವ ಸಾಮಾಜಿಕ ಕ್ರಾಂತಿಯ ಹರಿಕಾರ ಭಕ್ತ ಕನಕದಾಸರು ಕನಕದಾಸರು ಕೇವಲ ಒಂದೇ ಒಂದು ಸಮಾಜಕ್ಕೆ ಸೀಮಿತರಾದವರಲ್ಲ ಹಾಗಾಗಿ ಕನಕದಾಸರ ತತ್ವಾದರ್ಶಗಳು ಹಾಗೂ ಸಂದೇಶಗಳನ್ನು ಸಮಾಜದ ಪ್ರತಿಯೊಬ್ಬರೂ ಪಾಲಿಸುವ ಮೂಲಕ ಕನಕದಾಸರ ಆಶಯದಂತೆ ಜಾತಿ ರಹಿತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು. ನಮ್ಮ ಕುರುಬ ಸಮಾಜವು ದೇಶಾದ್ಯಂತ ಸುಮಾರು 18ಕೋಟಿಗೂ ಹೆಚ್ಚು ಜನಸಂಖ್ಯೆ ಇದೆ. ನಮ್ಮ ಸಮಾಜಕ್ಕೆ ರಾಜಕೀಯ ಸ್ಥಾನ ಮಾನಗಳು ಇನ್ನೂ ಹೆಚ್ಚು ಸಿಗಬೇಕು. ನಮ್ಮ ಸಮಾಜವು ಅಖಿಲ ಭಾರತ ಮಟ್ಟದಲ್ಲಿ ಸಂಘಟಿತರಾಗುವ ಮೂಲಕ ನಮ್ಮ ಸಮಾಜದ ಹಿರಿಯ ನಾಯಕ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಾಷ್ಟ್ರ ಮಟ್ಟದಲ್ಲಿ ನಾಯಕನ್ನಾಗಿ ರೂಪಿಸಿದರೆ ನಮ್ಮ ಸಮಾಜವು ಹೆಚ್ಚಿನ ಅಭಿವೃದ್ಧಿ ಸಾಧಿಸಲು ಸಾಧ್ಯವಾಗುತ್ತದೆ. ನಮ್ಮ ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಬಂದು ನೆಲೆ ನಿಂತಿರುವ ಕನ್ನಡಿಗರು ಸಂಘಟಿತರಾಗಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಇದು ಅಭಿವೃದ್ಧಿಯ ದಿಕ್ಕಿನತ್ತ ಸಾಗಲು ಉತ್ತಮ ದಾರಿಯಾಗಿದೆ ಎಂದು ಸಚಿವ ಮಹಾದೇವ್ ಜಾನಕರ್ ಹೇಳಿದರು.

ಹಿಂದುಳಿದ ವರ್ಗಗಳು ಅಭಿವೃದ್ಧಿಯಾಗಬೇಕಾದರೆ ಮೊದಲು ಸಂಘಟಿತರಾಗಬೇಕು ಹಾಗೂ ಕಡ್ಡಾಯವಾಗಿ ಶಿಕ್ಷಣ ಪಡೆದುಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಸಂಘಟಿತರಾಗಿ ತಮಗೆ ಸಂವಿಧಾನ ಬದ್ದವಾಗಿ ಸಿಗಬೇಕಾದ ಸೌಲಭ್ಯಗಳನ್ನು ಕೇಳಿ ಪಡೆದುಕೊಳ್ಳಬೇಕು ಎಂದು ರಾಮಸ್ವಾಮಿ ನೆರೆದ ಸದ್ಭಕ್ತರನ್ನು ಹರಸಿದರು.

