ಪುನರೂರು ಪ್ರತಿಷ್ಟಾನ ಆಶ್ರಯದಲ್ಲಿ ಜನ ವಿಕಾಸ ಸಮಿತಿ ಮೂಲ್ಕಿ ಇದರ ಸಹಕಾರದಲ್ಲಿ ಬಾಲ ವಿಕಾಸ ಶಿಬಿರ-೨೦೧೯ ಪುನರೂರು ಶ್ರೀ ವಿಶ್ವನಾಥ ದೇವಸ್ಧಾನದ ಸಭಾಂಗಣದಲ್ಲಿ ನಡೆಯಿತು.
ಶಿಬಿರವನ್ನು ಮೂಲ್ಕಿ ಕೆ.ಪಿ.ಎಸ್.ಕೆ ಸ್ಮಾರಕ ಪ್ರೌಡಶಾಲೆಯ ಮುಖ್ಯೋಪಾಧ್ಯಾಯ ನಾಗಭೂಷಣ ರಾವ್ ಉದ್ಘಾಟಿಸಿ ಶುಭ ಹಾರೈಸಿದರು.
ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಳದ ಅನುವಂಶಿಕ ಅರ್ಚಕ ವೇದಮೂರ್ತಿ ಲಕ್ಷ್ಮೀನಾರಾಯಣ ಅಸ್ರಣ್ಣ ಆಶೀರ್ವಚನ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುನರೂರು ಪ್ರತಿಷ್ಟಾನದ ಗೌರವಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಂಗಳೂರು ಉದ್ಯಮಿ ಪಟೇಲ ವಾಸುದೇವ ರಾವ್.ಕಿನ್ನಿಗೋಳಿ ಯುಗಪುರುಷ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ.ಶ್ರೀ ವಿಶ್ವನಾಥ ದೇವಳದ ಪ್ರಧಾನ ಅರ್ಚಕರಾದ ಗುರುಮೂರ್ತಿ ಭಟ್.ಪುನರೂರು ಪ್ರತಿಷ್ಟಾನದ ಗೌರವಧ್ಯಕ್ಷೆ ಶ್ರೀಮತಿ ಎಚ್.ಕೆ ಉಷಾರಾಣಿ.ಪುನರೂರು ಪ್ರತಿಷ್ಟಾನದ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಶ್ರೇಯಾ ಪುನರೂರು ಮತ್ತಿತರರು ಉಪಸ್ಧಿತರಿದ್ದರು.
ಪುನರೂರು ಪ್ರತಿಷ್ಟಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು ಪ್ರಸ್ತಾವನೆಗೈದು ಸರ್ವರನ್ನು ಸ್ವಾಗತಿಸಿದರು