ಮಕ್ಕಳು ತಮ್ಮ ರಜೆಯ ಸಂಧರ್ಭ ಮನೆಯಲ್ಲಿಯೇ ಕಾಲಹರಣ ಮಾಡುವುದಕ್ಕಿಂತ ಗ್ರಾಮೀಣ ಭಾಗದಲ್ಲಿ ನಡೆಯುವ ಇಂತಹ ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡರೆ ತುಂಬಾ ಪ್ರಯೋಜನಕಾರಿಯಾಗಬಲ್ಲದು ಎಂದು ಕೆಮ್ರಾಲ್ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಮೇಶ್ ರಾಥೋಡ್ ಹೇಳಿದರು.
ಅವರು ಪಕ್ಷಿಕೆರೆ ಸಮೀಪದ ಕೆಮ್ರಾಲ್ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಕಲಾತರಂಗ್ ವತಿಯಿಂದ ನಡೆದ ಬೇಸಿಗೆ ಶಿಬಿರದ ಅಧ್ಯಕ್ಷತೆಯನ್ನು ಮಾತನಾಡಿದರು.ಪ್ರತಿಯೊಂದು ಮಕ್ಕಳಲಿಯೂ ಬೇರೆ ಬೇರೆ ರೀತಿಯ ಪ್ರತಿಭೆಗಳಿದ್ದು,ಅದನ್ನು ಹೊರತರುವ ಕೆಲಸ ಇಂತಹ ಶಿಬಿರಗಳಿಂದ ನಡೆಯಬೇಕು ಎಂದರು.
ಕೆಮ್ರಾಲ್ ಗ್ರಾಮ ಪಂಚಾಯತ್ ಅಧ್ಯಕ್ಷ ನಾಗೇಶ್ ಬೊಳ್ಳೂರು ಶಿಬಿರವನ್ನು ಉದ್ಘಾಟಿಸಿದರು.
ಈ ಸಂಧರ್ಭ ಕಲಾತರಂಗ್ ಸಂಸ್ಧೆಯ ನಿತಿನ್ ವಾಸ್ ಪಕ್ಷಿಕೆರೆ.ಪಕ್ಷಿಕೆರೆ ವಿನಾಯಕ ಮಿತ್ರ ಮಂಡಳಿ ಅಧ್ಯಕ್ಷ ಉಮೇಶ್ ಶೆಟ್ಟಿಗಾರ್.ಕೆಮ್ರಾಲ್ ಯುವಕ ಮಂಡಲ ಅಧ್ಯಕ್ಷ ಅರುಣ್ ಮತ್ತಿತರರು ಉಪಸ್ಧಿತರಿದ್ದರು