ಮುಂಬಯಿ, ಮಾ.16: ಮಹಾನಗರದಲ್ಲಿನ ಸಮುದಾಯದ ಪ್ರತಿಷ್ಠಿತ ಸಂಸ್ಥೆಯಲ್ಲೊಂದಾದ ರಾಮರಾಜ ಕ್ಷತ್ರೀಯ ಸೇವಾ ಸಂಘ ಮುಂಬಯಿ ಮಹಿಳಾ ವಿಭಾಗದ 2019-2021ರ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಸಂಘದ ಅಧ್ಯಕ ರಾಜ್ಕುಮಾರ್ ಕಾರ್ನಾಡ್ ಅವರ ಅಧ್ಯಕ್ಷತೆಯಲ್ಲಿ ಜರುಗಿದ್ದು, ಶ್ರೀಮತಿ ಶ್ರೇಯಾ ಸಂತೋಷ್ ರಾವ್ ಅವರು ನೂತನ ಕಾರ್ಯಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.
Arathi N.Rao (Secretary) Kavitha R.Rao (Treasurer)
Shreya S.Rao (President)
ಮಹಿಳಾ ವಿಭಾಗದ ಉಪಾಧ್ಯಕ್ಷೆಯಾಗಿ ಶ್ರೀಮತಿ ಗಾಯತ್ರೀ ಹೇಮಂತ್ ರಾವ್, ಕಾರ್ಯದರ್ಶಿ ಆಗಿ ಶ್ರೀಮತಿ ಆರತಿ ನರೇಂದ್ರ ರಾವ್, ಕೋಶಾಧಿಕಾರಿ ಆಗಿ ಶ್ರೀಮತಿ ಕವಿತಾ ರಾಜೇಂದ್ರ ರಾವ್, ಜೊತೆ ಕಾರ್ಯದರ್ಶಿಯಾಗಿ ಶ್ರೀಮತಿ ಧನಂಜಯ ರಾವ್ ಮತ್ತು ಶ್ರೀಮತಿ ಕೀರ್ತನಾ ರೂಪೇಶ್ ರಾವ್ ಜೊತೆ ಕೋಶಾಧಿಕಾರಿ ಆಯ್ಕೆ ಗೊಂಡರು.
ಮಹಿಳಾ ವಿಭಾಗದ 2019-2021ರ ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀಮತಿ ರೀನಾ ಕೆ.ಬೋಳಾರ್, ಶ್ರೀಮತಿ ವೀಣಾ ಸಂತೋಷ್ ರಾವ್, ಶ್ರೀಮತಿ ಧನಲಕ್ಷ್ಮೀ ರಾಜ್ಕುಮಾರ್ ಕಾರ್ನಾಡ್, ಶ್ರೀಮತಿ ಚಿತ್ರಾ ಎಂ.ರಾವ್, ಶ್ರೀಮತಿ ಪ್ರಜ್ಞ ಸುಹಾಸ್ ರಾವ್, ಶ್ರೀಮತಿ ಸಪ್ನಾ ಯು.ಬೆಕಾಲ್, ಶ್ರೀಮತಿ ಕಾಂತಿ ವಿನೋದ್ ರಾವ್, ಶ್ರೀಮತಿ ನಿಶಾ ಸುಮಿತ್ ರಾವ್, ಶ್ರೀಮತಿ ರಾಜಶ್ರೀ ಆನಿಲ್ ರಾವ್, ಶ್ರೀಮತಿ ಜಯಶ್ರೀ ಕುಂಬ್ಲ, ಶ್ರೀಮತಿ ದೀಪಿಕಾ ರಾಘವೇಂದ್ರ ರಾವ್, ಶ್ರೀಮತಿ ಮನಿಷಾ ನಿತ್ಯಾನಂದ ರಾವ್ ಮೊದಲಾದವರು ನೇಮಕಗೊಂಡಿದ್ದಾರೆ.