Thursday 25th, April 2024
canara news

ಪತ್ರಿಕಾ ಛಾಯಾಚಿತ್ರಕಾರ ರವೀಂದ್ರ ಝೆಂಡೆ ನಿಧನ

Published On : 23 Feb 2019   |  Reported By : Rons Bantwal


ಮುಂಬಯಿ, ಫೆ. 22: ಮಹಾನಗರದಲ್ಲಿನ ಪತ್ರಿಕಾ ಛಾಯಾಚಿತ್ರಕಾರ ರವೀಂದ್ರ ಆರ್.ಝೆಂಡೆ (53.) ಇವರು ಅನಾರೋಗ್ಯದಿಂದ ಇಂದಿಲ್ಲಿ (ಫೆ.22) ಶುಕ್ರವಾರ ಸಯಾನ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ತನ್ನ ಸಾಂದರ್ಭಿಕ ಮತ್ತು ಆಧುನಿಕ ಛಾಯಾಚಿತ್ರಗಳ ಮೂಲಕ ಮುದ್ರಣ ಮಾಧ್ಯಮದಲ್ಲಿ ಗುರುತಿಸಿ ಕೊಂಡಿದ್ದ ಝೆಂಡೆ ಉದಯವಾಣಿ, ಫ್ರೀಪ್ರೆಸ್ ಜರ್ನಲ್, ಕರ್ನಾಟಕ ಮಲ್ಲ ಸೇರಿದಂತೆ ಮಹಾನಗರದಿಂದ ಪ್ರಕಾಶಿತ ವಿವಿಧ ಭಾಷೆಗಳ ವಿವಿಧ ದೈನಿಕಗಳಿಗೆ ನಗರದಲ್ಲಿ ನಡೆಯುತ್ತಿರುವ ವಿವಿಧ ಘಟನೆ, ಸಮಾರಂಭ, ಪತ್ರಿಕಾಗೋಷ್ಠಿಗಳ ಛಾಯಾಚಿತ್ರಗಳನ್ನು ಒದಗಿಸುತ್ತಿದ್ದರು.

ಹಲವು ಪತ್ರಿಕೆಗಳ ಸಂಪಾದಕರು, ಭಾತ್ಮಿದಾರರ ನಿಕಟ ಸಂಪರ್ಕ ಹೊಂದಿದ್ದ ಝೆಂಡೆ ಸರಳ ಸಜ್ಜನಿಕೆಯ ವ್ಯಕ್ತಿತ್ವವುಳ್ಳವರಾಗಿದ್ದರು. ಮಹಾರಾಷ್ಟ್ರ ಸಾಂಗ್ಳಿ ಜಿಲ್ಲೆಯ ಖಾನಾಪುರ್ ಬಲೋಡಿ ಮೂಲದವರಾಗಿದ್ದು ಕಳೆದ ಅನೇಕ ವರ್ಷಗಳಿಂದ ಮಾಟುಂಗಾ ಪೂರ್ವದ ಲೇಬರ್ ಕ್ಯಾಂಪ್‍ನಲ್ಲಿ ವಾಸವಾಗಿದ್ದರು. ಮೃತರು ಪತ್ನಿ, ಒಂದು ಗಂಡು ಸೇರಿದಂತೆ ಬಂಧುಗಳು, ಪತ್ರಕರ್ತ ಬಳಗ ಅಗಲಿದ್ದಾರೆ.

 

 

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here