ಆರ್‍ಎಸ್‍ಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಕ್ಕಿಸಾಗರ್, ಮಸ್ಜಿದ್ ಬಂದರ್ ಕಾಂಗ್ರೆಸ್ ಕಿಮಿಟಿ ಅಧ್ಯಕ್ಷ ವಿನೋದ್ ದೇವಿಚ್ಚಾ, ವಲ್ಲಿ ಎಂ.ಶೇಖ್, ಅಮಾನ್ ಬೈ, ಕುಮಾರ್, ಮಂಡ್ಯ ಜಿಲ್ಲಾ ಪಂಚಾಯಿತಿ ಸದಸ್ಯ ಕೋಡಿಮಾರನಹಳ್ಳಿ ದೇವರಾಜು, ಕೆ.ಆರ್ ಪೇಟೆ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಆರ್.ರವೀಂದ್ರಬಾಬು, ರಾಷ್ಟ್ರೀಯ ಭಾರತ್ ಜ್ಯೋತಿ ಸರ್ವೋತ್ಕೃಷ್ಟ ಪ್ರಶಸ್ತಿ ಪುರಸ್ಕøತ ಕೆ.ಆರ್ ಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಡಾ| ಮೀನಾಕ್ಷಿ ರಮೇಶ್, ಕೆ.ಆರ್.ಪೇಟೆ ತಾಲೂಕು ಕಬ್ಬು ಬೆಳೆಗಾರರ ಸಂಘದ ಉಪಾಧ್ಯಕ್ಷ ಹಾಗೂ ತಾಲೂಕು ಪಂಚಾಯಿತಿ ಸದಸ್ಯ ಸಣ್ಣನಿಂಗೇ ಗೌಡ, ಕೆ.ಆರ್ ಪೇಟೆ ಪುರಸಭೆಯ ಮಾಜಿ ಸದಸ್ಯ ಸ್ನೇಹಿತರಮೇಶ್, ಮಹಾರಾಷ್ಟ್ರ ಕುರುಬರ ಸಂಘದ ಉಪಾಧ್ಯಕ್ಷ ಯೋಗೇಶ್ ಸಣ್ಣಪ್ಪಗೌಡ, ಶಿವ ಪುಟ್ಟೇಗೌಡ, ಕೋಶಾಧಿಕಾರಿ ಗಂಗಾಧರ ಕಾಳೇಗೌಡ, ಹೆಚ್.ಕೆ ಮಂಜೇಗೌಡ, ಸಲಹೆಗಾರ ಉಮೇಶ್ ಕಾಳೇಗೌಡ, ನಿರ್ದೇಶಕರಾದ ದೇವರಾಜು ಬೀರೇಗೌಡ, ಮಂಜೇಗೌಡ, ರಮೇಶ್ ನಂಜೇಗೌಡ, ಉಮೇಶ್ ಅಣ್ಣಪ್ಪ ಗೌಡ, ಷಣ್ಮುಖ (ಮುತ್ತಣ್ಣ) ದೊಡ್ಡೇಗೌಡ, ರವಿ ಜವರೇಗೌಡ, ಉದ್ಯಮಿ ರಮೇಶ್‍ಗೌಡ, ಅಣ್ಣೇ ಚೌಡೇನಹಳ್ಳಿ ರವಿಗೌಡ, ಉಪಾಧ್ಯಕ್ಷೆ ರತ್ನಮ್ಮ ಆರ್, ಗೌಡ, ಕಾರ್ಯದರ್ಶಿ ಸರಸ್ವತಿ ಆರ್.ಮಂಡಲ್ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ವಿವಿಧ ಸಂಘ ಸಂಸ್ಥೆಗಳ ಹಾಗೂ ಸಮಾಜದ ಮುಖಂಡರು ಹಾಗೂ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮಕ್ಕೂ ಮುನ್ನ ಕನಕದಾಸರ ಭಾವಚಿತ್ರವನ್ನು ಪ್ರಮುಖ ರಸ್ತೆಗಳಲ್ಲಿ ಪೂರ್ಣಕುಂಭ ಮೆರವಣಿಗೆ ಹಾಗೂ ವಿವಿಧ ಜಾನಪದ ಕಲಾತಂಡಗಳೊಂದಿಗೆ ಭವ್ಯ ಮೆರವಣಿಗೆಯೊಂದಿಗೆ ವೇದಿಕೆಗೆ ತರಲಾಯಿತು. ಗೌರವ ಕಾರ್ಯದರ್ಶಿ ರವಿಕುಮಾರ್ ಕಾಳೇಗೌಡ ಸ್ವಾಗತಿಸಿದರು. ಅಮೃತಾಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ಘಟಕಧ್ಯಕ್ಷೆ ರೇಷ್ಮಾಪಿ.ಗೌಡ ವಂದಿಸಿದರು. ಬೆಂಗಳೂರಿನ ಹೆಸರಾಂತ ಗಾಯಕರಾದ ಶಿವಕುಮಾರ್‍ಎಂ.ಮೌರ್ಯ ಮತ್ತು ಸಂಗಡಿಗರು ಕನಕದಾಸರ ಕೀರ್ತನೆಗಳನ್ನು ಪ್ರಸ್ತುತಪಡಿಸಿದರು.

 

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here